ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಮೇ-ಜೂನ್ 2020 > ಗೋವ ಕಾವ ಹುಡುಗ

ಗೋವ ಕಾವ ಹುಡುಗ

ಗೋವ ಕಾವ ಹುಡುಗ, ನೀ ಹೋಗಬೇಡ ಈಗ

ಕಾಯಿಸಿದ ಹಾಲು ಕೊಡುವೆ, ಕಲ್ಲುಸಕ್ಕರೆ ಕೊಡುವೆ

ಕೈತುಂಬ ಬೆಣ್ಣೆ ಕೊಡುವೆ, ಹೊರಗೆಲ್ಲು ಹೋಗಬೇಡ ||

ಕಾಯಿಸಿದ ಹಾಲು ಬೇಡ, ಕಲ್ಲುಸಕ್ಕರೆ ಬೇಡ

ಉಲ್ಲಾಸದಿ ಗೋವ ಕಾಯ್ದು ಒಂದು ಕ್ಷಣದಿ ಮರಳಿ ಬರುವೆ

ಹೋಗಬೇಕು ಅಮ್ಮ, ನೀನು ತಡೆವುದೇತಕಮ್ಮ ||

ಯಮುನಾ ನದಿ ದಡದಿ ಕಳ್ಳರೆಲ್ಲ ಬಹಳಿಹರು

ಕಳ್ಳರು ಬಂದು ನಿನ್ನ ಹೊಡೆಯೆ ಭಯಪಡುವೆ ಕಣ್ಮಣಿಯೆ

ಗೋವ ಕಾವ ಹುಡುಗ, ನೀ ಹೋಗಬೇಡ ಈಗ ||

ಕಳ್ಳರನ್ನು ಕಂಡವರು ಇದ್ದಾರೊ ಹೇಳು ಅಮ್ಮ

ಒಂದು ವೇಳೆ ಇದ್ದರೂ ಬಡಿದು ಅವರ ಮಣಿಸುವೆನು

ಹೋಗಬೇಕು ಅಮ್ಮ, ನೀನು ತಡೆವುದೇತಕಮ್ಮ ||

ಘೋರವಾದ ಪ್ರಾಣಿಗಳು ಗೋವರ್ಧನ ಬೆಟ್ಟದಲಿ

ಕರಡಿ ಹುಲಿ ಕಂಡರೆ ನೀ ಭಯಪಡುವೆ ಕಣ್ಮಣಿಯೆ

ಗೋವ ಕಾವ ಹುಡುಗ, ನೀ ಹೋಗಬೇಡ ಈಗ ||

ಕಾಡಿನ ಮೃಗಗಳೆಲ್ಲ ನನ್ನ ಕಂಡು ಓಡುವವು

ಒಂದುಗೂಡಿ ಬಂದರು ಬೇಟೆಯಾಡಿ ಜಯಿಸಬಲ್ಲೆ

ಹೋಗಬೇಕು ಅಮ್ಮ, ನೀನು ತಡೆವುದೇತಕಮ್ಮ ||

ಪ್ರೀತಿಯಿಂದ ನಂದಗೋಪ ‘ಮಗನು ಎಲ್ಲಿ?’ ಎಂದು ಕೇಳೆ

ಏನೆಂದು ಹೇಳಲವಗೆ, ನನ್ನೊಲವ ಕಣ್ಮಣಿಯೆ

ಗೋವ ಕಾವ ಹುಡುಗ, ನೀ ಹೋಗಬೇಡ ಈಗ ||

‘ಬಾಲಕರ ಜೊತೆಯಲಿ ಚೆಂಡಿನಾಟ ಆಡುತಿಹನು’

ನೀನು ಹುಡುಕಿ ಕರೆದೊಡನೆ ಓಡಿ ಬಂದು ನಿಲ್ಲುವೆನು

ಹೋಗಬೇಕು ಅಮ್ಮ, ನೀನು ತಡೆವುದೇತಕಮ್ಮ ||

(ಮೂಲ ತಮಿಳು ಪದ್ಯ:  ‘ಮಾಡ್ ಮೈಕ್ಕುಂ ಕಣ್ಣಾ’)

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