
ಪಚ್ಚಿಯಪ್ಪ ಅಂದಿನ ಕಾಲದಲ್ಲಿ ಕರ್ನಾಟಕದ ಶ್ರೇಷ್ಠ ಕಲಾವಿದರಲ್ಲಿ ಒಬ್ಬನಾಗಿದ್ದ. ಹಬ್ಬದ ಸಮಯಲ್ಲಿ ಗಣೇಶ, ಗೌರಿಯರ ಮೂರ್ತಿಗಳು, ನವರಾತ್ರಿಯಲ್ಲಿ ದುರ್ಗಾದೇವಿ, ಕಾಳಿಕಾದೇವಿ, ಅವಳ ಕಾಲ ಬಳಿ ಬಿದ್ದ ರಾಕ್ಷಸರು ಇತ್ಯಾದಿಗಳನ್ನು ಯಥಾವತ್ ನಿರ್ಮಿಸುತ್ತಿದ್ದ. ಉಳಿದ ಸಮಯದಲ್ಲಿ ರಾಕ್ಷಸರ ಮೂರ್ತಿಗಳಿಗೆ ತಮಿಳುನಾಡು, ಆಂಧ್ರ, ಕೇರಳದಿಂದ ಭಾರೀ ಬೇಡಿಕೆ ಇರುತ್ತಿತ್ತು. ದೇವಸ್ಥಾನದಲ್ಲಿ ದೇವಿಯ ಕಾಲ ಬಳಿ ಇರಿಸುವುದಕ್ಕೊ, ಮೆರವಣಿಗೆಗೊ, ಪ್ರಸಂಗಗಳಿಗೊ, ದೃಷ್ಟಿ ಪರಿಹಾರಕ್ಕೊ, ಇನ್ನೂ ಅನೇಕ ಕಾರಣಗಳಿಗೆ ದೈತ್ಯಮೂರ್ತಿಗಳು ಬಳಕೆಯಾಗುತ್ತಿದ್ದವು. ಪಚ್ಚಿಯಪ್ಪ ತಾನು ಮಾಡುವ ಮೂರ್ತಿಗಳಿಗೆ ನ್ಯಾಯ ಸಲ್ಲಿಸಲು ಅದೇ ಭಾವವನ್ನು […]