
ಉತ್ಥಾನ ಮೇ 2021
Month : May-2021 Episode : Author :
Month : May-2021 Episode : Author :
Month : May-2021 Episode : Author : ರಘುಪತಿ ಶೃಂಗೇರಿ
Month : May-2021 Episode : Author : ಆರತಿ ಪಟ್ರಮೆ
ದಿನಪೂರ್ತಿ ಮಾಡುವ ಕೆಲಸವನ್ನು ಗೌರವದಿಂದ ಕಾಣುವ ಮನಸ್ಸುಗಳು ಬೆಳೆಯಬೇಕಲ್ಲವೇ? ಅಷ್ಟೆಲ್ಲ ದುಡಿಮೆಗೆ ಸಂಬಳವಂತೂ ಇರಲಾರದು, ಆದರೆ ಅವಳ ಆವಶ್ಯಕತೆಗಳನ್ನು ಪೂರೈಸುವ ಜವಾಬ್ದಾರಿ ಮನೆಮಂದಿಗೆ ಇರುವುದು ಅಗತ್ಯವಲ್ಲವೇ? …ಮಾತುಗಳ ಮೂದಲಿಕೆ ಇದುವರೆಗೆ ಅದೆಷ್ಟು ಹೃದಯಗಳನ್ನು ಇರಿದಿವೆಯೋ ಲೆಕ್ಕವಿದೆಯೇ? “ಅಕ್ಕ, ನನಗಂತೂ ಯಾರೂ ನನ್ನವರಲ್ಲ ಅನ್ನಿಸಿಬಿಟ್ಟಿದೆ. ಅಪ್ಪ ಅಮ್ಮನಂತೂ ‘ಅಲ್ಲೇ ಹೊಂದಿಕೊಂಡು ಇದ್ದುಬಿಡು. ಈಗ ಗಂಡನನ್ನು ಬಿಟ್ಟು ಬಂದು ಇನ್ನು ನಾಲ್ಕು ವರ್ಷ ಕಳೆದ ಮೇಲೆ ನನಗೆ ಗಂಡ ಬೇಕು ಎಂದರೆ ನಾವೇನಮ್ಮ ಮಾಡೋಣ?’ ಎನ್ನುತಾರೆ. ಇಲ್ಲಿ ನಾನನುಭವಿಸ್ತಾ ಇರೋ […]
Month : May-2021 Episode : Author : ಡಾ|| ಕೆ. ಜಗದೀಶ ಪೈ
ಕೆಲವರ ಅನಿಸಿಕೆಯ ಪ್ರಕಾರ ಜೀವನ ಎಂಬುದು ಸುಖ-ದುಃಖಗಳ ಮಿಶ್ರಣ. ಇನ್ನು ಕೆಲವರ ಪ್ರಕಾರ ಜಗತ್ತಿನಲ್ಲಿ ಸುಖಕ್ಕಿಂತ ದುಃಖವೇ ಹೆಚ್ಚು. ‘ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ ನೋಡಾ’ ಎಂದು ಅಲ್ಲಮಪ್ರಭು ಸಾರಿದ್ದಾನೆ. ಹಲವು ಪಾಶ್ಚಾತ್ಯ ಚಿಂತಕರ ಪ್ರಕಾರ ಜೀವನವೆಂಬುದು ದುರಂತಗಳ ಸರಮಾಲೆ. ಅದರಲ್ಲಿ ಯಾವುದೇ ಸಾರವಿಲ್ಲ. ಮರುಭೂಮಿಯ ಖರ್ಜೂರ ಜೀವನದಲ್ಲಿ ನಾವು ಅಪಾರ ಕಷ್ಟಗಳನ್ನು ಕಂಡರೂ ವಿರಳವಾದ ಸುಖಕ್ಕೆ ಕಷ್ಟದ ನೋವನ್ನು ಮರೆಸುವ ಶಕ್ತಿ ಇದೆ. ಬದುಕು ಬಂಜರುಭೂಮಿಯೆನಿಸಿದರೂ ಆ ಮರುಭೂಮಿಯಲ್ಲಿ ಅಲ್ಲಲ್ಲಿ ಕಾಣಲು ಸಿಗುವ ಓಯಸಿಸ್ಗಳನ್ನು ನಿರೀಕ್ಷಿಸಿ […]
Month : May-2021 Episode : Author : ಪೂರ್ಣಿಮಾ ಕಮಲಶಿಲೆ
