
ತ್ರಿವಿಧ ದಾಸೋಹಿ ಶತಾಯುಷಿ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು
Month : February-2019 Episode : Author :
Month : February-2019 Episode : Author :
Month : January-2019 Episode : Author : ನರೇಂದ್ರ ಮೋದಿ
ಒಬ್ಬ ನಾಯಕ – ಆತ ಜನಸಾಮಾನ್ಯನಾಗಿರಲಿ, ಮುಖ್ಯಮಂತ್ರಿ, ಪ್ರಧಾನಮಂತ್ರಿಯಾಗಿರಲಿ – ಆತನ ಪ್ರಥಮ ಕರ್ತವ್ಯ ಸಮಾಜವನ್ನು ಪ್ರಗತಿಯೆಡೆಗೆ ಒಯ್ಯುವುದು. ಇದಕ್ಕೆ ’ಉತ್ತಮ ಆಡಳಿತ’ದ ವ್ಯಾಖ್ಯೆ, ಹಾಗೆಂದರೇನು ಎನ್ನುವುದರ ಅರಿವು ಇರುವುದು ಅವಶ್ಯ. ಉತ್ತಮ ಆಡಳಿತ ಒಂದು ಕಲ್ಪನೆ ಮಾತ್ರವಲ್ಲ, ಅದನ್ನು ವಾಸ್ತವದಲ್ಲೂ ಸಾಧ್ಯವಾಗಿಸಬಹುದು. ಪ್ರಜಾಕೇಂದ್ರಿತ ಅಭಿವೃದ್ಧಿಯೇ ಉತ್ತಮ ಆಡಳಿತದ ಮೂಲತತ್ತ್ವ. ಜನಸಾಮಾನ್ಯರನ್ನು ವಿಕಾಸದ ಕೇಂದ್ರವಾಗಿ, ಪಾಲುದಾರರನ್ನಾಗಿ ಮಾಡಿದಾಗಲೆಲ್ಲ ಆ ರಾ? ಸಫಲತೆಯ, ಸಮೃದ್ಧಿಯ ಉನ್ನತ ಎತ್ತರಕ್ಕೇರಿರುವುದು ಇತಿಹಾಸದಲ್ಲಿ ಸಾಬೀತಾಗಿದೆ. ಪ್ರಜೆಗಳ ಭಾಗವಹಿಸುವಿಕೆಯ ಹೊರತಾಗಿ ಯಾವುದೇ ರಾ?ವೂ ಪ್ರಗತಿ […]
Month : December-2018 Episode : Author : ಎಸ್.ಆರ್. ರಾಮಸ್ವಾಮಿ
ಜಗದ್ವಿಖ್ಯಾತ ಅಧ್ಯಾತ್ಮ ಲೇಖಕ ಪೌಲೋ ಕೊಯ್ಲೋ ಈಚೆಗೆ ಒಂದು ಸಂದರ್ಭದಲ್ಲಿ ಹೇಳಿದ: ನಾನು ಭಗವದ್ಗೀತೆಯನ್ನು ಓದಿದೊಡನೆಯೆ ಅದರ ಬಗೆಗೆ ನನಗೆ ಅತಿಶಯ ಪ್ರೇಮ ಉಂಟಾಯಿತು. ಬದುಕಿನ ಎಲ್ಲ ಸಂದರ್ಭಗಳಿಗೂ ಅದು ಸಾಕಾಗುತ್ತದೆ ಎನಿಸಿತು. ವಿಶ್ವದ ರಹಸ್ಯವನ್ನು ಅರಿಯಲು, ನಿಮ್ಮ ವಿಧಿಯನ್ನು ಗೊಣಗದೆ ಸ್ವೀಕರಿಸಲು, ಮತ್ತು ಸಂಘ?ವು ಎದುರಾದಾಗ ಮುನ್ನಡೆದು ನಿಮ್ಮ ಕರ್ತವ್ಯವನ್ನು ನಿರ್ವಹಿಸಲು ಗೀತೆ ನಿಮ್ಮನ್ನು ಸಜ್ಜುಗೊಳಿಸುತ್ತದೆ. ಭಗವದ್ಗೀತೆಯ ಪರಿಚಯ ದೊರೆತ ಎಲ್ಲ ಶ್ರದ್ಧಾವಂತರದೂ ಇಂತಹದೇ ಅನಿಸಿಕೆ ಇದೆ. ಗೀತೆಯ ಬಗೆಗೆ ಏನೇ ಹೇಳಹೊರಟರೂ ಚರ್ವಿತಚರ್ವಣವೆನಿಸುವ ಸಂಭವವಿದೆ. […]
Month : November-2018 Episode : Author : ಎಚ್ ಮಂಜುನಾಥ ಭಟ್
ಭೌಗೋಳಿಕವಾಗಿ ಭಾರತವು ಒಂದು ಬೃಹದ್ ರಾಷ್ಟ್ರವಾಗಿರುವುದು ಮತ್ತು ಆ ಕಾರಣದಿಂದ ದೇಶದ ಧಾರಣ ಸಾಮರ್ಥ್ಯವು ದೊಡ್ಡದಾಗಿರುವುದೇ ನಮ್ಮ ಬಹಳ? ಸಮಸ್ಯೆಗಳ ಮೂಲ ಎನ್ನಿಸುತ್ತದೆ. ಏನೇ ಆದರೂ ಅದರಿಂದ ತಮಗೆ ತಕ್ಷಣಕ್ಕೆ ಸಮಸ್ಯೆಯೇನೂ ಆಗುವುದಿಲ್ಲ; ಸಮಸ್ಯೆ ಅದಾಗಿಯೇ ಸರಿಹೋಗುತ್ತದೆ ಎನ್ನುವ ಮನೋಭಾವ ಇಡೀ ದೇಶದ ಜನರಲ್ಲೇ ಮನೆಮಾಡಿದೆ ಎಂದರೂ ತಪ್ಪಿಲ್ಲ. ಆ ಕಾರಣದಿಂದ ನಮ್ಮ ಬಹಳಷ್ಟು ಸಮಸ್ಯೆಗಳು ಬೆಳೆಯುತ್ತಾಹೋಗುತ್ತವೆ. ಸೂಜಿಯಿಂದ ಸರಿಪಡಿಸಬಹುದಾದುದಕ್ಕೆ ದೊಡ್ಡ ಶಸ್ತ್ರಚಿಕಿತ್ಸೆಯೇ ಬೇಕು ಎನ್ನುವ ಪರಿಸ್ಥಿತಿ ಬರುತ್ತದೆ. ಅಷ್ಟಾಗಿಯೂ ಆ ಸಮಸ್ಯೆ ಪರಿಹಾರವನ್ನೇ ಕಾಣದೆ ಶಾಶ್ವತವಾಗಿ […]
Month : November-2018 Episode : Author : ಲೆ|ಜ| ಸಯ್ಯದ್ ಅತಾ ಹಸ್ನೈನ್
ಭಾರತದ ಗಡಿಯಲ್ಲಿ ಬಹುದೊಡ್ಡ ಭಾಗವನ್ನು ಹಂಚಿಕೊಂಡಿರುವ ಚೀನಾ ಮತ್ತು ಪಾಕಿಸ್ತಾನಗಳು ನಮ್ಮ ಶತ್ರುಗಳೆಂದೇ ಪರಿಗಣಿತವಾಗಿವೆ. ದೇಶದ ಸೇನಾಸಿದ್ಧತೆಗಳು ಮುಖ್ಯವಾಗಿ ಈ ಎರಡು ದೇಶಗಳನ್ನು ಗಮನದಲ್ಲಿಟ್ಟುಕೊಂಡೇ ನಡೆಯುತ್ತವೆ. ಎರಡೂ ಶತ್ರುರಾ?