ಇಲ್ಲಿಯವರೆಗೆ… ಉದ್ಯಮಿ ಮಹೇಶ್ ಮಿಸ್ತ್ರಿ ಕ್ರಮೇಣ ದೇಶದಲ್ಲಿಯೆ ಪ್ರತಿಷ್ಠೆ ಗಳಿಸಿ ಸಾಟಿಯಿಲ್ಲದ ಮಟ್ಟಕ್ಕೆ ಏರಿ ಈಗ ರಕ್ಷಣಾ ಇಲಾಖೆಯ ಪ್ರಮುಖ ಕಾಂಟ್ರ್ಯಾಕ್ಟುಗಳನ್ನೂ ತನ್ನದಾಗಿಸಿಕೊಂಡಿದ್ದ. ಭವಿಷ್ಯದಲ್ಲಿ ಊಹೆಗೆ ಮೀರಿದ ಲಾಭ ತರುವ ಆವಿಷ್ಕರಣಗಳನ್ನು ಮಾಡಲು ಅತ್ಯಾಧುನಿಕ ಪ್ರೌಢಪ್ರಯೋಗಾಲಯ ಸಂಕೀರ್ಣವನ್ನು ಸ್ಥಾಪಿಸಿದ್ದ. ಅಭೂತಪೂರ್ವ ಆವಿಷ್ಕರಣ ಅಂತಿಮ ಹಂತದಲ್ಲಿದ್ದಾಗ ಅದನ್ನು ನಿರ್ವಹಿಸುತ್ತಿದ್ದ ವಿಜ್ಞಾನಿ ಅವಧೂತ್ ತಾನು ಆ ಪ್ರಾಜೆಕ್ಟಿನಿಂದ ಹಿಂದೆ ಸರಿಯುತ್ತಿರುವೆನೆಂದು ಆಘಾತಕಾರಿ ಘೋಷಣೆ ಮಾಡಿದ. ಅವಧೂತ್ ತಾವು ಧ್ವಂಸ ಮಾಡಬೇಕೆಂದು ನಿಶ್ಚಯಿಸಿದ್ದ ಅಷ್ಟನ್ನೂ ಹಾಳುಗೆಡಿಸುವ ಕೆಲಸವನ್ನು ಮಾಡಿ ಮುಗಿಸಿರುವಂತಿದೆ – […]








