ಏಕಕಾಲ ಚುನಾವಣೆ
Month : March-2017 Episode : Author : ಎಸ್.ಆರ್. ರಾಮಸ್ವಾಮಿ
Month : March-2017 Episode : Author : ಎಸ್.ಆರ್. ರಾಮಸ್ವಾಮಿ
Month : October-2016 Episode : Author : ಎಸ್.ಆರ್. ರಾಮಸ್ವಾಮಿ
ಕೇವಲ ಆರ್ಥಿಕ ವಹಿವಾಟಿನ ಹೆಚ್ಚಳವಷ್ಟನ್ನೆ ಅಭಿವೃದ್ಧಿಯೆಂದು ಪರಿಗಣಿಸಲಾಗದು ಕಳೆದ (೨೦೧೬) ಮೇ ಅಂತ್ಯದಲ್ಲಿ ’ಈಗ ಶೇ. ೭.೬ರಷ್ಟು ವಾರ್ಷಿಕವೃದ್ಧಿವೇಗದಲ್ಲಿ ವರ್ಧಿಸುತ್ತಿರುವ ಭಾರತದ ಆರ್ಥಿಕತೆ ಅನ್ಯರಾಷ್ಟ್ರಗಳಿಗಿಂತ ಆರ್ಥಿಕವಾಗಿ ಉನ್ನತ ಸ್ತರದಲ್ಲಿ ಇದೆ” ಎಂದು ಕೇಂದ್ರ ಸರ್ಕಾರದಿಂದ ಹೊರಬಿದ್ದ ಹೇಳಿಕೆ ಹಲವು ವಲಯಗಳಲ್ಲಿ ಟೀಕೆಗೆ ಗುರಿಯಾಯಿತು. ತಥೋಕ್ತ ವೃದ್ಧಿವೇಗ ಮಂಡನೆ ಉತ್ಪ್ರೇಕ್ಷಿತವೆಂದು ಹಲವರು ತಜ್ಞರ ಅಭಿಮತವಿದೆ. ಆ ವೃದ್ಧಿವೇಗದ ಗಣನೆಗೆ ಆಧಾರವಾದ ತಃಖ್ತೆಗಳಲ್ಲಿ ರೂ. 1,40,000 ಕೋಟಿಗಳಷ್ಟು ವ್ಯತ್ಯಾಸವಿದೆ – ಎಂದು ಆರ್ಥಿಕತಜ್ಞ-ಪತ್ರಕರ್ತ ಅಭೀಕ್ ಬರ್ಮನ್ ಹೇಳಿದ್ದಿದೆ. ಇತರ ಹಲವರು […]
Month : September-2016 Episode : Author : ಎಸ್.ಆರ್. ರಾಮಸ್ವಾಮಿ
ಅಮೆರಿಕದ ಜನತೆ ಪ್ರಚೋದಕ ಘೋಷಣೆಗಳಲ್ಲಿ ರಮಿಸುವ ಟ್ರಂಪ್ರನ್ನು ಬೆಂಬಲಿಸುತ್ತಾರೆಯೆ ಅಥವಾ ಮುತ್ಸದ್ದಿತನವನ್ನುಳಿಸಿಕೊಂಡಿರುವ ಹಿಲರಿ ಕ್ಲಿಂಟನ್ರ ಬಗೆಗೆ ಒಲುಮೆ ತೋರುತ್ತಾರೆಯೆ? ಈಚಿನ ಯುಗದಲ್ಲಿ ಜಗತ್ತಿನ ಸನ್ನಿವೇಶ ಎಷ್ಟು ಸಂಕೀರ್ಣವಾಗಿದೆಯೆಂದರೆ ಯಾವ ದೇಶವೂ ಅನ್ಯದೇಶ ವಿದ್ಯಮಾನಗಳ ಪ್ರಭಾವವನ್ನು ನಿವಾರಿಸಿಕೊಳ್ಳುವುದು ದುಷ್ಕರ. ಕೆಲವು ವಾರಗಳ ಹಿಂದೆ ಯೂರೋಪ್ ಒಕ್ಕೂಟದಿಂದ ಇಂಗ್ಲೆಂಡ್ ವಿಚ್ಛೇದಗೊಂಡಿತು. ಪ್ರಮುಖ ಯೂರೋಪ್ ದೇಶಗಳೊಡನೆ ಭಾರತದ ವಾಣಿಜ್ಯ ನಂಟಸ್ತಿಕೆ ಇದೆ. ಹೀಗೆ ಯೂರೋಪಿನ ಒಳಗಿನ ವಿದ್ಯಮಾನಗಳು ಭಾರತದ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಸಂಭವ ತಪ್ಪಿದ್ದಲ್ಲ. ಅದರಂತೆ ಬರುವ ನವೆಂಬರ್ […]
Month : September-2016 Episode : ರಾಜತರಂಗಿಣಿ ಕಥಾವಳಿ - 15 Author : ಎಸ್.ಆರ್. ರಾಮಸ್ವಾಮಿ
ಅವಿನಯಮಪನಯ ವಿಷ್ಟೋ ಧಮಯ ಮನಃ ಶಮಯ ವಿಷಯಮೃಗತ್ರೃಷ್ಣಾಮ್| ಭೂತದಯಾಂ ವಿಸ್ತಾರಯ ತಾರಯ ಸಂಸಾರಸಾಗರತಃ|| ಮಾತಾ ಮೇ ಪಾರ್ವತೀದೇವೀ ಪಿತಾ ದೇವೋ ಮಹೇಶ್ವರಃ| ಬಾಂಧವಾಃ ಶಿವಭಕ್ತಾಶ್ಚ ಸ್ವದೇಶೋ ಭುವನತ್ರಯಮ್|| ಭಕ್ತಿಭಾವದಿಂದ ಸ್ತೋತ್ರಗಳನ್ನು ಉಚ್ಚರಿಸುವಾಗ ಕಲ್ಯಾಣನ ಕಣ್ಣುಗಳು ಹನಿದುಂಬಿದ್ದವು. ಅದೆಷ್ಟು ಉದಾತ್ತ ಭಾವನೆಗಳು ನಮ್ಮ ಪೂರ್ವಿಕರದು ಎಂದು ಭಾವಾವೇಶಗೊಂಡಿದ್ದ. ತನ್ನ ಹೆಸರನ್ನು ಹಿಡಿದು ಕರೆದುದು ಕೇಳಿಸಲಾಗಿ ಕಲ್ಯಾಣನು ಒಳಕೋಣೆಗೆ ಹೋದ. ಅಲ್ಲಿದ್ದ ಚಿಕ್ಕಪ್ಪ ಕನಕ ಹೇಳಿದ: “ನಿಮ್ಮ ತಂದೆಯವರು ಹೇಳಿ ಕಳಿಸಿದ್ದಾರೆ. ಭೂತೇಶ್ವರಮಠದಲ್ಲಿ ಇದ್ದಾರೆ.” “ನಾನು ಯಾವಾಗ ಹೊರಡಲಿ?” “ಪ್ರಯಾಣಕ್ಕೆ […]
Month : August-2016 Episode : Author : ಎಸ್.ಆರ್. ರಾಮಸ್ವಾಮಿ
–೧- ಸಾಮ್ರಾಜ್ಯಾಧಿಕಾರಕ್ಕೆ ಪ್ರತಿರೋಧ ಇಪ್ಪತ್ತನೇ ಶತಮಾನದ ಮೊದಲೆರಡು ದಶಕಗಳ ರಾಜಕೀಯ ನೆಲೆಯ ಸ್ವದೇಶೀ ಅಭಿಯಾನವು ಭಾರತದ ಈಚಿನ ಇತಿಹಾಸಕ್ಕೆ ನಿರ್ಣಾಯಕ ತಿರುವನ್ನು ಕೊಟ್ಟಿತೆಂಬುದು ನಿರ್ವಿವಾದ. ಆದರೆ ಅದೇ ಸಮಯದಲ್ಲಿ ಶುದ್ಧವಿಜ್ಞಾನ, ವಿವಿಧ ಕಲೆಗಳು