
ಸಾಹಿತಿಯಾದವನು ಸಮಾಜದ ದೈನಂದಿನ ಬೆಳವಣಿಗೆಗಳಿಗೆ ತಿಳಿದೋ ತಿಳಿಯದೆಯೋ ಅತ್ಯಂತ ಸೂಕ್ಷ್ಮವಾಗಿ ಸ್ಪಂದಿಸುತ್ತಿರುತ್ತಾನೆ. ಡಾ|| ಎಸ್.ಎಲ್. ಭೈರಪ್ಪನವರಂತಹ ಮಹೋನ್ನತ ಸಾಹಿತಿಗಳ ವಿಷಯದಲ್ಲಿ ಆ ಮಾತನ್ನು ಹೇಳುವುದೇ ಬೇಡ. ಮುಖ್ಯವಾಗಿ ಯುಪಿಎ ಸರ್ಕಾರದ ಅವಧಿಯಲ್ಲಿ ಉಗ್ರಸ್ತ್ರೀವಾದ, ಅಂದರೆ ಹೆಣ್ಣು ಮಾಡುವುದೆಲ್ಲ ಸರಿ ಎಂಬ ಧೋರಣೆ ನಾಡಿನ ಶಾಸನಕರ್ತರ ತಲೆಗೆ ಹೊಕ್ಕು ಅಥವಾ ಯಾವುದೋ ರಾಜಕೀಯ ಉದ್ದೇಶದಿಂದ ಪೂರ್ತಿ ಮಹಿಳೆಯರ ಪರವಾದ ಅನೇಕ ಶಾಸನಗಳು ಬಂದವು. ಅದರಿಂದ ಸಮಾಜದ ಮೇಲೆ ಎಂತಹ ಪರಿಣಾಮವಾಗುತ್ತದೆ ಎನ್ನುವುದರ ಅದ್ಭುತ ಚಿತ್ರಣ ಭೈರಪ್ಪನವರ ೨೦೧೦ರಲ್ಲಿ ಹೊರಬಂದ […]