ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > 2020

ಕೊರೋನೋತ್ತರ ಆರ್ಥಿಕ ಉಜ್ಜೀವನ

ಕಳೆದ ಆರು ತಿಂಗಳಲ್ಲಿ ಕೊರೋನಾ ವಿಷಾಣು ನಿರ್ವಹಣೆಗೆ ಆದ್ಯತೆ ನೀಡಬೇಕಾಗಿ ಬಂದುದರ ಅನಿವಾರ್ಯತೆಯಿಂದಾಗಿ ಆರ್ಥಿಕ ಕ್ಷೇತ್ರದಲ್ಲಿ ಒಂದಷ್ಟುಮಟ್ಟಿನ ಹಿನ್ನಡೆಯಾದದ್ದು ಸಹಜ. ಹೇಗೊ ಬಂದೊದಗಿದ ವಿಕಟ ಪರಿಸ್ಥಿತಿಗೆ ಪ್ರಧಾನಿಯವರ ಸಕಾಲಿಕ ಕರೆಗೆ ಓಗೊಟ್ಟು ದೇಶದ ಜನತೆಯೆಲ್ಲ ಸಂಯಮವನ್ನೂ ಕ್ಷಮತೆಯನ್ನೂ ಮೆರೆದಿರುವುದು ಮೇಲ್ಮಟ್ಟದ ಹೊಣೆಗಾರಿಕೆಯನ್ನು ಬಿಂಬಿಸಿದೆ. ಜನತೆಯಲ್ಲಿ ಇದೇ ಹೊಣೆಗಾರಿಕೆಯ ಮನೋಧರ್ಮ ಮುಂದುವರಿಯುವುದರಲ್ಲಿ ಸಂದೇಹವಿಲ್ಲ. ಆದುದರಿಂದ ಇದೀಗ ತೋರಿರುವ ಆರ್ಥಿಕ ಹಿನ್ನಡೆಯನ್ನೂ ಜನತೆ ಸವಾಲಾಗಿ ಸ್ವೀಕರಿಸಲು ಸಾರ್ವಜನಿಕರು ಮಾನಸಿಕವಾಗಿ ಸಿದ್ಧರಿರುವರೆಂಬುದರಲ್ಲಿ ಶಂಕೆಗೆ ಕಾರಣವಿಲ್ಲ. ತಾತ್ಕಾಲಿಕ ಹಿನ್ನಡೆಯಿಂದಾಗಿ ಕಳೆದ ಆರು ವರ್ಷಗಳ […]

ಕಾಲೇಜು ವಿದ್ಯಾರ್ಥಿಗಳಿಗಾಗಿ ವಾರ್ಷಿಕ ಪ್ರಬಂಧಸ್ಪರ್ಧೆ – 2020

ಕಾಲೇಜು ವಿದ್ಯಾರ್ಥಿಗಳಿಗಾಗಿ ವಾರ್ಷಿಕ ಪ್ರಬಂಧಸ್ಪರ್ಧೆ - 2020

`ಉತ್ಥಾನ’ ಕನ್ನಡ ಮಾಸಪತ್ರಿಕೆ, ಕಾಲೇಜು ವಿದ್ಯಾರ್ಥಿಗಳಿಗಾಗಿ “ವಾರ್ಷಿಕ ಪ್ರಬಂಧಸ್ಪರ್ಧೆ – ೨೦೨೦” ಆಯೋಜಿಸಿದೆ . ವಿಷಯ: ‘ಆತ್ಮನಿರ್ಭರ ಭಾರತ’ – ನನ್ನ ಜವಾಬ್ದಾರಿಗಳು                 ಮೊದಲ ಬಹುಮಾನ: ರೂ. ೮,೦೦೦                 ಎರಡನೆಯ ಬಹುಮಾನ: ರೂ. ೫,೦೦೦                 ಮೂರನೆಯ ಬಹುಮಾನ: ರೂ. ೩,೦೦೦                 ಎರಡು ಮೆಚ್ಚುಗೆಯ ಬಹುಮಾನಗಳು: ತಲಾ ರೂ. ೧,೦೦೦ ಪ್ರಬಂಧ ಬರೆಯಲು ಕೆಲವು ಆಧಾರಬಿಂದುಗಳು: ಆತ್ಮನಿರ್ಭರತೆ ಎಂದರೆ ಸ್ವಾವಲಂಬಿತ ಬದುಕು. ತನ್ನಲ್ಲಿ ತಾನು ವಿಶ್ವಾಸವಿರಿಸಿ ಯಾರಿಗೂ ಹೊರೆಯಾಗದಂತೆ ಬದುಕುವುದು. ಅದಕ್ಕೆ ಪೂರಕವಾಗುವಂತೆ […]

ಉತ್ಥಾನ ವಾರ್ಷಿಕ ಕಥಾಸ್ಪರ್ಧೆ – 2020

ಉತ್ಥಾನ ವಾರ್ಷಿಕ ಕಥಾಸ್ಪರ್ಧೆ - 2020

ಮೊದಲನೆಯ ಬಹುಮಾನ ರೂ. 15,000ಎರಡನೆಯ ಬಹುಮಾನ ರೂ. 12,000ಮೂರನೆಯ ಬಹುಮಾನ ರೂ. 10,000ಐದು ಮೆಚ್ಚುಗೆಯ ಬಹುಮಾನಗಳು ತಲಾ ರೂ. 2,000 ಕಥೆ ಸ್ವತಂತ್ರವಾಗಿರಬೇಕು. ಭಾಷಾಂತರವಾಗಲಿ, ಅನುಕರಣೆಯಾಗಲಿ ಆಗಿರಕೂಡದು. ಎಲ್ಲೂ ಸ್ವೀಕೃತವಾಗಿರಬಾರದು; ಪರಿಶೀಲನೆಗಾಗಿಯೂ ಯಾವುದೇ ಅನ್ಯ ಪತ್ರಿಕೆ, ಸಂಸ್ಥೆಗೆ ಕಳುಹಿಸಿರಬಾರದು. ಸಾಮಾಜಿಕ ಜಾಲತಾಣಗಳಲ್ಲೂ ಪ್ರಕಟವಾಗಿರಬಾರದು. ಒಬ್ಬರು ಒಂದು ಕಥೆಯನ್ನು ಮಾತ್ರ ಕಳುಹಿಸಬಹುದು. ಬಹುಮಾನಿತ ಕಥೆ ’ಉತ್ಥಾನ’ದಲ್ಲಿ ಪ್ರಕಟವಾಗುವವರೆಗೂ ಬೇರೆ ಎಲ್ಲೂ ಗ್ರಂಥರೂಪದಲ್ಲಾಗಲಿ, ಸಾಮಾಜಿಕ ಜಾಲತಾಣಗಳಲ್ಲಾಗಲಿ, ಪತ್ರಿಕೆ, ಆಕಾಶವಾಣಿ ಅಥವಾ ದೂರದರ್ಶನದಲ್ಲಾಗಲಿ ಪ್ರಕಟಣೆಗೆ, ಪ್ರಸಾರಕ್ಕೆ ಅವಕಾಶವಿಲ್ಲ. ಕಾಗದದ ಒಂದೇ ಮಗ್ಗುಲಲ್ಲಿ […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