ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಸುದ್ದಿಗಳು > ಉತ್ಥಾನ ಕಾಲೇಜು ವಿದ್ಯಾರ್ಥಿಗಳ ಪ್ರಬಂಧ ಸ್ಪರ್ಧೆ 2017ರ ಫಲಿತಾಂಶ 

ಉತ್ಥಾನ ಕಾಲೇಜು ವಿದ್ಯಾರ್ಥಿಗಳ ಪ್ರಬಂಧ ಸ್ಪರ್ಧೆ 2017ರ ಫಲಿತಾಂಶ 

ಉತ್ಥಾನ ಮಾಸಪತ್ರಿಕೆ ಕಾಲೇಜು ವಿದ್ಯಾರ್ಥಿಗಳಿಗಾಗಿ ಸ್ವಾತಂತ್ರ್ಯದ ನಾಳೆಗಳು : ಕ್ಯಾಂಪಸ್ ನ ಒಳಗೆ-ಹೊರಗೆ ಎಂಬ ವಿಷಯದ ಪ್ರಬಂಧ ಸ್ಪರ್ಧೆಯನ್ನು ನಡೆಸಿದೆ. ಇದರ ಫಲಿತಾಂಶ ಇದೀಗ ಹೊರಬಂದಿದ್ದು ಕುಮುಟಾದ ಡಾ|| ಎ.ವಿ. ಬಾಳಿಗಾ ಕಾಲೇಜ್ ಆಫ್ ಆಟ್ಸ್ ಆಂಡ್ ಸೈನ್ಸ್ ಕಾಲೇಜಿನ ಸಂಗೀತಾ ಶೆಟ್ಟಿ ಅವರು  ಮೊದಲ ಬಹುಮಾನ ಗಳಿಸಿದ್ದಾರೆ.

ಪುತ್ತೂರಿನ ವಿವೇಕಾನಂದ ಕಾಲೇಜಿನ ಸಾಯಿಶ್ರೀಪದ್ಮ ಡಿ.ಎಸ್.  ಅವರು ಎರಡನೇ ಬಹುಮಾನವನ್ನು ಗಳಿಸಿದ್ದಾರೆ.

ತೃತೀಯ ಬಹುಮಾನವನ್ನು ಬೆಂಗಳೂರಿನ ವಿಕೆಐಟಿಯ ಪವನ ಎಮ್. ಹಾಗೂ ಪುತ್ತೂರಿನ ವಿವೇಕಾನಂದ ಕಾಲೇಜಿನ ಶ್ರೀರಾಮನಂದನ ಪಿ.  ಅವರು ಪಡೆದಿದ್ದಾರೆ.

ಬೆಂಗಳೂರಿನ ಪೆಸೆಟ್ ಕಾಲೇಜಿನ ಮಾನಸಾ ಎಮ್ ಹೆಗ್ಡೆ  ಅವರು ಮೆಚ್ಚುಗೆಯ ಬಹುಮಾನವನ್ನು ಪಡೆದರು.

ರಾಜ್ಯದ 36 ಪ್ರತಿಷ್ಠಿತ ಕಾಲೇಜುಗಳಿಂದ ಪ್ರಬಂಧಗಳು ಆಗಮಿಸಿದ್ದವು. ಮೊದಲನೇ ಹಂತವಾಗಿ ಚಿತ್ರದುರ್ಗದ ಎಂ.ಎಂ.ಎಫ್.ಜಿ. ಕಾಲೇಜಿನ ತತ್ತ್ವಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಕೆ. ರಾಜೀವಲೋಚನ ಹಾಗೂ ಖ್ಯಾತ ಬರಹಗಾರ್ತಿ ಛಾಯಾ ಭಗವತಿ ಅವರು ಪ್ರಬಂಧಗಳ ಮೌಲ್ಯಮಾಪನ ಮಾಡಿದರು. ಈ ತೀರ್ಪುಗಾರರು 15 ಪ್ರಬಂಧಗಳನ್ನು ಆರಿಸಿ ಮುಂದಿನ ಹಂತಕ್ಕೆ ನೀಡಿದರು.

