
ಉತ್ಥಾನ ಆಗಸ್ಟ್ 2019
Month : August-2019 Episode : Author :
Month : August-2019 Episode : Author :
Month : August-2019 Episode : Author :
‘ಸಿನೆಮಾ ಸಂಗೀತಕ್ಕೇ ಹೋಗಬೇಡಿ, ನಿಸರ್ಗದಲ್ಲೇ ಸಂಗೀತವಿದೆ; ಆಸ್ವಾದಿಸಿ’ ಎಂದ ಹಂಸಲೇಖ ಇನ್ನೂ ತಂತ್ರಜ್ಞಾನ ಮುನ್ನೆಲೆಗೆ ಬಂದಿರದ ಕಾಲ; ಸಿನೆಮಾಗಳು ಇನ್ನೇನು ತನ್ನ ಹೆಜ್ಜೆಗಳನ್ನಿಡುತ್ತ ದೃಢವಾಗಿ ನಿಲ್ಲುವ ಹಂತದಲ್ಲಿದ್ದ ಕಾಲ. ಅಂತಹ ಸಮಯದಲ್ಲಿ ಕನ್ನಡ ಸಿನೆಮಾಕ್ಕೆ ಉತ್ತಮ ಗುಣಮಟ್ಟದ ಸಂಗೀತ, ಸಾಹಿತ್ಯವನ್ನು ನೀಡಿದ ಕೀರ್ತಿ ಹಂಸಲೇಖ ಅವರಿಗೆ ಸಲ್ಲುತ್ತದೆ. ಸುಮಾರು 30 ವರ್ಷಗಳಿಂದ ಕನ್ನಡ ಸಿನೆಮಾ ಸಂಗೀತ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತ ಬಂದಿರುವ ಹಂಸಲೇಖ ಅವರದ್ದು ರಂಗಭೂಮಿ, ಸಿನೆಮಾ, ಜಾನಪದ – ಹೀಗೆ ಸಂಗೀತ-ಸಾಹಿತ್ಯಗಳಲ್ಲಿ ಬಹುಮುಖವಾದ ಮೇರುವ್ಯಕ್ತಿತ್ವ. ಅವರು ಸಂಗೀತಕ್ಷೇತ್ರದ […]
Month : August-2019 Episode : Author : ವಿ. ಮನೋಹರ್
ಸಂಗೀತದ ಆರಂಭ ಎಲ್ಲಿಂದ ಎನ್ನುವ ಪ್ರಶ್ನೆಯನ್ನು ನಾವು ನಮ್ಮ ಮುಂದೆ ಇರಿಸಿಕೊಂಡರೆ: ನಮ್ಮ ಪುರಾಣಗಳ ಪ್ರಕಾರ ಶ್ರೀಕೃಷ್ಣ ದ್ವಾಪರಯುಗದಲ್ಲಿದ್ದ ಎಂಬುದೊಂದು ಕಲ್ಪನೆ. ಸುಮಾರು 5,050 ವರ್ಷಗಳ ಹಿಂದೆ ಕೃಷ್ಣ ಜನಿಸಿದ ಎಂದು ಹೇಳುತ್ತಾರೆ. ಹೀಗೆ 5,000 ವರ್ಷಗಳ ಹಿಂದೆ ಇದ್ದ ಕೃಷ್ಣ ಕೊಳಲು ಊದುತ್ತಿದ್ದ. ಕೊಳಲು ಊದುತ್ತಿದ್ದ ಎಂದರೆ ಹೇಗೆ? ಸುಮ್ಮನೆ ಊದುತ್ತಿದ್ದನಾ ಅಥವಾ ರಾಗಸಹಿತವಾಗಿ ಊದುತ್ತಿದ್ದನಾ? ಕೊಳಲಿನ ನಾದ, ಅಂದರೆ ಸಂಗೀತದ ರಾಗದೊಂದಿಗೆ ಊದುತ್ತಿದ್ದ ಅಂದುಕೊಳ್ಳಬಹುದು. ಅಂದರೆ ಆ ಕಾಲದಿಂದ ಸಂಗೀತ, ನಾಟ್ಯ, ನೃತ್ಯ, ಗಂಧರ್ವರು, […]
Month : August-2019 Episode : Author :