ಮೊದಲಾದ ಕ್ಷೇತ್ರಗಳಲ್ಲಿಯೂ ಭಾರತ ದಾಪುಗಾಲಿಡಲು ಸ್ವದೇಶೀ ಅಭಿಯಾನವು ಪ್ರೇರಕವಾಯಿತೆಂಬುದನ್ನೂ ಗ್ರಹಿಸಬೇಕಾದುದರ ಆವಶ್ಯಕತೆ ಇದೆ. ಇದನ್ನು ಸ್ವದೇಶೀ ಆಂದೋಲನದ ವೈಚಾರಿಕ ಮುಖವೆಂದೇ ಪರಿಗಣಿಸಬಹುದು. ಬ್ರಿಟಿಷ್ ಜನಾಂಗದ ಸ್ವಯಮಾರೋಪಿತ ಬೌದ್ಧಿಕ ಮೇಲ್ಮೆಗೆ ಪ್ರಬಲವಾದ ಪ್ರಹಾರ ನೀಡಿದವು ಶುದ್ಧವಿಜ್ಞಾನಾದಿ ಕ್ಷೇತ್ರಗಳಲ್ಲಿನ ಭಾರತೀಯ ಸಾಧನೆಗಳು. ಹತ್ತೊಂಬತ್ತನೇ ಶತಮಾನದಲ್ಲಿ ಅತ್ಯಧಿಕ […]
Month : July-2016 Episode : Author : ಎಸ್.ಆರ್. ರಾಮಸ್ವಾಮಿ
ಜನ್ಮ ಶತಾಬ್ದ ಸ್ಮರಣೆ ಈ ವರ್ಷ ಬೆಳಗೆರೆ ಕೃಷ್ಣಶಾಸ್ತ್ರಿಗಳ (೨೨.೫.೧೯೧೬- ೨೩.೩.೨೦೧೩) ಜನ್ಮಶತಾಬ್ದವನ್ನು ವಿವಿಧೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಜೀವಮಾನದುದ್ದಕ್ಕೂ ಯಾವುದೇ ಪ್ರಚಾರವನ್ನಾಗಲಿ ಸಂಮಾನಗಳನ್ನಾಗಲಿ ಬಯಸದೆ ಅವಧೂತರಂತೆ ನಿರ್ಲಿಪ್ತರಾಗಿದ್ದ ಕೃಷ್ಣಶಾಸ್ತ್ರಿಗಳು ಈಗ ಉತ್ಸವಾಚರಣೆಗಳಿಗೆ ವಸ್ತುವಾಗಿರುವುದು ಸ್ವಾರಸ್ಯಕರ. ಇಂತಹ ಹಲವು ವಿಶೇಷತೆಗಳು ಗಮನ ಸೆಳೆಯುತ್ತವೆ. ಜೋಳಿಗೆಯ ಹೊರತು ಬೇರಾವ ಅವಲಂಬವೂ ಇಲ್ಲದ ಅವರು ಚಿತ್ರದುರ್ಗ ಜಿಲ್ಲೆಯ ಬೆಳಗೆರೆಯಂತಹ ಗ್ರಾಮೀಣ ಪ್ರದೇಶದಲ್ಲಿ ಶ್ರೀ ಶಾರದಾಮಂದಿರ ವಿದ್ಯಾಸಂಸ್ಥೆ, ಶ್ರೀ ವೇದಾವತಿ ಉಚಿತ ವಿದ್ಯಾರ್ಥಿನಿಲಯಗಳಂತಹ ಸಂಸ್ಥಾಸಮೂಹವನ್ನು ಸ್ಥಾಪಿಸಿ ಬೆಳೆಸಿದರು (ಈಗ ಈ ಸಂಸ್ಥೆಗಳು ಅರ್ಧಶತಾಬ್ದದ […]
Month : July-2016 Episode : Author : ಎಸ್.ಆರ್. ರಾಮಸ್ವಾಮಿ