ಎರಡನೇ ಹಂತದ ಮೌಲ್ಯಮಾಪನ ಜನವರಿ 6ರಂದು ಬೆಂಗಳೂರಿನ ಕೆಂಪೇಗೌಡನಗರದಲ್ಲಿರುವ ಉತ್ಥಾನ ಮಾಸಪತ್ರಿಕೆಯ ಕಛೇರಿಯಲ್ಲಿ ನಡೆಯಿತು.

ಪ್ರಾರಂಭದ ಸೂಚನೆಯಂತೆ ಮೊದಲ ಹಂತದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಬೆಂಗಳೂರಿಗೆ ಆಗಮಿಸಿ ಪಿಪಿಟಿ ಮೂಲಕ ತಮ್ಮ ಪ್ರಬಂಧವನ್ನು ತೀರ್ಪುಗಾರರ ಸಮ್ಮುಖದಲ್ಲಿ ಮಂಡಿಸಬೇಕಾಗಿತ್ತು. ಅದರಂತೆ ಜನವರಿ 6ರಂದು ನಡೆದ ಕಾರ್ಯಕ್ರಮದಲ್ಲಿ ಪ್ರಜಾವಾಣಿ ಪತ್ರಿಕೆಯ ಮೆಟ್ರೋ ವಿಭಾಗದ ಪ್ರಮುಖರಾದ ಡಿ.ಎಂ. ಘನಶ್ಯಾಮ್ ಹಾಗೂ ಸಾಪ್ಟ್ ವೇರ್ ತಂತ್ರಜ್ಞರೂ ಖ್ಯಾತ ಸಾಮಾಜಿಕ ಜಾಲತಾಣಿಗರೂ ಆದ ಕಿರಣ್ ಕೆ.ಎಸ್. ಅವರು ತೀರ್ಪಗಾರರಾಗಿ ಆಗಮಿಸಿದರು.

ನಂತರ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಜ್ಞಾನ ಆಯೋಗದ ಸದಸ್ಯರಾಗಿದ್ದ ಪ್ರೊ. ಎಂ.ಕೆ. ಶ್ರೀಧರ್ ಅವರು ಆಗಮಿಸಿ ವಿಜೇತರಿಗೆ ಬಹುಮಾನ ವಿತರಿಸಿದರು. ರಾಷ್ಟ್ರೋತ್ಥಾನ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಎಸ್.ಆರ್. ರಾಮಸ್ವಾಮಿ ಹಾಗೂ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ ಅವರು ಉಪಸ್ಥಿತರಿದ್ದರು.

ಮೊದಲ ಬಹುಮಾನ  (ರೂ.8,000)

ಸಂಗೀತಾ ಎನ್. ಶೆಟ್ಟಿ, ಡಾ|| ಎ.ವಿ. ಬಾಳಿಗಾ ಕಾಲೇಜ್ ಆಫ್ ಆಟ್ಸ್ ಆಂಡ್ ಸೈನ್ಸ್, ಕುಮುಟಾ

 ಎರಡನೇ ಬಹುಮಾನ (ರೂ. 5,000)

ಸಾಯಿಶ್ರೀಪದ್ಮ ಡಿ.ಎಸ್. , ವಿವೇಕಾನಂದ ಕಾಲೇಜು ಪುತ್ತೂರು

 ಮೂರನೇ ಬಹುಮಾನ (ರೂ. 2,000)

  1. ಶ್ರೀರಾಮನಂದನ ಪಿ. , ವಿವೇಕಾನಂದ ಕಾಲೇಜು ಪುತ್ತೂರು
  2. ಪವನ ಎಮ್. , ವಿಕೆಐಟಿ, ಬೆಂಗಳೂರು

ಮೆಚ್ಚುಗೆ ಬಹುಮಾನ

ಮಾನಸಾ ಎಮ್ ಹೆಗ್ಡೆ , ಪೆಸೆಟ್ ಬೆಂಗಳೂರು ಸೌತ್ ಪ್ಯಾಂಪಸ್

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