![ಜೀವನ ಚೈತ್ರ](https://utthana.in/wp-content/uploads/2020/10/7_UTTHANA-July-2020-54-150x150.jpg)
“ಹಕ್ಕಿಗಳ ಹಾಡುಗಳ ಹೊದಿಸಿ ನೆರಳನು ಸುರಿದು ನಿಂತ ಮರಗಳ ಹಣ್ಣು ತಿನ್ನಬೇಕು ಜೀವಜೋಳಿಗೆ ಹೆಗಲಿಗೇರಿಸಿ ಬಂದುದೆಲ್ಲ ದೂರ ಪಯಣದ ಬುತ್ತಿ ಅನ್ನಬೇಕು” – ಸು.ರಂ. ಎಕ್ಕುಂಡಿ ಹುಬ್ಬಳ್ಳಿಯಿಂದ ಹೊರಟ ಇಂಡಿಗೋ ವಿಮಾನದಲ್ಲಿ ಕುಳಿತ ಸುಧಾಕರ, ಪತ್ನಿ ರೋಹಿಣಿ ಮತ್ತು ಮಗಳು ಜಾಹ್ನವಿ ಜೊತೆ ದೆಹಲಿಯ ಡೊಮೆಸ್ಟಿಕ್ ವಿಮಾನ ನಿಲ್ದಾಣದಲ್ಲಿ ಇಳಿದು ಹತ್ತನೇ ಬೆಲ್ಟಿನಲ್ಲಿ ಲಗೇಜು ಪಡೆದು ಹೊರಗಡೆಯ ಮುಖ್ಯದ್ವಾರದಲ್ಲಿ ಹೊರಬೀಳುತ್ತಲೇ ಎದುರುಗಡೆ ಸಾಲಾಗಿ ನಿಂತ ಟ್ಯಾಕ್ಸಿಯವರತ್ತ ಕಣ್ಣು ಹಾಯಿಸಿದ. “ಹಲೋ ಅಂಕಲ್ ಇಲ್ಲಿ” ಎಂದು ಕೂಗಿ ಕೈಬೀಸುತ್ತಿದ್ದ […]