ಉಡುಗೊರೆ
ಕವಿತಾ: ರೀ…. ಮೊನ್ನೆ ರಕ್ಷಾಬಂಧನ ಹಬ್ಬಕ್ಕೆ ನಮ್ಮಣ್ಣನಿಗೆ ರಾಖಿ ಕಟ್ಟಿದ್ದಕ್ಕೆ ೧೦ ಗ್ರಾಂ ಚಿನ್ನ ಕೊಡಿಸಿದ ಗೊತ್ತೇನ್ರಿ!
ಸವಿತಾ: ಅಯ್ಯೋ ಅದೇನ್ ಮಹಾ ಬಿಡ್ರಿ, ನಾನು ರಾಖಿ ಕಟ್ಟಿದ್ದಕ್ಕೆ ನನ್ನ ತಮ್ಮ ೧೦ ಮೂಟೆ ಈರುಳ್ಳಿ ಕಳ್ಸಿದಾನೆ!
ಯೋಗ್ಯತೆ
ಹುಡುಗಿ ತಂದೆ: ಹುಡುಗ ಏನ್ ಮಾಡಿಕೊಂಡಿದ್ದಾನೆ?
ಪುರೋಹಿತರು: ಒಂದು ಹತ್ತು ಎಕರೆ ಈರುಳ್ಳಿ ಬೆಳೆಯೋ ಭೂಮಿ ಇದೆ…
ಹುಡುಗಿ ತಂದೆ: ಹೌದಾ! ಮತ್ತೆ ಹೆಣ್ಣುತೋರಿಸೋ ಕಾರ್ಯಕ್ರಮ ಯಾವಾಗ ಇಟ್ಕೊಳ್ಳೋಣಾಂತೀರಾ!?
ಸೇಫ್ಟಿಗೆ
ರಾಯರು: ೨೦ ಕಿ.ಗ್ರಾಂ. ಈರುಳ್ಳಿ ಕೊಡಿ.
ತರಕಾರಿ ವ್ಯಾಪಾರಿ: ಸರಿ, ನಿಮ್ಮ ಪ್ಯಾನ್ಕಾರ್ಡ್ ನಂಬರ್ ಹೇಳಿ ಸರ್! ಸೇಫ್ಟಿಗೆ ಇರಲಿ ಅಂತ….
ಕಂಡೀಶನ್ನು
ಮಾಣಿ: ಏನ್ ಕೊಡ್ಲಿ ಸಾರ್…
ಗಿರಾಕಿ: ಉತ್ತಪ್ಪ ಇದೆಯಾ?
ಮಾಣಿ: ಇದೆ… ಆದ್ರೆ ಒಂದು ಕಂಡೀಷನ್!
ಗಿರಾಕಿ: ಏನೋ ಅದು?
ಮಾಣಿ: ಕೊಟ್ಟಿರೋ ಉತ್ತಪ್ಪದಲ್ಲಿ ಈರುಳ್ಳಿ ಹುಡುಕೋ ಪ್ರಯತ್ನ ಮಾಡಬಾರದು…
ವೆಡ್ಡಿಂಗ್ ಸ್ಪೆಷಲ್
ಹೆಂಡತಿ: ರೀ, ನಾಳೆ ನಮ್ ವೆಡ್ಡಿಂಗ್ ಡೇ.. ಸ್ಪೆಷಲ್ ಅಡಿಗೆ ಏನ್ ಮಾಡ್ಲಿ ?
ಗಂಡ: ಚಪಾತಿಗೆ ಈರುಳ್ಳಿ ಪಲ್ಯ ಮಾಡು. ಈರುಳ್ಳಿ ಮುಖ ನೋಡಿಯೇ ಹದಿನೈದು ದಿನ ಆಯ್ತು!
ಕ್ರಿಕೆಟ್ ಆಡ್ತೀನಿ
ಮಗ: ಅಪ್ಪ, ನಿನ್ನ ದಿನಾ ಕೇಳಿ ಕೇಳಿ ಸಾಕಾಯಿತು. ಕೊನೆ ಸಾರಿ ಕೇಳ್ತಿದ್ದೀನಿ ಕ್ರಿಕೆಟ್ ಆಡೋಕೆ ಬಾಲ್ ಕೊಡಿಸ್ತೀಯೋ ಇಲ್ವೋ!
ತಂದೆ: ಕೊಡ್ಸೊಲ್ಲಾಂದ್ರೆ ಏನೋ ಮಾಡ್ತೀಯಾ?
ಮಗ: ಮನೆಯಲ್ಲಿ ಇರೋ ಎಲ್ಲಾ ಈರುಳ್ಳಿ ತೆಗೆದುಕೊಂಡು ಹೋಗಿ ಕ್ರಿಕೆಟ್ ಆಡ್ತೀನಿ ಅಷ್ಟೇ!
ದೊಡ್ಡಮನೆ ಹುಡುಗ
ರಸ್ತೆಯಲ್ಲಿ…
ಕಮಲ: ಏನ್ರಿ ಆ ಹುಡುಗನ ಬಾಯಿ ಅಷ್ಟೊಂದು ವಾಸನೆ ಬರ್ತಿದೆ?
ಅಮಲ: ಶ್ರೀಮಂತರ ಮನೆ ಹುಡುಗ ಇರ್ಬೇಕು; ಈರುಳ್ಳಿ ತಿಂದು ಬಂದ ಹಾಗಿದೆ!
ಹುಟ್ಟುವುದಕ್ಕೂ ಮುಂಚೇನೇ
ಟೀಚರ್: ಸಾಕು ನಿಲ್ಸೋ, ಹುಟ್ಟುವಾಗ್ಲೇ ಈರುಳ್ಳಿ ತಗೊಂಡು ಬಂದವನ ಥರ ಆಡ್ಬೇಡ.
ಪೋಲೇಶಿ: ನಾನು ಹುಟ್ಟುವುದಕ್ಕೂ ಮುಂಚೇನೇ ನಮ್ಮಪ್ಪ ಈರುಳ್ಳಿ ವ್ಯಾಪಾರಿ, ಟೀಚರ್.
ಬಿ. ರಾಮಪ್ರಸಾದ್ ಭಟ್