ಅಜ್ಜಿಯಿಂದ, ಅಜ್ಜಿಮನೆಯಿಂದ ಇಡೀ ಜೀವನಕ್ಕೆ ಬೇಕಾಗುವ ಹಲವು ಪಾಠಗಳನ್ನು ನೋಡಿ ನೋಡಿಯೇ ಕಲಿತೆವು. ಬೋಧನಾ ಪಾಠಕ್ಕಿಂತ, ಅನುಭವಿಸುವ ಪಾಠಗಳು, ಹಿರಿಯರು ಹಾಕಿಕೊಟ್ಟ ಮೌಲ್ಯಗಳ ಅನುಕರಣೆ, ಅನುಸರಣೆಯೇ ನಮ್ಮ ಬಾಳಿಗೆ ಸ್ಪಷ್ಟಮಾರ್ಗ ರೂಪಿಸಿವೆ. ‘ಆ ಕಾಲವೊಂದಿತ್ತು.. ದಿವ್ಯ ತಾನಾಗಿತ್ತು… ಅದು ಬಾಲ್ಯವಾಗಿತ್ತು!’ – ಕುವೆಂಪು ಮಾತು ಅದೆಷ್ಟು ಸತ್ಯ. ಆ ದಿವ್ಯ ರಸಾನುಭವ ನಮ್ಮೆಲ್ಲರ ಜೀವನದ ಮೇಲೆ ಅಚ್ಚೊತ್ತಿದ ಪರಿಣಾಮವೇ ನಾವೆಲ್ಲ ಇಂದಿಗೂ ಸಂಬಂಧಗಳ ಬಿಗಿಯಲ್ಲಿ ಖುಷಿಯಾಗಿದ್ದೇವೆ. ಎಲ್ಲ ಮೊಮ್ಮಕ್ಕಳಿಗೂ ಅಜ್ಜಿಮನೆ ಎಂಬುದೊಂದು ಸ್ವರ್ಗ. ಅದೂ ಹಳ್ಳಿಯಲ್ಲಿರುವ ಅಜ್ಜಿಮನೆಯಾದರೆ […]
Month : May-2021 Episode : ‘ಉತ್ಥಾನ’ ಕಥಾಸ್ಪರ್ಧೆ -2020 Author :
ಅರಳೀಕಟ್ಟೆಗೆ ಕುಳಿತ ಮಲ್ಲೇಶಜ್ಜ ಹಿಗ್ಗಾಮುಗ್ಗಾ ಬೈಯದಿದ್ದರೆ ಈವತ್ತಿಗೂ ಹಮಾಲಿ ಕೆಲಸವನ್ನೇ ತಾನು ಮಾಡಕೊಂತಿರ್ತಿದ್ನೇನೋ! ‘ನಾ ಎಷ್ಟೇ ಕಟುಕಿ ಮಾತಾಡಲಿ ಸಹಿಸ್ಕೊಂಡು ತ್ವಾಟಾ ಮಾಡಿದಾಕಿ ಈಕಿ’ ಎಂಬ ಹೆಮ್ಮೆಯಿಂದ ಹೆಂಡತಿಯನ್ನು ಮತ್ತೆ ಮತ್ತೆ ನೋಡಿದ ಮಾದಪ್ಪ. ಮಂಜೀಹಾಳದ ಹದಗೆಟ್ಟ ರಸ್ತೆಯ ಎರಡೂ ಕಡೆ ಇದ್ದ ಸಾಲು ಮನೆಗಳಿಂದ ಬುಸುಬುಸುನೆ ಉರಿಯೊಲೆಗಳ ಕಪ್ಪನೆಯ ಹೊಗೆ ಆಗಸಕ್ಕೇರುತ್ತಿತ್ತು. ತಟತಟನೇ ರೊಟ್ಟಿ ತಟ್ಟುವ ಸದ್ದು ಬೆಳಗಿನ ಮೌನ ಮುರಿದಂತಿತ್ತು. ಮುಂಜಾವಿನ ತಂಪನ್ನು ಕರಗಿಸಲೆಂಬಂತೆ ಬಂದ ಎಳೆಬಿಸಿಲಿಗೆ ಮೈಯೊಡ್ಡಿ ಕೂತ ಹಿರಿಯರು, ತಳಿ ಹೊಡೆದು […]
Month : May-2021 Episode : Author :
ಉತ್ಥಾನ ಮಾಸಪತ್ರಿಕೆಯ ಸಂಪಾದಕರಾದ ಶ್ರೀ ಕಾಕುಂಜೆ ಕೇಶವ ಭಟ್ಟ (೬೬ ವರ್ಷ) ಅವರು ನಿನ್ನೆ ರಾತ್ರಿ (ಮೇ ೧) ೧೨.೧೫ಕ್ಕೆ ಬೆಂಗಳೂರಿನಲ್ಲಿ ನಿಧನರಾದರು. ಕಳೆದ ೯ ವರ್ಷಗಳಿಂದ ರಾಷ್ಟ್ರೋತ್ಥಾನ ಪರಿಷತ್ ಪ್ರಕಾಶಿಸುತ್ತಿರುವ ’ಉತ್ಥಾನ’ ಮಾಸಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದ ಕಾಕುಂಜೆ ಕೇಶವ ಭಟ್ಟ ಅವರು ಮೂಲತಃ ಗಡಿನಾಡು ಕಾಸರಗೂಡಿನ ನೀರ್ಚಾಲು ಗ್ರಾಮದ ಕಾಕುಂಜೆಯವರು. ಖ್ಯಾತ ಸಂಸ್ಕೃತ ವಿದ್ವಾಂಸ, ಮೀಮಾಂಸಾ ಶಿರೋಮಣಿ, ವಿದ್ವಾನ್ ಕಾಕುಂಜೆ ಕೃಷ್ಣ ಭಟ್ಟ ಹಾಗೂ ಸಾವಿತ್ರೀ ಅಮ್ಮ ಅವರ ಐದನೇ ಮಗನಾಗಿ ಆಗಸ್ಟ್ ೧೪, […]