ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಅಕ್ಟೋಬರ್ 2023 > ಬಾಹ್ಯಾಕಾಶ ವಿಜ್ಞಾನ: ಭಾರತದ ಅನುಪಮ ಸಾಧನೆ

ಬಾಹ್ಯಾಕಾಶ ವಿಜ್ಞಾನ: ಭಾರತದ ಅನುಪಮ ಸಾಧನೆ

ಕಳೆದ (೨೦೨೩) ಜುಲೈ ೧೪ರಂದು ಶ್ರೀಹರಿಕೋಟಾದ ಸತೀಶ್‌ಧವನ್ ವೇದಿಕೆಯಿಂದ ಯಶಸ್ವಿಯಾಗಿ ಉಡ್ಡಯನಗೊಂಡ ಇಸ್ರೋ-ನಿರ್ಮಿತ ಚಂದ್ರಯಾನ-೩ ಬಾಹ್ಯಾಕಾಶ ನೌಕೆ ಈ ಪ್ರೌಢಕ್ಷೇತ್ರದಲ್ಲಿ ಭಾರತದ ವಿಜ್ಞಾನಿಗಳ ಮೇಲ್ಮಟ್ಟದ ಸಾಧನೆಯನ್ನು ಅಸಂದಿಗ್ಧವಾಗಿ ಸಾಕ್ಷ್ಯಪಡಿಸಿದೆ. ಹಾಗೆ ನೋಡಿದರೆ ಇದು ಭಾರತದ ಮೊದಲ ಅಥವಾ ಏಕೈಕ ಸಾಧನೆಯೇನಲ್ಲ. ಇಸ್ರೋ ೪೨೪ ಉಪಗ್ರಹಗಳನ್ನು ಉಡಾವಣೆ ಮಾಡಿದೆ. ಪ್ರಥಮ ಪ್ರಯತ್ನದಲ್ಲಿಯೆ ಮಂಗಳಗ್ರಹದ ಕಕ್ಷೆಯನ್ನು ಪ್ರವೇಶಿಸಿದ ಮೊತ್ತಮೊದಲ ದೇಶ ಭಾರತವೇ. ಇದುವರೆಗೆ ನಿಷ್ಕ್ರಿಯವೆಂದೂ ವಾಸಯೋಗ್ಯವಲ್ಲವೆಂದೂ ಭಾವಿಸಲಾಗಿದ್ದ ಚಂದ್ರನಲ್ಲಿ ನೀರಿನ ಮತ್ತು ಮಂಜುಗಡ್ಡೆಯ ಇರುವಿಕೆಯನ್ನು ಸಾಬೀತುಪಡಿಸಿರುವುದು ಭಾರತ. ಇದೀಗ ಭಾರತ ನಡೆಸಿರುವ ಸೂರ್ಯಶಿಕಾರಿಯಿಂದಲೂ ಅಭೂತಪೂರ್ವ ಮಾಹಿತಿ ಲಬ್ಧವಾಗುವುದು ನಿಶ್ಚಿತ. ನಮ್ಮ ವಿಜ್ಞಾನಿಗಳ ಅನುಪಮ ಸಾಧನೆಗೆ ಆಬಾಲವೃದ್ಧರಾಗಿ ದೇಶವೆಲ್ಲ ಸಂಭ್ರಮಿಸುತ್ತಿರುವುದು ಸಹಜ.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