ಪಾತರಗಿತ್ತಿ ಪಕ್ಕ… ನೋಡಿದೇನ ಅಕ್ಕ!
Month : September-2022 Episode : Author : ಹರ್ಷವರ್ಧನ ವಿ. ಶೀಲವಂತ
Month : September-2022 Episode : Author : ಹರ್ಷವರ್ಧನ ವಿ. ಶೀಲವಂತ
Month : August-2022 Episode : Author :
Month : December-2021 Episode : Author : ಸುಘೋಷ್ ಸ. ನಿಗಳೆ
ಪ್ರಾಗೈತಿಹಾಸಿಕ ಕಾಲಮಾನದಲ್ಲಿ ನಮ್ಮ ರಾಜ್ಯದಲ್ಲಿ ಏನೆಲ್ಲಾ ನಡೆದಿರಬಹುದು ಎನ್ನುವುದು ಕುತೂಲಹಲಕಾರಿ ಅಷ್ಟೇ ರೋಚಕವಾದ ಇತಿಹಾಸ, ಅಲ್ಲಲ್ಲ ಪ್ರಾಗಿತಿಹಾಸ. ಲಭ್ಯವಿರುವ ಮಾಹಿತಿಯ ಪ್ರಕಾರ ಕರ್ನಾಟಕ ಒಂದರಲ್ಲೇ ೫೦ಕ್ಕೂ ಹೆಚ್ಚು ಪ್ರಾಗೈತಿಹಾಸಿಕ ತಾಣಗಳಿವೆ. ಇವು ಸುಮಾರು ೨ ಲಕ್ಷ ವರ್ಷದಿಂದ ೧೦ ಸಾವಿರ ವರ್ಷಗಳಷ್ಟು ಹಳೆಯವು. ರಾಜ್ಯದ ಉದ್ದಗಲಕ್ಕೂ ಹರಡಿಕೊಂಡಿರುವ ಇವುಗಳಲ್ಲಿ ಹೆಚ್ಚಿನವು ಕೇವಲ ಸಂಶೋಧಕರಿಗೆ ಮಾತ್ರ ಪರಿಚಿತವಾಗಿವೆ ಎಂಬುದು ದುರದೃಷ್ಟದ ಸಂಗತಿ. ಸಂಸ್ಕೃತಿಯ ಬೇರುಗಳನ್ನು ಹುಡುಕಿಕೊಂಡು ಹೋಗುವ ಮನುಷ್ಯಪ್ರಯತ್ನ ಇಂದು-ನಿನ್ನೆಯದಲ್ಲ. ತನ್ನ ಪೂರ್ವಜರ ಬದುಕು, ವಲಸೆ, ಜೀವನಕ್ರಮ, ಆಹಾರಪದ್ಧತಿ, […]
Month : November-2021 Episode : Author : ಹರ್ಷವರ್ಧನ ವಿ. ಶೀಲವಂತ
ಧರೋಜಿ: ಗಮನಿಸಿ; ಇಲ್ಲಿ ಮನುಷ್ಯರಿಗೆ ಪ್ರವೇಶವಿಲ್ಲ.. ಹೀಗೊಂದು ಢಾಳಾದ ಫಲಕ! ಅರೇ, ಇದೇನಿದು? ಓದಬಲ್ಲವರು, ಅರೆಕ್ಷಣ ಅವಾಕ್ಕಾಗುವಂತೆ! ಸಾಮಾನ್ಯವಾಗಿ ನಿರ್ಬಂಧಿತ ವಲಯ, ನಿಶ್ಶಬ್ದ ವಲಯ, ಸುರಕ್ಷಿತ ವಲಯ, ಸಂರಕ್ಷಿತ ಪ್ರದೇಶ; ಅಪ್ಪಣೆ ಇಲ್ಲದೇ ಒಳಗೆ ಪ್ರವೇಶವಿಲ್ಲ ಇತ್ಯಾದಿ ನೀವು ಓದಿರುತ್ತೀರಿ. ಆದರೆ, ಧರೋಜಿ ಕರಡಿ ಧಾಮದಲ್ಲಿ ಅರಣ್ಯ ಇಲಾಖೆಯ ಮನುಷ್ಯರಿಗೆ ಪ್ರವೇಶವಿಲ್ಲ ಫಲಕ ಅಪರೂಪದ್ದು! ಈ ಭೂಮಿಯ ಮೇಲೆ ಎಲ್ಲವೂ ಮನುಷ್ಯರಿಗೇ ಮೀಸಲಿದೆ ಎಂದುಕೊಂಡ ಬಹುತೇಕರಿಗೆ ಈ ಫಲಕದ ನಿರ್ದೇಶನ ಅರಗಿಸಿಕೊಳ್ಳುವುದು ಬಲು ಕಷ್ಟ. ಹಾಗಾದರೆ, ಯಾರಿಗೆ […]
