ದಲಿತರ ಅಭ್ಯುದಯವನ್ನು ನಮ್ಮ ದೇಶದ ಎಲ್ಲರೂ ನಿರಾಕ್ಷೇಪವಾಗಿ ಬಯಸುತ್ತಾರೆ. ಆದರೆ ಅದು ಬರಿಯ ಪೊಳ್ಳು ಕ್ಲೀಷೆ ಆಗಿಬಿಟ್ಟರೆ ಹೇಗೆ? ತಾವು ಅಧಿಕಾರಕ್ಕೆ ಬಂದಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿರುವ ಆದೇಶಗಳನ್ನೂ ಧಿಕ್ಕರಿಸಿ ‘ದಲಿತ’ ವರ್ಗಗಳಿಗೆ ಸರ್ಕಾರೀ ನೌಕರಿಗಳಲ್ಲಿಯೂ ಅನ್ಯ ಕ್ಷೇತ್ರಗಳಲ್ಲಿಯೂ ಇರುವ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸುವೆವೆಂದೋ ‘ಒಳ–ಮೀಸಲಾತಿ’ ಯನ್ನು ಜಾರಿಗೊಳಿಸುವೆವೆಂದೋ ಚುನಾವಣೆಯ ಪ್ರಣಾಳಿಕೆಗಳಲ್ಲಿಯೂ ಸಾರ್ವಜನಿಕ ಪ್ರಚಾರಭಾಷಣಗಳಲ್ಲಿಯೂ ಘೋಷಿಸುವುದು ಮಾಮೂಲೆನಿಸಿಬಿಟ್ಟಿದೆ. ಒಂದು ಸಂಸ್ಕೃತ ವ್ಯಂಗ್ಯೋಕ್ತಿ ಹೀಗಿದೆ: ಅಹಂ ಕಾಶೀಂ ಗಚ್ಛಾಮಿ ತತ್ರೈವ ನಿವಸಾಮ್ಯಹಮ್ | ಇತಿ ಬ್ರುವಾಣಃ ಸತತಂ ಕಾಶೀವಾಸಫಲಂ […]
“ಹಾವು ಸಾಯಬಾರದು, ಕೋಲು ಮುರಿಯಬಾರದು” ಕಾಂಗ್ರೆಸಿನ ದಲಿತಪ್ರೇಮ
Month : November-2024 Episode : Author : ಎಸ್. ಆರ್. ಆರ್.