ಅಮುಲ್ ಸಂಸ್ಥೆಯ ಸರ್ವತೋಮುಖ ಯಶಸ್ಸು ದೇಶಾದ್ಯಂತ ಅಲೆಗಳನ್ನು ಎಬ್ಬಿಸಿತು. ಗುಜರಾತ್ನ ಹಳ್ಳಿ ಮೂಲೆಯಿಂದ ಹಬ್ಬಿದ ಅಲೆ ಎಲ್ಲೆಡೆ ಪಸರಿಸಿತು. ‘ಆನಂದ್ ಪ್ಯಾಟರ್ನ್’ (ಮಾದರಿ) ನೋಡಲು ಜನ ಬಂದರು. ರೈತರಿಗೆ ಸಲ್ಲಬೇಕಾದ್ದನ್ನು ದಿಟ್ಟತನದಿಂದ ಪಡೆದವರೆಂದು ಕುರಿಯನ್ರನ್ನು ಗುರುತಿಸಿದರು. ಹಾಗೆ ಗುರುತಿಸಿದವರಲ್ಲಿ ಒಬ್ಬರು ೧೯೬೪ರ ಹೊತ್ತಿಗೆ ಕೇಂದ್ರದ ಜನಪ್ರಿಯ ಕೃಷಿ ಸಚಿವರಾಗಿದ್ದ ಸಿ. ಸುಬ್ರಹ್ಮಣ್ಯಮ್ ಅವರು. ದೆಹಲಿಯ ತಮ್ಮ ಕಚೇರಿಗೆ ಕರೆದ ಅವರು ಇದ್ದಕ್ಕಿದ್ದಂತೆ “ದೆಹಲಿಯ ಮಿಲ್ಕ್ ಸ್ಕೀಂನ (ಡಿಎಂಎಸ್) ಹೊಣೆಯನ್ನು ವಹಿಸಿಕೊಳ್ಳಬೇಕು” ಎಂದರು. ಕುರಿಯನ್ರಿಗೆ ಆಶ್ಚರ್ಯ. ೧೯೫೩ರ ಏಪ್ರಿಲ್ನಲ್ಲಿ […]