ಯಾವುದೇ ಪ್ರಜಾಪ್ರಭುತ್ವಾನುಗುಣ ಸರ್ಕಾರದ ದಾರ್ಢ್ಯವಂತಿಕೆಯ ಸೂಚಕವೆಂದರೆ ಅದರಲ್ಲಿಯ ನ್ಯಾಯಾಂಗದ ಕ್ರಿಯಾಶೀಲತೆಯ ಮಟ್ಟ – ಎಂಬುದು ರಾಜ್ಯಶಾಸ್ತ್ರದ ಒಂದು ಗೃಹೀತ ಸೂತ್ರ. ಈ ದೃಷ್ಟಿಯಿಂದ ಪರಿಶೀಲಿಸಿದಲ್ಲಿ ಭಾರತದ ಸದ್ಯಃಸ್ಥಿತಿ ಅಷ್ಟೇನೂ ಸಮಾಧಾನ ನೀಡುವಂತಿಲ್ಲ ಎನ್ನಬೇಕಾಗಿದೆ. ಕಳೆದ (2016) ಏಪ್ರಿಲ್ 25ರಂದು ದೆಹಲಿಯ ವಿಜ್ಞಾನಭವನದಲ್ಲಿ ನಡೆದ ಒಂದು ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ತೀರ್ಥಸಿಂಹ ಠಾಕೂರ್ ಅವರು ದೇಶದ ವಿವಿಧ ನ್ಯಾಯಾಲಯಗಳಲ್ಲಿನ ನ್ಯಾಯಾಧೀಶರ ಸಂಖ್ಯೆಯ ತೀವ್ರ ಕೊರತೆಯನ್ನು ನೀಗಿಸಿ ನ್ಯಾಯಾಂಗದ […]
Month : July-2016 Episode : ರಾಜತರಂಗಿಣಿ ಕಥಾವಳಿ Author : ಎಸ್.ಆರ್. ರಾಮಸ್ವಾಮಿ
ಒಂದೊಮ್ಮೆ ಹರ್ಷನ ಆಧಿಪತ್ಯಕ್ಕಾಗಿ ಹಂಬಲಿಸಿದ್ದ ಪ್ರಜೆಗಳೇ ಈಗ ಅದು ಯಾವಾಗ ಅಂತ್ಯಗೊಂಡೀತು ಎಂದು ಎದುರುನೋಡತೊಡಗಿದ್ದರು. ಗೋಡೆಯಲ್ಲಿದ್ದ ಸಣ್ಣ ರಂಧ್ರದ ಮೂಲಕ ಬರುತ್ತಿದ್ದ ಸೂರ್ಯಕಿರಣಗಳನ್ನು ಗಮನಿಸುತ್ತ ಕುಳಿತಿದ್ದ, ಹರ್ಷದೇವ. ಒಂದು ಸಣ್ಣ ಕಿರಣ ಅದೆ? ಬೆಳಕನ್ನು ಪಸರಿಸುತ್ತದೆ – ಎಂದು ವಿಸ್ಮಯಗೊಳ್ಳುತ್ತಿದ್ದ. ಸಜ್ಜನಿಕೆ ತುಂಬಿದ ಮನು?ರೂ ಈ ಕಿರಣಗಳಂತೆ ಎನ್ನಬಹುದೆ? ಒಬ್ಬ ಒಳ್ಳೆಯ ವ್ಯಕ್ತಿ ತನ್ನ ಸುತ್ತಲೂ ಇದ್ದವರ ಬದುಕಿನಲ್ಲಿ ಬೆಳಕನ್ನು ಹರಡುತ್ತಾನೆ. ಅಂತಹ ವ್ಯಕ್ತಿ ರಾಜನಾಗಿದ್ದಲ್ಲಿ ಆ ರಾಜ್ಯವೆಲ್ಲ ನೆಮ್ಮದಿಯಿಂದ ಇದ್ದೀತು. ಈ ಜಾಡಿನ ಆಲೋಚನೆಯಿಂದ […]
Month : June-2016 Episode : ರಾಜತರಂಗಿಣಿ ಕಥಾವಳಿ - 13 Author : ಎಸ್.ಆರ್. ರಾಮಸ್ವಾಮಿ