ಇನ್ನೂ ತಂತ್ರಜ್ಞಾನ ಮುನ್ನೆಲೆಗೆ ಬಂದಿರದ ಕಾಲ; ಸಿನೆಮಾಗಳು ಇನ್ನೇನು ತನ್ನ ಹೆಜ್ಜೆಗಳನ್ನಿಡುತ್ತ ದೃಢವಾಗಿ ನಿಲ್ಲುವ ಹಂತದಲ್ಲಿದ್ದ ಕಾಲ. ಅಂತಹ ಸಮಯದಲ್ಲಿ ಕನ್ನಡ ಸಿನೆಮಾಕ್ಕೆ ಉತ್ತಮ ಗುಣಮಟ್ಟದ ಸಂಗೀತ, ಸಾಹಿತ್ಯವನ್ನು ನೀಡಿದ ಕೀರ್ತಿ ಹಂಸಲೇಖ ಅವರಿಗೆ ಸಲ್ಲುತ್ತದೆ. ಸುಮಾರು 30 ವರ್ಷಗಳಿಂದ ಕನ್ನಡ ಸಿನೆಮಾ ಸಂಗೀತ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತ ಬಂದಿರುವ ಹಂಸಲೇಖ ಅವರದ್ದು ರಂಗಭೂಮಿ, ಸಿನೆಮಾ, ಜಾನಪದ – ಹೀಗೆ ಸಂಗೀತ-ಸಾಹಿತ್ಯಗಳಲ್ಲಿ ಬಹುಮುಖವಾದ ಮೇರುವ್ಯಕ್ತಿತ್ವ. ಅವರು ಸಂಗೀತಕ್ಷೇತ್ರದ ಯುವಪ್ರತಿಭೆಗಳಿಗೆ ಸದಾ ಮಾರ್ಗದರ್ಶಕರು. ಇತ್ತೀಚೆಗೆ ‘ಉತ್ಥಾನ’ ಮಾಸಪತ್ರಿಕೆ ಹಂಸಲೇಖ ಅವರೊಂದಿಗೆ […]
Month : August-2019 Episode : ಭಾಗ - 3 Author : ಬಿ.ಪಿ. ಪ್ರೇಮ್ ಕುಮಾರ್
– ಬಿ.ಪಿ. ಪ್ರೇಮ್ಕುಮಾರ್ ಹೊರಜಗತ್ತಿನೊಂದಿಗೆ ಚಿತ್ತಗಾಂವ್ನ ಸಂಪರ್ಕಕೊಂಡಿಗಳನ್ನು ಧ್ವಂಸಗೊಳಿಸುವ ಮೊದಲಸುತ್ತಿನ ಕ್ರಿಯಾಯೋಜನೆಯ ಯಶಸ್ವಿ ಪೂರೈಕೆಯ ನಂತರ ‘ಮಾಡು ಮತ್ತು ಮಡಿ’ ಎಂಬ ಧ್ಯೇಯವಾಕ್ಯದೊಂದಿಗೆ ಚಿತ್ತಗಾಂವ್ನ ಕ್ರಾಂತಿಕಾರಿಗಳ ಅಚಲ ಹೋರಾಟ ಗರಿಗೆದರಿದುದು ಈಗಲೇ! ಬೆನ್ನು ಹತ್ತಿರುವ ಪೆÇಲೀಸ್ನಾಯಿಗಳಿಗೆ ವಾಸನೆಯೂ ಸಿಗದಂತೆ ಪೂರ್ವಸಿದ್ಧತೆಯನ್ನು ನಡೆಸುತ್ತಿದ್ದ ಆರು ಮಂದಿ ಮಾಜಿ ರಾಜಕೀಯ ಬಂಧಿಗಳು ತಮ್ಮ ಯೋಜನೆಗೆ ಜೀವ ತುಂಬುವುದರಲ್ಲಿ ಏಳೆಂಟು ತಿಂಗಳುಗಳನ್ನು ಕಳೆದಿರುತ್ತಾರೆ. ಮಾಸ್ತರ್ ದಾ, ಅಂಬಿಕಾ ಚಕ್ರವರ್ತಿ, ನಿರ್ಮಲ್ ಸೇನ್, ಗಣೇಶ್ ಘೋಷ್ ಮತ್ತು ಅನಂತ ಸಿಂಗ್ ಸೇರಿ 1929ರ […]
Month : August-2019 Episode : Author :
ಕರ್ನಾಟಕದಲ್ಲಿ ಹದಿನಾಲ್ಕು ತಿಂಗಳ ಕಾಂಗ್ರೆಸ್-ಜೆ.ಡಿ.