ದೇಶದ ಸಮುನ್ನತ ವೇದಿಕೆಯಲ್ಲಿ ಪ್ರತಿಪಕ್ಷಗಳಿಗೆ ಲಭ್ಯವಿರುವ ಆತ್ಯಂತಿಕ ಸಾಧನವೆಂದರೆ ಅವಿಶ್ವಾಸ ಗೊತ್ತುವಳಿ. ಈ ಬ್ರಹ್ಮಾಸ್ತ್ರವನ್ನು ಅವು ಬಾಲಿಶವಾಗಿ ವ್ಯರ್ಥಮಾಡಿಕೊಂಡವೆಂದು ಹೇಳಬೇಕಾಗಿದೆ. ಮೊದಲನೆಯದಾಗಿ: ಮಣಿಪುರ ಘಟನಾವಳಿ ಗಂಭೀರ ಪರಾಮರ್ಶನೆಗೆ ಅರ್ಹವಾದ ಸಂಗತಿಯಾದರೂ ಇದೊಂದನ್ನು ಅವಲಂಬವಾಗಿರಿಸಿಕೊಂಡು ಅವಿಶ್ವಾಸನಿರ್ಣಯದಂತಹ ಅಂತಿಮ ಅಸ್ತ್ರದ ಮೊರೆಹೊಗುವುದು ಎಷ್ಟುಮಟ್ಟಿಗೆ ಉಚಿತ? ಕಳೆದ ಮಳೆಗಾಲದ ಸಂಸದಧಿವೇಶನ ಸಂದರ್ಭವನ್ನು ಕಾಂಗ್ರೆಸ್ ವ್ಯರ್ಥ ಮಾಡಿಕೊಂಡಿತೆಂದೇ ಹೇಳಬೇಕಾಗಿದೆ. ಈಶಾನ್ಯ ರಾಜ್ಯ ಮಣಿಪುರದಲ್ಲಿ ಎರಡು ಬಣಗಳ ನಡುವೆ ನಡೆದಿರುವ ಘರ್ಷಣೆಯಲ್ಲೇ ಪ್ರತಿಪಕ್ಷಗಳು ತಮ್ಮ ಗಮನವನ್ನೆಲ್ಲ ಕೇಂದ್ರೀಕರಿಸಿದವು. ಆ ಪ್ರಾಂತದಲ್ಲಿ ಕೇಂದ್ರಸರ್ಕಾರ ನಡೆಸಿರುವ ಪ್ರಯಾಸಗಳ […]
ಅವಿಶ್ವಾಸ ಪ್ರಸ್ತಾವ: ಕಾಂಗ್ರೆಸಿನ ಸೆಲ್ಫ್-ಗೋಲ್
Month : October-2023 Episode : Author : -ಎಸ್.ಆರ್.ಆರ್.