Month : August-2021 Episode : Author : ಡಾ. ರೋಹಿಣಾಕ್ಷ ಶಿರ್ಲಾಲು
ಭಾರತವು ಸಾವಿರಾರು ವರ್ಷಗಳ ಕಾಲ ಪರಕೀಯ ಗುಲಾಮಿತನದಲ್ಲಿ ನರಳಿತ್ತು ಎನ್ನುವುದನ್ನು ಎಲ್ಲರೂ ಒಪ್ಪುತ್ತಾರೆ. ಆದರೆ ಗುಲಾಮಿತನದಿಂದ ಬಿಡುಗಡೆಗಾಗಿ ನಡೆಸಿದ ಸ್ವಾತಂತ್ರ್ಯ ಹೋರಾಟದ ಚರಿತ್ರೆಯನ್ನು ಹೇಳುವಾಗ ಮಾತ್ರ ಸುಮಾರು ೧೫೦ ವರ್ಷಗಳ ಕಥೆಯನ್ನಷ್ಟೇ ಹೇಳುತ್ತಾರೆ. ಹಾಗಾದರೆ ಉಳಿದ ಶತಮಾನ-ಶತಮಾನಗಳ ಕಾಲ ಭಾರತೀಯರು ಪರಕೀಯ ಗುಲಾಮಿತನದಲ್ಲಿ ಸಂತೋಷ ಕಂಡಿದ್ದರೆ? ಗುಲಾಮಿತನವನ್ನು ಸಂಭ್ರಮಿಸಿದ್ದರೆ? ಇಂತಹದ್ದೊಂದು ಅನುಮಾನದ ಪ್ರಶ್ನೆ ಯಾರನ್ನಾದರೂ ಕಾಡಬಹುದು. ಏಕೆಂದರೆ ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ಚರಿತ್ರೆಯನ್ನು ನಿರೂಪಿಸಿದ ಯಾವುದೇ ಕೃತಿಗಳನ್ನಾದರೂ ನೀವು ಗಮನಿಸಿದರೂ ನಮ್ಮ ಸ್ವಾತಂತ್ರ್ಯ ಹೋರಾಟ ಆರಂಭವಾಗುವುದೇ […]
Month : July-2021 Episode : Author : ಎಸ್.ಆರ್. ರಾಮಸ್ವಾಮಿ
ಗುರು ವಂದನೆ ಎಲ್ಲ ಜ್ಞಾನದ ತವನಿಧಿಯಾದ ವ್ಯಾಸಮಹರ್ಷಿಗಳ ಜನ್ಮದಿನದ ಸಂಕೇತವಾಗಿ ಪ್ರತಿವರ್ಷ ಆಷಾಢ ಹುಣ್ಣಿಮೆಯನ್ನು ‘ವ್ಯಾಸಪೂರ್ಣಿಮೆ’ ಅಥವಾ ‘ಗುರುಪೂರ್ಣಿಮೆ’ ಎಂದು ಭಕ್ತಿಯಿಂದ ಆಚರಿಸುವ ರೂಢಿ ಶತಮಾನಗಳಿಂದ ನಡೆದುಬಂದಿದೆ. ಆ ನಿಮಿತ್ತದಲ್ಲಿ ಮಾನವತೆಗೆ ವ್ಯಾಸರ ಸಂದೇಶವನ್ನು ಕುರಿತು ಈ ಲೇಖನ. ಶ್ರೀವೇದವ್ಯಾಸ ನಮೋ ಭೂ-ವಿಯದಾದ್ಯಂತದರ್ಶಿ ಕವಿಸೂರ್ಯ ನಮೋ | ಜೀವಿತಸಾರಜ್ಞ ನಮೋ ಭಾವಿತ-ವಿಶ್ವಪ್ರಜಾ-ಭವಿಷ್ಯಾರ್ಥ ನಮೋ || – ಡಿ.ವಿ.ಜಿ. “ಭೂಮ್ಯಾಕಾಶ ವ್ಯಾಪ್ತಿಯಲ್ಲಿನ ಸಮಸ್ತವನ್ನೂ ಕಂಡ ಕವಿಸೂರ್ಯರೂ ಎಲ್ಲ ಬದುಕಿನ ಸಾರವನ್ನರಿತವರೂ ಇಡೀ ವಿಶ್ವದ ಸಕಲ ಜನತೆಯ ಮುಂದಿನ ಆಗುಹೋಗುಗಳನ್ನೂ […]
