
“ಹೂವಹಳ್ಳಿಗೆ ದಾರಿ…..” ಕೈಫಲಕವನ್ನು ಕಾಣುತ್ತಿದ್ದಂತೆ ಸುಬ್ಬಪ್ಪನ ಮನಸ್ಸೇ ಹೂವಾಗಿ ಅರಳಿಬಿಟ್ಟಿತು. ತನ್ನ ಕಂದ ವನಜಾ ವಾಸಿಸುವುದು ಇಲ್ಲೇ….. ಕಳೆದ ವರ್ಷ ತಾನೇ ಮದುವೆ ಮಾಡಿ ಕಳುಹಿಸಿಕೊಟ್ಟದ್ದು. ಆಮೇಲೆ ಈಗಲೇ ತಾನು ಈ ಊರಿಗೆ ಕಾಲಿಡುತ್ತಿರುವುದು.
Month : August-2015 Episode : Author : ಭಾರತೀ ಕಾಸರಗೋಡು
Month : August-2015 Episode : Author : ಹಾಲಾಡಿ ಮಾರುತಿರಾವ್
ಈ ಗಾದೆಯು ಅರ್ಥವಾಗಬೇಕಾದರೆ ನಾವು ಮಾರಮ್ಮನ ಬಗ್ಗೆ ಸ್ವಲ್ಪ ತಿಳಿದುಕೊಂಡಿರಬೇಕಾಗುತ್ತದೆ. ನಮ್ಮಲ್ಲಿ ದುಷ್ಟರು, ಶಿಷ್ಟರು ಇರುವಂತೆ ದೇವತೆಗಳಲ್ಲಿಯೂ ಈ ಬಗೆಯ ವರ್ಗವನ್ನು ನಮ್ಮ ಹಿರಿಯರು ಸೃಷ್ಟಿಸಿಕೊಂಡು ಬಂದಿದ್ದಾರೆ. ಮಾರಿ, ದುರ್ಗಿ, ಚಂಡಿ, ಚಾಮುಂಡಿ, ಕಾಳಿ – ಈ ಬಗೆಯ ದೇವತೆಗಳು ರುದ್ರರೂಪಿಗಳು, ಸಂಹಾರಪ್ರಿಯರು, ರಕ್ತದಾಹವುಳ್ಳವರು. ಇವರಿಗೆ ಕೋಪ ಬಂದಾಗಲೇ ಊರಿಗೆ ಸಿಡುಬು, ಕಾಲರಾ ಮುಂತಾದ ಮಾರಣಾಂತಿಕ ರೋಗಗಳು ವಕ್ಕರಿಸುತ್ತವೆ ಎಂಬ ಮೂಢನಂಬಿಕೆ ಬಲವಾಗಿತ್ತು. ಈ ದೇವತೆಗಳ ಕೋಪ ತಣಿಸಲು ಕೋಳಿ, ಕುರಿ ಬಲಿ ಕೊಡುತ್ತಿದ್ದರು; ಜಾತ್ರೆಗಳು ಜರುಗುತ್ತಿದ್ದವು.
Month : July-2015 Episode : Author : ರೂಪಾ ಮಂಜುನಾಥ್ ಶಿರಸಿ
ಪರಿಚಯ: ಬರಿಯ ಕಣ್ಣಿಗೆ ನೋಡಲು ಇದು ಒಂದು ಸಾಮಾನ್ಯ ಜಾತಿಯ ಹುಲ್ಲಿನ ಗಿಡ. ಆದರೆ ಇದು ಒಂದು ವಿಶೇಷವಾದ ಹುಲ್ಲಿನ ಪ್ರಭೇದವಾಗಿದೆ. ಯಾವುದೇ ಹವಾಮಾನದಲ್ಲಿಯೂ ಬೆಳೆಯುತ್ತದೆ. ತಂಪುಪ್ರದೇಶದಲ್ಲಂತೂ ಹುಲುಸಾಗಿ ಬೆಳೆಯುತ್ತದೆ. ಒಂದು ಸಾರಿ ನಾಟಿ ಮಾಡಿದರೆ ಮತ್ತೆ ನಾಟಿ ಮಾಡಬೇಕೆಂದಿಲ; ಅತ್ಯಂತ ಸುಲಭದಲ್ಲಿ ಇದನ್ನು ಬೆಳೆಯಬಹುದು. ಇದನ್ನು ಬಹುವಾರ್ಷಿಕ ಬೆಳೆ ಅಂತಲೇ ಹೇಳಬಹುದು. ಇತ್ತೀಚಿನ ದಿನಗಳಲ್ಲಿ ಇದನ್ನು ವಾಣಿಜ್ಯಬೆಳೆಯಾಗಿಯೂ ಬೆಳೆಸುತ್ತಿದ್ದಾರೆ. ಬಹುಮುಖ್ಯವಾಗಿ ಸುಗಂಧಯುಕ್ತ ಬೇರಿನ ಸಲುವಾಗಿ ಇದನ್ನು ಬೆಳೆಸಲಾಗುತ್ತದೆ. ಇನ್ನು ಕೆಲವು ಕಡೆ ಮಣ್ಣಿನ ಸವಕಳಿಯನ್ನು ತಪ್ಪಿಸಲು […]
Month : July-2015 Episode : Author : ಸುಭಾಷಿಣಿ ಹಿರಣ್ಯ