ಎಸ್. ಮೈತ್ರಿ ಸರ್ಕಾರ ಹದಿನೆಂಟು ದಿನಗಳ ತೀಕ್ಷ್ಣ ಸಮರದ ತರುವಾಯ ದಿನಾಂಕ ಜುಲೈ 23ರ ಸಂಜೆ ಧರಾಶಾಯಿಯಾಗಿದೆ (ಮೈತ್ರಿಕೂಟದ ಪರ ಮತಗಳು 99, ಭಾಜಪಾ ಪರ 105 ಮತಗಳು). ನಿರೀಕ್ಷಿತವೇ ಆಗಿದ್ದ ಈ ಫಲಿತದ ಸಂಪಾದನೆಗೆ ಇಷ್ಟು ಭಂಡತನದ ಜುಗುಪ್ಸಾಕರ ಜಗ್ಗಾಟದ ಆವಶ್ಯಕತೆ ಇತ್ತೆ? – ಎಂದು ಖೇದವಾಗುತ್ತದೆ. ಕರ್ನಾಟಕದ ಮರ್ಯಾದೆ ಹರಾಜಾಗುತ್ತಿದೆಯೆಂಬ ಪರಿವೆಯೂ ಇಲ್ಲದೆ ಮೈತ್ರಿಕೂಟದ ಬಣದವರು ಸಭಾಕಲಾಪಕ್ಕೆ ತಡೆಯೊಡ್ಡುತ್ತ ಸಭೆಯ ಸಮಯವನ್ನು ವ್ಯರ್ಥ ಮಾಡಿದರು. ನಿಜಕ್ಕೂ ಮಹತ್ತ್ವದ್ದಾಗಿದ್ದ ಚಂದ್ರಯಾನದ ಯಶಸ್ಸನ್ನು […]
Month : August-2019 Episode : Author :
ತಮ್ಮ ಎರಡನೇ ಅಧಿಕಾರಾವಧಿಯ ಮೊದಲ ‘ಮನ್ ಕೀ ಬಾತ್’ ಪ್ರಸಾರದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಇದೀಗ ನಾಡು ಎದುರಿಸುತ್ತಿರುವ ಅತ್ಯಂತ ಗಂಭೀರ ಸಮಸ್ಯೆಯೆಂದರೆ ಜಲಕ್ಷಾಮ ಎಂದು ಹೇಳಿದುದು ಸಮುಚಿತವಾಗಿದೆ. ನೀರಿನ ಮಿತವ್ಯಯ ಮತ್ತು ಸಂರಕ್ಷಣೆ, ಹಳೆಯ ಹಾಗೂ ಹೊಸ ವಿಧಾನಗಳ ಮೂಲಕ ಜಲಮೂಲಗಳ ಸಂವರ್ಧನ – ಇವು ಆದ್ಯತೆಯನ್ನು ಬೇಡುತ್ತವೆಂಬ ಪ್ರಧಾನಿಯವರ ಕಳಕಳಿಯ ಮಾತನ್ನು ಎಲ್ಲರೂ ಅಂತಃಸ್ಥ ಮಾಡಿಕೊಳ್ಳಬೇಕಾಗಿದೆ. ನೆರೆಯ ಚೆನ್ನೈ ಎದುರಿಸುತ್ತಿರುವ ಜಲಾಭಾವವು ಮನ ಕಲಕುತ್ತದೆ. ಬೆಂಗಳೂರು ಸೇರಿದಂತೆ ಇನ್ನೂ ಇಪ್ಪತ್ತು ನಗರಗಳಲ್ಲಿ ಅಂತರ್ಜಲವಷ್ಟೂ ಕ್ಷಿಪ್ರವಾಗಿ […]
Month : August-2019 Episode : Author :
ಸತ್ಯಂ ದಿಶತ್ಯರ್ಥಿತಮರ್ಥಿತೋ ನೃಣಾಂ ನೈವಾರ್ಥದೋ ಯತ್ಪುನರರ್ಥಿತಾ ಯತಃ | ಸ್ವಯಂ ವಿಧತ್ತೇ ಭಜತಾಮನಿಚ್ಛತಾ – ಮಿಚ್ಛಾಪಿಧಾನಂ ನಿಜಪಾದಪಲ್ಲವಮ್ || – ಭಾಗವತ, ಸ್ಕಂಧ 5, ಅಧ್ಯಾಯ 19, ಶ್ಲೋಕ 27 “ತನ್ನನ್ನು ಬೇಡಿದವರಿಗೆ ಭಗವಂತನು ಅವರು ಕೋರಿದ ಇಷ್ಟಾರ್ಥಗಳನ್ನು ಕೊಡುವುದೇನೊ ದಿಟವೇ. ಆದರೆ ಅಪೇಕ್ಷೆಗಳನ್ನು ಈಡೇರಿಸಿಕೊಂಡವರು ಇನ್ನಷ್ಟು ಕೋರಿಕೆಗಳನ್ನು ಬೆಳೆಸಿಕೊಳ್ಳುತ್ತಾರಲ್ಲ! ಈ ಕಾರಣದಿಂದ ಭಗವಂತನು ಭಕ್ತರು ಕೋರಿದುದನ್ನೆಲ್ಲ ಮನಃಪೂರ್ವಕ ಕೊಡಲು ಮುಂದಾಗುವುದಿಲ್ಲ. ಹೆಚ್ಚಿನ ಕೋರಿಕೆಗಳಲ್ಲಿ ಪರಮಾರ್ಥವೇನೂ ಇರುವುದೂ ಇಲ್ಲ. ಯಾವ ಭಕ್ತರು ಸ್ವಾರ್ಥರಹಿತರೂ ನಿಷ್ಕಾಮರೂ ಆಗಿ […]