Month : April-2021 Episode : Author : ಎಸ್.ಆರ್. ರಾಮಸ್ವಾಮಿ
ಇಪ್ಪತ್ತನೇ ಶತಮಾನದ ಓರ್ವ ಅನನ್ಯ ಇತಿಹಾಸ-ಸಂಶೋಧಕರೂ ಗಾಂಧಿವಾದಿಯೂ ಆದ ಧರ್ಮಪಾಲ್ (19.2.1922-24.10.2006) ಅವರ ಜನ್ಮಶತಾಬ್ದದ ವರ್ಷ 2021-22. ಇತಿಹಾಸಾಧ್ಯಯನ ಪ್ರಕ್ರಿಯೆಯ ಒಂದು ನೂತನ ಪ್ರಸ್ಥಾನವನ್ನು ರೂಪಿಸಿದವರು ಮಾತ್ರವಲ್ಲ ಅವರು; ಸಾಮ್ರಾಜ್ಯಹಿತಾಸಕ್ತ ಆಂಗ್ಲರಿಂದ ಪ್ರವರ್ತಿತವಾಗಿ ಭಾರತೀಯರಲ್ಲಿಯೂ ಅಧಿಕಮಂದಿ ತಥೋಕ್ತ ‘ಸುಶಿಕ್ಷಿತ’ರ ಮೆದುಳುಗಳಲ್ಲಿ ಇಂದಿಗೂ ಆಳವಾಗಿ ಬೇರೂರಿರುವ ಹಲವಾರು ಭ್ರಮೆಗಳ ಮೇಲೆ ಪ್ರಹಾರವೆಸಗಿ ತಥ್ಯದರ್ಶನ ಮಾಡಿಸಿದವರು; ಭಾರತದ ಮುನ್ನಡೆಯು ಯಾರಾರನ್ನೋ ಅನುಕರಿಸಹೊರಡದೆ ಭಾರತದ ಪರಂಪರೆಯಿಂದಲೇ ನಿರ್ದೇಶನಗೊಳ್ಳುವುದು ಸಾಧ್ಯ ಹಾಗೂ ಅವಶ್ಯವೆಂದು ಪ್ರಖರವಾಗಿಯೂ ಆಧಾರಸಹಿತವಾಗಿಯೂ ಪ್ರತಿಪಾದಿಸಿದವರು. ಸ್ವದೇಶಪರಂಪರೆಯ ಜ್ಞಾನಸತ್ತ್ವವೆಂಬ ‘ಸಾಫ್ಟ್-ಪವರ್’ನ ಶಕ್ತಿಮತ್ತ್ವವನ್ನು […]
Month : March-2021 Episode : Author : ಕಾಕುಂಜೆ ಕೇಶವ ಭಟ್ಟ
ಪ್ರಣವಸ್ವರೂಪಿಯಾದ ಶಿವನನ್ನು ಹೊಂದಲು ನಮ್ಮ ಪ್ರಣಯದ ಆಸೆ ಆಕಾಂಕ್ಷೆಗಳ ಕಾಮಕಲ್ಮಶಗಳು ಮೊದಲು ಸುಟ್ಟುಹೋಗಬೇಕು. ಅದರ ಸಂಕೇತವೇ ಕಾಮದಹನ. ಇದು ನಿತ್ಯವೂ ನಮ್ಮ ಧರ್ಮ ಕರ್ಮಗಳ ಅನುಷ್ಠಾನದಲ್ಲಿ ನಮ್ಮ ವಿವೇಕೋದಯದಿಂದ ನಡೆಯಬೇಕಾಗಿದೆ. ಉತ್ಸವಗಳು, ಹಬ್ಬಗಳು ನಮ್ಮ ಧಾರ್ಮಿಕ ಮತ್ತು ಸಾಮಾಜಿಕ ಜೀವನದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿವೆ. ಕಾರಣ ಮನುಷ್ಯನು ಸಹಜವಾಗಿ ಉತ್ಸವಪ್ರಿಯನಾಗಿರುವುದು. ಈ ಸತ್ಯವನ್ನು ಮಹಾಕವಿ ಕಾಲಿದಾಸನು ತನ್ನ ಶಾಕುಂತಲ ನಾಟಕದ 6ನೇ ಅಂಕದಲ್ಲಿ ಹೀಗೆ ವ್ಯಕ್ತಪಡಿಸಿದ್ದಾನೆ: ‘ಉತ್ಸವಪ್ರಿಯಾಃ ಖಲು ಮನುಷ್ಯಾಃ.’ ಉತ್ಸವಗಳು ಮನುಷ್ಯಜೀವನದಲ್ಲಿ ಒದಗುವ ಸಂತೋಷದ ಸಂದರ್ಭಗಳು. […]
Month : December-2020 Episode : Author : ವಿಘ್ನೇಶ್ವರ ಭಟ್
ಸ್ವಾತಂತ್ರ್ಯೋತ್ತರ ಭಾರತದ ಬೌದ್ಧಿಕವಲಯದಲ್ಲಿ ನೈಜ ಭಾರತೀಯಪರಂಪರೆಯನ್ನೂ ಇತಿಹಾಸವನ್ನೂ ಸಂಸ್ಕೃತಿಯನ್ನೂ ಕುರಿತು ಮಾತನಾಡುವವರು ಪ್ರಮುಖವಾಗಿ ಎದುರಿಸಬೇಕಾಗಿ ಬಂದದ್ದು ಎರಡು ವರ್ಗದ ಜನರನ್ನು: ಭಾರತದ ಪ್ರಾಚೀನತೆ, ಜನಜೀವನ, ಸಂಸ್ಕೃತಿ, ನಾಗರಿಕತೆ ಇವೆಲ್ಲವುಗಳನ್ನು ಕುರಿತು ಅಲ್ಪಸ್ವಲ್ಪ ತಿಳಿದಿದ್ದೂ ಉದ್ದೇಶಪೂರ್ವಕವಾಗಿ ಭಾರತೀಯ ಅಸ್ಮಿತೆಯನ್ನು ಕಡೆಗಣಿಸಲು ಪ್ರಯತ್ನಿಸಿದ ಬ್ರಿಟಿಷ್ ಚಿಂತಕರು- ಲೇಖಕರದು ಮೊದಲನೆಯ ವರ್ಗವಾದರೆ; ಈ ಮೊದಲನೆಯ ವರ್ಗದ ಹುನ್ನಾರಗಳನ್ನೂ ದುರುದ್ದೇಶಗಳನ್ನೂ ಅರಿಯದೆ, ಕೇವಲ ಅವರ ಮಿಥ್ಯಾಪ್ರಚಾರಗಳನ್ನೇ ನಿಜವೆಂದು ನಂಬಿ ಇಲ್ಲಿನವರೊಂದಿಗೇ ಸಂಘರ್ಷಕ್ಕಿಳಿದವರದ್ದು ಎರಡನೆಯ ವರ್ಗ. ಕ್ರಮಕ್ರಮೇಣ ಮೊದಲನೆಯ ವರ್ಗದ ಅಪಪ್ರಚಾರಗಳಿಗೆ ಸೂಕ್ತ ಉತ್ತರವನ್ನು […]
Month : September-2020 Episode : Author : ಶತಾವಧಾನಿ ಡಾ|| ರಾ. ಗಣೇಶ್
ಸುಮಾರು ಇಪ್ಪತ್ತೈದು ವರ್ಷಗಳ ಮುನ್ನ ನನ್ನ ಸಂಗೀತಗುರುಗಳ ಗಾನದ ಧ್ವನಿಮುದ್ರಣಕ್ಕಾಗಿ ಅರವಿಂದ್ ಸ್ಟುಡಿಯೋಗೆ ಹೋಗಿದ್ದಾಗ ಸ್ವಲ್ಪ ಹೊತ್ತಿಗೇ ಅಲ್ಲಿಯ ಸಿಬ್ಬಂದಿಯ ನಡುವೆ ಸಂಭ್ರಮೋತ್ಸಾಹಗಳು ಪುಟಿದೆದ್ದವು. ಏಕೆಂದರೆ ಕೆಲವೇ ನಿಮಿಷಗಳಲ್ಲಿ ಪ್ರಖ್ಯಾತ ನೇಪಥ್ಯಗಾಯಕ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರು ತಮ್ಮ ಹಾಡೊಂದರ ಧ್ವನಿಮುದ್ರಣಕ್ಕೆ ಅಲ್ಲಿ ಬರಲಿದ್ದರು. ಮೊದಲಿನಿಂದಲೂ ಘಂಟಸಾಲ ವೇಂಕಟೇಶ್ವರರಾಯರ ಹಾಗೂ ಪಿ. ಬಿ. ಶ್ರೀನಿವಾಸರ ಗಾನಮಾಧುರ್ಯಕ್ಕೆ ಮಾರುಹೋಗಿದ್ದ ನಾನು ಬಾಲು ಅವರ (ಇದು ಅವರ ಅಶೇಷ ಅಭಿಮಾನಿಗಳು ಆತ್ಮೀಯತೆಯಿಂದ ಕರೆಯುವ ಪರಿ) ಪ್ರತಿಭೆಯನ್ನು ಮೆಚ್ಚಿಕೊಂಡಿದ್ದರೂ ಅದಕ್ಕೆ ಮನಸೋತಿರಲಿಲ್ಲ. […]