ಲೇಖಕರು: ಡಾ. ವಿಶ್ವನಾಥ ಸುಂಕಸಾಳ
ಭಾರತಮಾತೆಯ ಕಿವಿಯೋಲೆ ಮಣಿಪುರ:
ಇತಿಹಾಸ, ವರ್ತಮಾನದ ಘಟನೆಗಳು ಮತ್ತು ಕಾರಣಗಳು
Month : August-2023 Episode : Author : ಡಾ. ವಿಶ್ವನಾಥ ಸುಂಕಸಾಳ
Month : August-2023 Episode : Author : ಡಾ. ವಿಶ್ವನಾಥ ಸುಂಕಸಾಳ
ಲೇಖಕರು: ಡಾ. ವಿಶ್ವನಾಥ ಸುಂಕಸಾಳ
Month : August-2023 Episode : Author : ಡಾ. ರೋಹಿಣಾಕ್ಷ ಶಿರ್ಲಾಲು
ದಯಾನಂದ ಸರಸ್ವತಿಗಳ ಇನ್ನೂರನೇ ಜನ್ಮದಿನ ಪರ್ವದ ಸ್ಮರಣೆಯ ನಿಮಿತ್ತ ವಿಶೇಷ ಲೇಖನ ಲೇಖಕರು: ಡಾ. ರೋಹಿಣಾಕ್ಷ ಶಿರ್ಲಾಲು
Month : August-2023 Episode : Author : ಎಸ್.ಆರ್. ರಾಮಸ್ವಾಮಿ
೧೯೪೭ರ ಜನವರಿ ೧೬ರ ವೇಳೆಗೇ ಆಟ್ಲಿ ಭಾರತದಿಂದ ಬ್ರಿಟನ್ ನಿರ್ಗಮಿಸಲು ದಿನಾಂಕವೊಂದನ್ನು ಘೋಷಿಸಲೇಬೇಕಾಗುತ್ತದೆಂಬ ನಿಶ್ಚಯಕ್ಕೆ ಬಂದಿದ್ದುದು ಸ್ಪಷ್ಟ. ಈ ಘೋಷಣೆಗೆ ಮುಂಚೆ ಹಿಂದೂ-ಮುಸ್ಲಿಮರನ್ನು ಒಗ್ಗೂಡಿಸುವ ಒಂದು ಆಖೈರು ಪ್ರಯತ್ನ ಮಾಡಬೇಕೇ ಬೇಡವೇ, ಮೌಂಟ್ಬ್ಯಾಟನ್ನನ್ನು ನಿಯುಕ್ತಗೊಳಿಸುವ ಪ್ರಕಟಣೆಯಲ್ಲಿ ಈ ದಿನಾಂಕದ ಉಲ್ಲೇಖ ಇರಬೇಕೇ ಬೇಡವೇ – ಇವೆಲ್ಲ ಗೌಣವೇ ಆಗಿತ್ತು. ಸ್ವಾರಸ್ಯದ ಸಂಗತಿಯೆಂದರೆ – ನಿಶ್ಚಿತ ದಿನಾಂಕ ಘೋಷಿಸಿದ ಹೊರತು ತಾನು ವೈಸರಾಯ್ ಪದವಿಯನ್ನು ಸ್ವೀಕರಿಸುವುದಿಲ್ಲವೆಂದು ಮೌಂಟ್ಬ್ಯಾಟನ್ ಹಟ ಹಿಡಿದ. ೧೯೪೧ರ ಡಿಸೆಂಬರ್ ೭ರಂದು ಪರ್ಲ್ ಹಾರ್ಬರ್ ಮೇಲೆ […]
Month : August-2023 Episode : Author :
Month : August-2023 Episode : Author :
Month : August-2023 Episode : Author : ಶ್ರೀ ಸಿದ್ಧೇಶ್ವರಸ್ವಾಮಿಗಳು, ವಿಜಾಪುರ