“ಮಹಾರಾಣಿಯವರೆ, ಬಾಲಕರೆಲ್ಲ ತಮ್ಮ ಬರುವಿಗಾಗಿ ಕಾದಿದ್ದಾರೆ” – ವಿನಯದಿಂದ ಅರಿಕೆ ಮಾಡಿದಳು ಪರಿಚಾರಿಕೆ. ಮುಚ್ಚಿದ್ದ ಕಣ್ಣನ್ನು ಪ್ರಯತ್ನಪೂರ್ವಕ ತೆರೆದಳು ಡಿದ್ದಾ ರಾಣಿ. ಪರಿಚಾರಿಕೆ ಹೇಳಿದ್ದುದು ಅವಳಿಗೆ ಅರ್ಥವಾದಂತಿರಲಿಲ್ಲ. ತಾನು ಹೇಳಿದ್ದುದನ್ನು ಮತ್ತೆ ನಿವೇದಿಸಿದಳು, ಪರಿಚಾರಿಕೆ. ಮಹಾರಾಣಿ ಕೇಳಿದಳು – ನರವಾಹನ ಮಂತ್ರಿಗಳ ಭೋಜನ ಆಯಿತೆ? ಹಾಗಾದರೆ ನಾನೂ ಭೋಜನವನ್ನು ಮುಗಿಸುತ್ತೇನೆ. ಪರಿಚಾರಿಕೆಯರು ಒಬ್ಬರ ಮುಖವನ್ನು ಒಬ್ಬರು ನೋಡಿಕೊಂಡರು. ಪರಿಚಾರಿಕೆಯರಲ್ಲೊಬ್ಬಳು ಮುಂದುವರಿಸಿದಳು – ಮಹಾರಾಣಿಯವರೆ, ಕಶ್ಮೀರ ರಾಜ್ಯಕ್ಕೆ ಯುವರಾಜನಿಯುಕ್ತಿಯ ಬಗೆಗೆ ಮಾತನಾಡಲು ತಾವು ತಮ್ಮ ಸೋದರರ ಪುತ್ರರಿಗಾಗಿ ಕರೆ […]
Month : June-2016 Episode : Author : ಎಸ್.ಆರ್. ರಾಮಸ್ವಾಮಿ
ಇದೀಗ ನಾಡೆಲ್ಲ ಡಾ|| ಬಾಬಾಸಾಹೇಬ್ ಅಂಬೇಡ್ಕರ್ ಅವರ ೧೨೫ನೇ ಜನ್ಮವರ್ಷವನ್ನು ಆಚರಿಸುತ್ತಿದೆ. ಈ ಉತ್ಸವಾಚರಣೆ ನಡೆದಿರುವಾಗಲೇ ಸಭ್ಯಸಮಾಜವನ್ನು ತಲೆತಗ್ಗಿಸುವಂತೆ ಮಾಡುವ ಹಗರಣಗಳು ಬಯಲುಗೊಳ್ಳುತ್ತಿವೆ. ನಮ್ಮಲ್ಲಿ ಕಾನೂನುಗಳ ಕೊರತೆಯಿದೆಯೆಂದು ಯಾರೂ ಹೇಳುವಂತಿಲ್ಲ. ೧೯೪೮ರ ನವೆಂಬರ್ ತಿಂಗಳಲ್ಲಿ ಸಂವಿಧಾನದ ಕರಡನ್ನು ಸಂವಿಧಾನಸಭೆಯಲ್ಲಿ ಮಂಡಿಸುವಾಗ ಡಾ|| ಅಂಬೇಡ್ಕರ್ ಹೇಳಿದ್ದರು: “ಸಂವಿಧಾನ ಜಾರಿಯಾದ ಮೇಲೆ ದೇಶದಲ್ಲಿ ಏನಾದರೂ ಬಿಕ್ಕಟ್ಟುಗಳುಂಟಾದರೆ ಅದು ಸಂವಿಧಾನದ ದೋಷವಾಗದು, ಮನುಷ್ಯನ ಸಂಕುಚಿತಪ್ರವೃತ್ತಿಯ ಪರಿಣಾಮವಷ್ಷೆ” ಸಂವಿಧಾನವು ಸಂಸತ್ತಿನಲ್ಲಿ ಅಂತಿಮವಾಗಿ ಅಂಗೀಕಾರ ಪಡೆಯುವುದಕ್ಕೆ ಮೊದಲು ಮಾಡಿದ ಭಾಷಣದ ಅವರ ಹೇಳಿಕೆಯಂತೂ ಅವಿಸ್ಮರಣೀಯವಾಗಿದೆ: […]