
ಸುಶಿಕ್ಷಿತ ನಾಗರಿಕ ಸಮಾಜವು ಯಾವತ್ತೂ ಹಿಂಸೆಯನ್ನು ಬಯಸುವುದಿಲ್ಲ. ಏಕೆಂದರೆ ಹಿಂಸೆಯು ವೈಯಕ್ತಿಕವಾಗಿ ಅಶಾಂತಿಯನ್ನೂ, ಸಾಮಾಜಿಕವಾಗಿ ಕ್ಷೋಭೆಯನ್ನೂ ತರುತ್ತದೆ. ಹಿಂಸೆಯಿದ್ದಾಗ ಪ್ರಗತಿಯೆನ್ನುವುದು ಮರೀಚಿಕೆಯಾಗುತ್ತದೆ. ಶಾಂತಿಯಿದ್ದಾಗ ಮಾತ್ರ ವಿಕಾಸವು ಸಾಧ್ಯವಾಗುತ್ತದೆ. ಹಿಂಸೆಯು ಮಾನವೀಯತೆಯನ್ನೇ ಅಳಿಸಿಹಾಕುತ್ತದೆ. ಹಿಂಸೆಗೆ ಕೈ-ಕಾಲುಗಳಿರುತ್ತವೆಯೇ ವಿನಾ ಯೋಚಿಸುವ ತಲೆಯೇ ಇರುವುದಿಲ್ಲ. ಮನುಷ್ಯನಲ್ಲಿ ಹಿಂಸೆ ಕೆರಳಿದಾಗ ಆತ ತನ್ನ ವಿವೇಚನಾಶಕ್ತಿಯನ್ನೇ ಕಳೆದುಕೊಳ್ಳುತ್ತಾನೆ. ಜನರ ಗುಂಪಿಗೆ ಹಿಂಸೆಯ ಆಕರ್ಷಣೆ ಜಾಸ್ತಿ. ಏಕೆಂದರೆ ಅಲ್ಲಿ ಭಾವನೆಗೆ ಬೆಲೆಯೇ ವಿನಾ ವಿವೇಕಕ್ಕೆ ಅಲ್ಲ. ಮನುಷ್ಯ ಭಾವುಕನಾದಾಗ ವಿವೇಕಶೂನ್ಯನಾಗುತ್ತಾನೆ. ಆಗ ಆತನ ಬುದ್ಧಿ ಆತನ […]