ಬಹಿರಂಗದ ವಸ್ತುಗಳನ್ನು ಶಬ್ದಗಳಿಂದ ವರ್ಣಿಸುವುದು ಸುಲಭ. ಅಂತರಂಗದ ಭಾವನೆಗಳನ್ನು ಅಷ್ಟು ಸುಲಭವಾಗಿ ವರ್ಣಿಸಲಾಗದು. ಸುಖದುಃಖಾದಿ ಲೌಕಿಕ ಭಾವನೆಗಳನ್ನು ಹೇಗಾದರೂ ವರ್ಣಿಸಬಹುದು. ಅತ್ಯಂತ ಸೂಕ್ಷ್ಮವಾದ ಅಲೌಕಿಕ ಭಕ್ತಿಭಾವವನ್ನು ವರ್ಣಿಸುವುದು ಕಷ್ಟ. ಸೀಮಿತ ಸ್ಥೂಲ ವಸ್ತುಗಳನ್ನು ವರ್ಣಿಸಬಹುದು. ಆದರೆ ಭಕ್ತಿ ಭಾವವು ನಿಸ್ಸೀಮವೂ, ಸೂಕ್ಷ್ಮವೂ ಆಗಿದೆ. ಆದ್ದರಿಂದ ಭಕ್ತಿಯನ್ನು ವರ್ಣಿಸಲಾಗದು. ಜಗತ್ತಿನಲ್ಲಿ ಅನೇಕ ಶ್ರೇಷ್ಠ ಕವಿಗಳು ಮಾನವಪ್ರೇಮ ಕುರಿತು ಸಾವಿರ ಸಾವಿರ ಕಾವ್ಯಗ್ರಂಥಗಳನ್ನು ರಚಿಸಿದ್ದಾರೆ. ಆದರೂ ‘ಆ ಪ್ರೇಮದ ಸಮಗ್ರ ವರ್ಣನೆ ಆಯಿತು’ ಎಂದು ಯಾರೂ ಭಾವಿಸಿಲ್ಲ. ಮಾನವರ ಸಾಮಾನ್ಯವಾದ […]
Month : August-2023 Episode : Author : ಸತ್ಯನಾರಾಯಣ ಶಾನಭಾಗ್
ಹಿಂದು ಎಂದರೆ ಏನು/ಯಾರು? ಹಿಂದುತ್ವ ಎಂದರೇನು? – ಇದು ಸರಿಯಾಗಿ ಉತ್ತರ ಸಿಗದ ಅಥವಾ ಅನೇಕ ಉತ್ತರಗಳನ್ನು ಕೊಡುವ ಅಥವಾ ಅಪವ್ಯಾಖ್ಯಾನಕ್ಕೊಳಗಾದ ಸಂಗತಿ. ಸಾವರಕರರಿಂದ ಆರ್ಎಸ್ಎಸ್ನ ಇಂದಿನ ಸರಸಂಘಚಾಲಕರವರೆಗೆ ಅನೇಕ ಮಹನೀಯರು ಹಿಂದು-ಹಿಂದುತ್ವದ ವ್ಯಾಖ್ಯೆಯನ್ನು ಅರ್ಥೈಸುವ, ಅದರ ವ್ಯಾಪ್ತಿಯನ್ನು ನಿರ್ದೇಶಿಸುವ ಪ್ರಯತ್ನಗಳನ್ನು ಮಾಡುತ್ತಲೇ ಬಂದಿದ್ದಾರೆ. ನ್ಯಾಯಾಲಯಗಳೂ ಯತ್ನಿಸಿವೆ. ಲೇಖಕರು ಹೇಳುವಂತೆ ‘ಅದು ಒಂದು ಜೀವನವಿಧಾನ’ ಎಂದಷ್ಟೆ ಹೇಳಿದರೆ ಸ್ಪಷ್ಟತೆ ಸಿಗುವುದಿಲ್ಲ. ಈ ಹಿನ್ನೆಲೆಯಲ್ಲಿ ಹಿಂದುಗಳ ಸಾಮಾನ್ಯ ಗುಣಲಕ್ಷಣಗಳಲ್ಲಿ ಹತ್ತೊಂಭತ್ತು ಅಂಶಗಳನ್ನು ಲೇಖಕರು ಪಟ್ಟಿ ಮಾಡುತ್ತಾರೆ. ಆ ಮೂಲಕ […]
Month : August-2023 Episode : Author : ಅನಂತ ರಮೇಶ್
ಹೊಸ ತೆರಿಗೆಯನ್ನು ದೇಶಕ್ಕೆ ಪ್ರಸ್ತುತಿಪಡಿಸುವ ಸಮಯದಲ್ಲಿ ಪ್ರಧಾನಿ ಮೋದಿಯವರು ಆಡಿದ ಕೆಲವು ಸದಾಶಯದ ಮಾತುಗಳು ಜಿಎಸ್ಟಿ ಜಾರಿಯಾದ ಆರು ವರ್ಷಗಳ ನಂತರವೂ ಪ್ರಸ್ತುತ. “ಜಿಎಸ್ಟಿಯು ದೇಶದ ವ್ಯಾಪಾರದಲ್ಲಿನ ಅಸಮತೋಲನವನ್ನು ಕೊನೆಗೊಳಿಸುವ ವ್ಯವಸ್ಥೆಯಾಗಿದೆ. ಇದು ದೇಶದ ರಫ್ತುಗಳನ್ನು ಹೆಚ್ಚಿಸುತ್ತದೆ. ಈ ವ್ಯವಸ್ಥೆಯು ಈಗಾಗಲೇ ಅಭಿವೃದ್ಧಿ ಹೊಂದಿದ ರಾಜ್ಯಗಳಿಗೆ ಮತ್ತಷ್ಟು ಬಲ ನೀಡಿದೆ. ಹಿಂದುಳಿದ ರಾಜ್ಯಗಳ ಅಭಿವೃದ್ಧಿಯ ಅವಕಾಶವನ್ನು ಹೊಸತೆರಿಗೆ ವ್ಯವಸ್ಥೆ ಒದಗಿಸುತ್ತದೆ. ನಮ್ಮ ರಾಜ್ಯಗಳು ನೈಸರ್ಗಿಕ ಸಂಪನ್ಮೂಲಗಳಿಂದ ಸಮೃದ್ಧವಾಗಿವೆ. ಬಿಹಾರ, ಪೂರ್ವ ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಈಶಾನ್ಯ, ಒಡಿಶಾ […]
Month : August-2023 Episode : Author : ಗುರುರಾಜ ಗಂಟಿಹೊಳೆ
ಬೈಂದೂರು ವ್ಯಾಪ್ತಿಯ ರೈತರಿಗೆ ಸಮರ್ಪಕ ನೀರು ಒದಗಿಸುವ ಏತನೀರಾವರಿ ಯೋಜನೆಗೆ ೭೪ ಕೋಟಿ ಅನುದಾನ ನೀಡಿದೆ; ವಿಪರ್ಯಾಸವೇನೆಂದರೆ, ಕಾಲುವೆಯಲ್ಲಿ ಮಾತ್ರ ನೀರಿಲ್ಲ. ೨೦೧೩-೧೪ರ ಬಜೆಟ್ ಸಂದರ್ಭ ಈ ಸೌಪರ್ಣಿಕಾ ಏತನೀರಾವರಿ ಯೋಜನೆ ಮುಕ್ತಾಯಗೊಂಡಿದೆ ಎನ್ನುವ ಹೇಳಿಕೆಯನ್ನು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದರು. ಯೋಜನೆ ಮುಕ್ತಾಯಗೊಂಡು ೧೦ ವರ್ಷ ಸಮೀಪಿಸುತ್ತಿದ್ದರೂ ಇನ್ನೂ ಕೂಡ ಈ ಭಾಗದ ಜನರು ನೀರಿಗಾಗಿ ಪರದಾಡುವ ಪರಿಸ್ಥಿತಿ ಮುಗಿದಿಲ್ಲ. ಇನ್ನೂ ಏತನೀರಾವರಿ ಕುರಿತ ಅಧ್ಯಯನದಲ್ಲೂ ಕೂಡ ಸಾಕಷ್ಟು ಗೊಂದಲಗಳಿದ್ದು, ಅಣೆಕಟ್ಟು ನೀರು ಹರಿವಿನ ಕುರಿತು […]
Month : August-2023 Episode : Author : ರಾಧಾಕೃಷ್ಣ ಕಲ್ಚಾರ್
ಪಾಂಡವರನ್ನು ನಾಶಮಾಡುವ ಅಪ್ಪನ ಉದ್ದೇಶ ಫಲಿಸಲಿಲ್ಲ. ಹಿರಿಯರ ಒತ್ತಾಯದಿಂದಾಗಿ ಇಂದ್ರಪ್ರಸ್ಥವನ್ನು ಪಾಂಡವರ ಪಾಲಿಗೆ ಬಿಟ್ಟುಕೊಡಲೇಬೇಕಾಯಿತು. ಇದರಿಂದ ಕುರು-ಪಾಂಡವರ ನಡುವೆ ದ್ವೇಷ ತಗ್ಗಿ, ಸ್ವಲ್ಪ ಸುಹೃತ್ ಭಾವ ಉಂಟಾಯಿತು. ಆದರೂ ರಾಜ್ಯಾಧಿಕಾರಕ್ಕಾಗಿ ದಾಯಾದಿಗಳ ಕೊಲೆಗೆ ಹೇಸದ ಮನಸ್ಸು ಅಪ್ಪನದು ಎಂಬ ಅರಿವು ನನ್ನಲ್ಲಿ ಏನೋ ಒಂದು ವಿಚಿತ್ರ ಪರಿವರ್ತನೆಗೆ ನಾಂದಿಯಾಯಿತು. ಅಪ್ಪನಿಗೆ ಹೋಲಿಸಿದರೆ ದೊಡ್ಡಪ್ಪ ಯುಧಿಷ್ಠಿರನಾಗಲಿ ಅಥವಾ ಉಳಿದ ಪಾಂಡವರಾಗಲಿ ಸಜ್ಜನರು ಎಂದು ಕಾಣುತ್ತಿತ್ತು. ಮಗಳಾದ ನನಗೇ ಹೀಗೆ ಅನಿಸಬೇಕಾದರೆ ಜನರಿಗೆ ಹೇಗೆ ತೋರಬೇಡ? ನನ್ನ ಹೆಸರು ಲಕ್ಷಣಾ. […]