![ಲೆಫ್ಟಿನೆಂಟ್ ಕಮಾಂಡರ್ ಕಪೀಶ್ಸಿಂಗ್ ಮುವಾಲ್ ಮತ್ತು ಲೆಫ್ಟಿನೆಂಟ್ ಕಮಾಂಡರ್ ಮನೋರಂಜನ್ಕುಮಾರ್](https://utthana.in/wp-content/uploads/2023/06/UTTHANA-March-2023-14-2-2023-107-150x150.jpg)
ಅದು ೨೦೧೩, ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿನ. ದಕ್ಷಿಣ ಮುಂಬೈನ ತುದಿಯಲ್ಲಿ ಸಮುದ್ರಕ್ಕೆ ಚಾಚಿಕೊಂಡಿರುವ ಕೊಲಾಬಾ ಪ್ರದೇಶದಲ್ಲಿ ಭಯಂಕರ ಆಸ್ಫೋಟ ಕೇಳಿಸಿತು ಮತ್ತು ಭೂಮ್ಯಾಕಾಶಗಳನ್ನು ಒಂದಾಗಿಸುವಂತಹ ಅಗ್ನಿಜ್ವಾಲೆ ಎದ್ದಿತು. ಅನೇಕ ಗಂಟೆಗಳ ಕಾಲ ಉರಿಯುತ್ತಿದ್ದ ಈ ಅಗ್ನಿಜ್ವಾಲೆ, ಹಲವು ಕಿ.ಮೀ.ಗಳಷ್ಟು ದೂರದಿಂದಲೂ ಕಾಣುತ್ತಿತ್ತು. ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿನವಾಗಿದ್ದರಿಂದ, ಅದು ಭಯೋತ್ಪಾದಕರ ಕೃತ್ಯವಿರಬೇಕೆಂದು ಅನೇಕರು ಶಂಕಿಸುವ ಸಾಧ್ಯತೆಯೂ ಇದ್ದಿತು. ಘಟನೆ ಸಂಭವಿಸಿದ ಕೆಲ ನಿಮಿಷಗಳಲ್ಲೇ ಸುದ್ದಿವಾಹಿನಿಗಳಲ್ಲಿ ಈ ಸುದ್ದಿಯ ಪ್ರಸಾರವಾಗಿ ಜನರ ಮನಸ್ಸಿನಲ್ಲಿದ್ದ ಅನುಮಾನಗಳಿಗೆ ಅಂತ್ಯ ಹಾಡಿತು. […]