ಅಮ್ಮಾ, ಮಾವಿನಹಣ್ಣು ಆಗಿದೆಯಾ?” “ಆಗಿದೇ….” “ಗೇರುಹಣ್ಣು?” “ಅದೂ ಉಂಟಲ್ಲ….” “ಹಲಸಿನಹಣ್ಣು….” “ಅದೂ ಇಲ್ಲಾಂತ ಆಗುವುದುಂಟೇ, ಯಾವಾಗ ಮನೆಗೆ ಬರ್ತೀಯಾ?” “ಅಮ್ಮಾ, ಇಲ್ಲಿ ಇಪ್ಪತ್ತು ರುಪಾಯಿ ಕೊಟ್ಟು ಹಲಸಿನಹಣ್ಣು ತಿಂದೆ ಗೊತ್ತಾ, ಸಿಹಿಯಾಗಿ ಇತ್ತು.” “ಹೌದಾ, ಹಂಗಿದ್ರೆ ಬೆಂಗಳೂರಲ್ಲೂ ಹಲಸಿನಹಣ್ಣು ಬೇಕಾದ ಹಾಗೆ ಸಿಗುತ್ತೇ….” “ಅಯ್ಯೋ, ಅದು ಮನೆಯ ಹಣ್ಣು ಅಲ್ವಲ್ಲ…. ನಾನು ಮುಂದಿನ ವಾರ ಬರ್ತೇನೇ…” ಅಂದ ಮಧು. “ಅಣ್ಣ ಬರ್ತಾನಂತೆ ಮುಂದಿನವಾರ, ನೀನೂ ಬರುತ್ತೀಯಾ ಹೇಗೆ?” ಮಗಳ ಬಳಿ ಕೇಳದಿದ್ದರಾದೀತೇ. ಅವಳೂ ವಾರಕ್ಕೊಮ್ಮೆ ಹೇಗೂ ಬರುವುದಿದೆ, […]
Month : July-2015 Episode : Author : ಹಾಲಾಡಿ ಮಾರುತಿರಾವ್
ಹಿರಿಯರ ತೂಕದ ಮಾತುಗಳು ಚಾಲ್ತಿಗೆ ಬಂದು ಗಾದೆಗಳೆನಿಸಿಕೊಂಡವು. ಮಾತಲ್ಲಿ ಮಾತ್ರವಲ್ಲ, ಮಾತಿನ ರಚನೆಯಲ್ಲಿ ಕೂಡ ತೂಕ ಇರುತ್ತಿತ್ತು. ಚಿಕ್ಕದ್ದನ್ನು ಸಾಧಿಸಲಾರದವನು ಮಹತ್ತ್ವದ್ದನ್ನು ಸಾಧಿಸಿಯಾನೇ ಎಂಬ ಪರಿಹಾಸ್ಯದ ಧ್ವನಿ ಈ ಗಾದೆಯಲ್ಲಿದೆ. ರಚನೆಯ ಕಡೆ ಗಮನ ಕೊಟ್ಟಾಗ ನಮ್ಮ ಕಣ್ಮುಂದೆ ಒಂದು ತಕ್ಕಡಿ ತೂಗಾಡುವಂತೆ ಕಾಣುತ್ತದೆ. ಮೂರು ಪದಗಳಿಂದ ಕೂಡಿದ ಗಾದೆಯ ಪೂರ್ವಾರ್ಧ ತಕ್ಕಡಿಯ ಒಂದು ಕಡೆ. ಎರಡು ಪದಗಳಿಂದ ಕೂಡಿದ ಉತ್ತರಾರ್ಧ ಇನ್ನೊಂದು ಕಡೆ. ಸರಿಸಮಾನತೆಯಿಲ್ಲ. ಅಟ್ಟ ಒಂದು ಕಡೆ, ಬೆಟ್ಟ ಇನ್ನೊಂದು ಕಡೆ. ಪ್ರಾಸಬದ್ಧ ಪದಗಳು. […]
Month : June-2015 Episode : Author : ಸುಭಾಷಿಣಿ ಹಿರಣ್ಯ
Month : June-2015 Episode : Author : ಹಾಲಾಡಿ ಮಾರುತಿರಾವ್
ವಿವೇಕಿಗಳು, ಜ್ಞಾನಿಗಳು ಮೌನವಾಗಿರುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಾರೆ. ಮುಖ್ಯವಾಗಿ ಮುನಿಗಳು, ಮಠಾಧಿಪತಿಗಳು ಮೌನವ್ರತವನ್ನು ಗಂಭೀರವಾಗಿ ಆಚರಿಸುತ್ತಾರೆ.
Month : May-2015 Episode : ಹನಿಮಿಂಚು Author : ಭಾರತೀ ಕಾಸರಗೋಡು
Month : May-2015 Episode : Author : ಗೀತಾ ಅರವಿಂದ್
Month : May-2015 Episode : Author : ಹಾಲಾಡಿ ಮಾರುತಿರಾವ್
ಇದೊಂದು ಹಳೆಯ ಗಾದೆ. ಚಾಡಿ ಮಾತುಗಳಿಂದ ನಾವು ಪ್ರಭಾವಿತರಾಗಬಾರದು ಎಂಬ ಎಚ್ಚರಿಕೆಯ ಸೂಚನೆ ಬಿಟ್ಟರೆ ಈ ಗಾದೆಯಲ್ಲಿ ಹೆಚ್ಚಿನ ಸ್ವಾರಸ್ಯವಿಲ್ಲ. ‘ಚಾಡಿ’ ಮತ್ತು ‘ಚಾವಡಿ’ ಪದಗಳ ಅನುಪ್ರಾಸ ಬಿಟ್ಟರೆ ಗಾದೆಯ ರಚನೆಯಲ್ಲೂ ಹೆಚ್ಚಿನ ಚಮತ್ಕಾರವಿಲ್ಲ. ಬೇರೆ ಗಾದೆಗಳಿಗೆ ಹೋಲಿಸಿದರೆ ಇದು ಬೋಳುಬೋಳಾಗಿ ಕಾಣುತ್ತದೆ.