ಗಳೇ ಆದರೂ ಕೂಡ ಅವುಗಳ ನಡುವೆ ಒಂದು ದೊಡ್ಡ ವ್ಯತ್ಯಾಸವಿದೆ. ಸಮರಸಾಮರ್ಥ್ಯದಲ್ಲಿ ಚೀನಾ ನಮಗಿಂತ ಮುಂದಿದೆ ಮತ್ತು ಗಡಿಯಲ್ಲಿ ಬೇರೆಬೇರೆ ಸಮಸ್ಯೆಗಳನ್ನು ಸೃಷ್ಟಿಸುತ್ತ ಇದೆಯಾದರೂ ಕಾಲುಕೆರೆದು ಜಗಳಕ್ಕೆ ನಿಲ್ಲುವುದು, ಕದನ ವಿರಾಮ ಉಲ್ಲಂಘಿಸಿ ಸೈನಿಕರ ಅಥವಾ ನಾಗರಿಕರಿಗೆ ಹಾನಿ ಎಸಗುವುದು ಇವೆಲ್ಲ ಇಲ್ಲ. ಅದೇ ವೇಳೆ ಪಾಕಿಸ್ತಾನ ಸೇನೆ […]
Month : November-2018 Episode : Author :
ಇಸ್ರೇಲಿನ ಗುಪ್ತಚರ ಸಂಸ್ಥೆ, ’ಮೊಸಾದ’ದ ಹೆಸರನ್ನು ಬಹಳಷ್ಟು ಜನರು ಕೇಳಿರಲಾರರು. ಅದಕ್ಕೆ ಕಾರಣ ಅದು ಪ್ರಚಾರದಿಂದ ದೂರವಿರಲು ಇಷ್ಟಪಡುತ್ತದೆ. ಅದು ತೆರೆಯ ಮರೆಯಲ್ಲಿ ಇದ್ದೇ ತನ್ನ ಕಾಯಕದಲ್ಲಿ ತೊಡಗಿರುತ್ತದೆ. ಎರಡನೇ ಮಹಾಯುಧ್ಧದ ಕಾಲದಲ್ಲಿ ಯಹೂದಿ ಜನರ ನರಮೇಧ ಮಾಡಿದ ಪಾಪಿಗಳನ್ನು ಶೋಧಮಾಡಿ ಅವರನ್ನು ನ್ಯಾಯಾಲಯದ ಕಟ್ಟೆಗೆ ತಂದು ನಿಲ್ಲಿಸುವುದು, ಇಲ್ಲವೇ ಅವರನ್ನು ಹತ್ಯೆಗೈಯುvuದು, ಇದು ಅದರ ಪ್ರಾರಂಭಿಕ ಗುರಿಯಾಗಿತ್ತು. ಇಸ್ರೇಲ್ ತನ್ನದೇ ಅಸ್ತಿತ್ವ ಕಂಡುಕೊಂಡ ಮೇಲೆ ಅದರ ಶತ್ರುಗಳ ಸಂಖ್ಯೆ ಬೆಳೆಯತೊಡಗಿತು. ಈಗ ಅದಕ್ಕೆ ಅನಿವಾರ್ಯವಾಗಿ ಅಂತರರಾಷ್ಟ್ರೀಯ ರಾಜಕಾರಣದಲ್ಲಿ […]
Month : October-2018 Episode : Author : ಬ್ರಿಗೆಡಿಯರ್ (ನಿ.) ಜಿ.ಬಿ. ರೆಡ್ಡಿ
ಭವಿಷ್ಯದಲ್ಲಿ ಸೇನಾಪಡೆಗಳ ಮಟ್ಟ ಹೇಗಿರಬೇಕು; ನಮಗೆ ಯಾವೆಲ್ಲ ಫೈಟರ್ ವಿಮಾನಗಳ ಅಗತ್ಯವಿದೆ; ಅವುಗಳ ಜೀವಿತಾವಧಿಯ ವೆಚ್ಚ ವಿಶ್ಲೇಷಣೆ, ಹಂತಹಂತಗಳಲ್ಲಿ ವಾರ್ಷಿಕ ಉನ್ನತೀಕರಣ, ಅವುಗಳಿಗೆ ಹಣ ಒದಗಿಸುವುದು ಮುಂತಾದ ವಿಷಯಗಳ ಕುರಿತು ರಚನಾತ್ಮಕವಾದ ಚರ್ಚೆಯನ್ನು ನಡೆಸಬೇಕೇ ಹೊರತು ಗದ್ದಲ ಎಬ್ಬಿಸಿ ಗೊಂದಲ ನಿರ್ಮಿಸಬಾರದು; ಮತ್ತು ಆ ಮೂಲಕ ನಿರ್ಧಾರ ಕೈಗೊಳ್ಳುವುದಕ್ಕೆ ಅಡ್ಡಿಯಾಗಿ ಪರಿಣಮಿಸಬಾರದು. ಪರಸ್ಪರ ವಿರುದ್ಧವಾದ ಮಾತುಗಳನ್ನಾಡುವುದು, ಉತ್ಪ್ರೇಕ್ಷೆ ಮಾಡುವುದು, ದಾರಿತಪ್ಪಿಸುವುದು ಹಾಗೂ ಚರ್ಚೆಯನ್ನೇ ಭಂಗಗೊಳಿಸುವುದು – ಇವುಗಳಿಗಿಂತ ಈಗ ಹಿಂದೆಂದಿಗಿಂತಲೂ ಮುಖ್ಯವಾದ ವಿಷಯವೆಂದರೆ, ಭಾರತೀಯ ವಾಯುಪಡೆಯ ಆಧುನಿಕೀಕರಣಕ್ಕೆ […]
Month : September-2018 Episode : Author : ಎಸ್.ಆರ್. ರಾಮಸ್ವಾಮಿ
ಭಾರತೀಯ ಪಾರಂಪರಿಕ ಕಲೆಯ ಅನನ್ಯತೆಯೆಂದರೆ ಧಾರ್ಮಿಕತೆ ಮತ್ತು ಕಲೆಗಳ ಪರಸ್ಪರ ಅನ್ಯೋನ್ಯಾಶ್ರಯವನ್ನು ಚಿತ್ರಕಲೆ ಮತ್ತು ಶಿಲ್ಪಕಲೆಗಳು ಬಿಂಬಿಸಿರುವುದು. ಪಾರಲೌಕಿಕ ಜಿಜ್ಞಾಸೆ, ಧಾರ್ಮಿಕತೆ, ಕಲೆ – ಇವು ಮೂರೂ ಸಮ್ಮಿಳಿತವಾಗಿರುವುದು ಇಲ್ಲಿಯ ವಿಶೇಷತೆ. ಮಂತ್ರದರ್ಶನ, ತತ್ತ್ವಜಿಜ್ಞಾಸೆ, ಸೌಂದರ್ಯಾನುಭೂತಿ – ಇವು ಒಂದರ ಮೇಲೆ ಇನ್ನೊಂದು ಹೇಗೆ ಪ್ರಭಾವ ಬೀರುತ್ತ ಬಂದವೆಂಬುದರ ಭವ್ಯ ಅಭಿವ್ಯಕ್ತಿಯನ್ನು ಐದಾರು ಸಾವಿರ ವರ್ಷಗಳ ಕಲಾನುಸಂಧಾನದಲ್ಲಿ ಕಾಣುತ್ತೇವೆ. ಅನ್ಯ ದೇಶಗಳಿಗಿಂತ ಬಹುಪಾಲು ಹೆಚ್ಚು ಸಮೃದ್ಧವಾಗಿರುವ ಭಾರತೀಯ ವಾಸ್ತುಕಲೆಯಲ್ಲಿ ಎದ್ದುಕಾಣುವ ಸಂಗತಿಯೆಂದರೆ ದೇವದೇವತೆಗಳ ಮತ್ತು ಪೌರಾಣಿಕ ಆಖ್ಯಾನಗಳ ಸಾಂಕೇತಿಕತೆಯ ಅರಿವು […]
Month : September-2018 Episode : Author : ರಾಜೀವ್ ಶ್ರೀನಿವಾಸನ್ (ಇಂಗ್ಲಿಷ್)
ಶಿಕ್ಷಣವ್ಯವಸ್ಥೆಯ ಕುರಿತು ಇಂದು ಸಾಕಷ್ಟು ಚಿಂತನ-ಮಂಥನಗಳು ನಡೆಯುತ್ತಿವೆ. ಅದರಲ್ಲಿ ಭಾರತದ ಶಿಕ್ಷಣವ್ಯವಸ್ಥೆಯು ಒಳಗೊಂಡಿರುವ ಕಲಿಕೆ ವಿಧಾನದ ಗುಣಮಟ್ಟ ಕಳಪೆ ಎನ್ನುವ ಮಾತು ವ್ಯಾಪಕವಾಗಿ ಕೇಳಬಂದಿದೆ. ಈ ನಡುವೆ ಕಂಡುಬರುವ ಆಶಾಕಿರಣವೆಂದರೆ ಹೊಸ ಪದ್ಧತಿಯೊಂದನ್ನು ಕಂಡುಹಿಡಿಯುವುದಕ್ಕೆ ಇದು ಸಕಾಲವಾಗಿದೆ; ವಿಶೇಷವಾಗಿ ಶಿಕ್ಷಣ ವ್ಯವಸ್ಥೆಯನ್ನು ನೌಕರಶಾಹಿಯ ಕಪಿಮುಷ್ಟಿಯಿಂದ ಮುಕ್ತಗೊಳಿಸಬೇಕಾಗಿದೆ. ವಿಶ್ವವಿದ್ಯಾಲಯ ಅನುದಾನ ಆಯೋಗವನ್ನು (ಯುಜಿಸಿ) ಇತ್ತೀಚೆಗೆ ಬರ್ಖಾಸ್ತುಗೊಳಿಸಿರುವುದು ಮತ್ತು ವಿವಾದಾಸ್ಪದ ಇನ್ಸ್ಟಿಟ್ಯೂಟ್ ಆಫ್ ಎಮಿನೆನ್ಸ್ (ಔನ್ನತ್ಯದ ಸಂಸ್ಥೆ) ಯೋಜನೆ ಬಗೆಗಿನ ಮಾತುಗಳು ಇಂದಿನ ತೃತೀಯ ದರ್ಜೆ ಶಿಕ್ಷಣವ್ಯವಸ್ಥೆಗೆ ಬದಲಾಗಿ ಬೇರೇನೋ ಬರಲಿದೆ […]
Month : September-2018 Episode : Author : ಅನಿಲ್ಕುಮಾರ್ ಮೊಳಹಳ್ಳಿ
ಅದು ೧೯೫೭ರ ಸಂದರ್ಭ. ವಿದೇಶಾಂಗ ಖಾತೆಯನ್ನು ಸ್ವತಃ ಪ್ರಧಾನಿ ಜವಾಹರಲಾಲ್ ನೆಹರು ಅವರೇ ನಿರ್ವಹಿಸುತ್ತಿದ್ದರು. ವಿದೇಶಾಂಗ ಖಾತೆಯ ಕುರಿತು ಎರಡುಮೂರು ದಿನಗಳ ಸುದೀರ್ಘ ಚರ್ಚೆ ನಡೆಯಿತು. ಚರ್ಚೆಯ ಕೊನೆಯಲ್ಲಿ ಪ್ರತಿಪಕ್ಷದ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸುತ್ತ ಪ್ರಧಾನಿ ನೆಹರು ವಿದೇಶಾಂಗ ನೀತಿಯ ಕುರಿತು ಅಟಲ್ಜೀ ಅವರ ಅಭಿಪ್ರಾಯವನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದರು. ಅಟಲ್ಜೀ, ಆಗಷ್ಟೇ ಲೋಕಸಭೆಯ ಮೆಟ್ಟಿಲು ಹತ್ತಿದ್ದ ೩೨ರ ತರುಣ. ಇದಕ್ಕೂ ಹೆಚ್ಚಾಗಿ ಯಾವುದೇ ರಾಜಕೀಯ ಹಿನ್ನೆಲೆಯಾಗಲಿ ಅನುಭವವಾಗಲಿ ಇಲ್ಲದೆ ಕೇವಲ ನಾಲ್ಕು ಜನ ಸದಸ್ಯರನ್ನು ಹೊಂದಿದ್ದ ಪಕ್ಷವೊಂದರಿಂದ ಆರಿಸಿಬಂದ ವಾಜಪೇಯಿ ಮೊದಲ ಬಾರಿಗೇ ನೆಹರು ಗಮನಸೆಳೆಯುವುದರಲ್ಲಿ ಮಾತ್ರವಲ್ಲದೆ, ತನ್ನ ವಿಚಾರಗಳಿಗೆ ಮನ್ನಣೆ ದೊರಕಿಸಿಕೊಳ್ಳುವಲ್ಲಿ […]