ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಜುಲೈ 2015 > ಗ್ರಂಥಾಂತರಂಗ

ಗ್ರಂಥಾಂತರಂಗ

ಆರ್ಥಿಕ ಪರಿಸ್ಥಿತಿಯ ವಾಸ್ತವತೆಯನ್ನು ವಿವರಿಸುವ ಪುಸ್ತಕ

Untitled-17

ಪುಸ್ತಕ The Third Curve:
The End of Growth as we know it

ಲೇಖಕರು: ಮನ್ಸೂರ್ ಖಾನ್

ಪುಟಗಳು: ೮+೨೦೨; ಬೆಲೆ: ರೂ. ೪೯೫

ಪ್ರತಿಗಳಿಗೆ: www.mansoorkhan.net

೨೦೧೩ರಲ್ಲಿ ಪ್ರಕಟಗೊಂಡ ಮನ್ಸೂರ್ ಖಾನ್ ಅವರ ಪುಸ್ತಕ ‘The Third Curve’ ಈಚೆಗೆ ಬಹಳಷ್ಟು ಚರ್ಚೆಯಾಗುತ್ತಿರುವ ಪುಸ್ತಕವಾಗಿದೆ. The Third Curve ಎನ್ನುವುದಕ್ಕೆ ಪುಸ್ತಕದ ಪೂರಕಸಾಲು The End of Growth as we know it’ ‘ (ನಾವು ತಿಳಿದ ಅಭಿವೃದ್ಧಿಯ ಕೊನೆ) ಎಂಬುದಾಗಿ ಇದೆ. ಜಗತ್ತು ಈಗ ಅಭಿವೃದ್ಧಿ ಎನ್ನುವ ಮಾಯಾಕುದುರೆಯನ್ನೇರಿ ಮುಂದುವರಿಯುತ್ತಿದೆ. ಆದರೆ ಆ ಕುದುರೆ ಎಂಥದ್ದು? ನಮ್ಮ ಗಮ್ಯಸ್ಥಾನಕ್ಕೆ ನಮ್ಮನ್ನು ಅದು ಒಯ್ಯಬಲ್ಲದೆ? – ಎಂಬುದು ಯಾರಿಗೂ ಗೊತ್ತಿರುವಂತೆ ಕಾಣಿಸುತ್ತಿಲ್ಲ. ನಮ್ಮ ಅಭಿವೃದ್ಧಿಯ ಶಿಲ್ಪಿಗಳು ಎನಿಸಿದವರು, ನಮ್ಮ ನೀತಿ ನಿರೂಪಕರಿಗಂತೂ ಅದು ಗೊತ್ತೇ ಇಲ್ಲ.

 ‘ವಾಸ್ತವವನ್ನು ಎದುರಿಸಿ; ಇಲ್ಲವಾದರೆ ವಾಸ್ತವವೇ ನಿಮ್ಮನ್ನು ನೋಡಿಕೊಳ್ಳುತ್ತದೆ’ ಎಂಬ ಅಜ್ಞಾತ ವ್ಯಕ್ತಿಯ ಮಾತು ಈ ಲೇಖಕರಿಗೆ ಶಿರೋಧಾರ್ಯ ಎಂಬಂತಿದೆ. ಹಣಕಾಸು ಮಾರುಕಟ್ಟೆ ಬೆದರಿಕೆಗೆ ಗುರಿಯಾಗಿದೆ; ಅಭಿವೃದ್ಧಿಯ ವೇಗ ಕುಸಿಯುತ್ತಿದೆ. ಬಹುಕಾಲದಿಂದ ಅನುಸರಿಸಿಕೊಂಡು ಬಂದ ಆರ್ಥಿಕ ಪ್ರಗತಿಯ ಸೂತ್ರಗಳು ಕೈಕೊಡುತ್ತಿವೆ; ಇದು ಮುಖ್ಯವಾಗಿ ೨೦೦೮ರ ಜಾಗತಿಕ ಆರ್ಥಿಕ ಕುಸಿತದ ನಂತರದ ವಿದ್ಯಮಾನ ಎಂಬುದು ಪುಸ್ತಕದ ವಿಚಾರಸರಣಿ.

ಇಂದಿನ ಈ ಆರ್ಥಿಕ ಪರಿಸ್ಥಿತಿಯ ವಾಸ್ತವತೆ ಅರ್ಥವಾಗಬೇಕಿದ್ದರೆ ಬೇರೆಯದೇ ಕನ್ನಡಕ ಬೇಕು ಎನ್ನುವ ಪುಸ್ತಕ ಆ ಕನ್ನಡಕವನ್ನು ತಾನು ಒದಗಿಸುವುದಾಗಿ ಹೇಳುತ್ತದೆ. ಹಣ ಮತ್ತು ಇಂಧನ, ಬಂಡವಾಳ ಮತ್ತು ಸಂಪನ್ಮೂಲ ಹಾಗೂ ಪರಿಕಲ್ಪನೆ ಮತ್ತು ವಾಸ್ತವಗಳ ನಡುವಣ ಸಂಬಂಧವನ್ನು ಮರೆತದ್ದೇ ಈ ಸಮಸ್ಯೆಯ ಮೂಲ ಎನ್ನುವ ಪುಸ್ತಕದ ಬಗ್ಗೆ ಉನ್ನತ ಚಿಂತಕರಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ಮಾಧ್ಯಮ ಯುವಕರಿಗೆ ದಾರಿದೀಪ

Untitled-15

ಪುಸ್ತಕ: ನೀವು ಅತ್ಯುತ್ತಮ ಸಂದರ್ಶಕ ಆಗಬಯಸುವಿರಾ?

ಲೇಖಕರು: ಅರುಣಕುಮಾರ ಹಬ್ಬು

ಪುಟಗಳು: ೧೪+೧೫೪; ಬೆಲೆ: ರೂ. ೧೫೦

ಪ್ರಕಾಶಕರು: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ

ಹುಬ್ಬಳ್ಳಿ ೫೮೦ ೦೨೦

ಹೊಸದಾಗಿ ಪತ್ರಿಕೋದ್ಯಮಕ್ಕೆ ಕಾಲಿಡುತ್ತಿರುವ ಹಾಗೂ ಕೆಲಕಾಲ ಪತ್ರಿಕೋದ್ಯಮದಲ್ಲಿ ಕೆಲಸಮಾಡುತ್ತಿರುವವರು ತಿಳಿಯಬೇಕಾದ, ಕಲಿಯಬೇಕಾದ ಅನೇಕ ಅನಿವಾರ್ಯತೆಗಳು ಇಂದು ನಿರ್ಮಾಣವಾಗಿವೆ. ಈ ಹಿನ್ನೆಲೆಯನ್ನು ಇಟ್ಟುಕೊಂಡು, ಮಾಧ್ಯಮದ ಯುವಮಿತ್ರರಿಗೆ ದಾರಿದೀಪವೆಂದು, ಪರ್ತಕರ್ತ ಅರುಣಕುಮಾರ ಹಬ್ಬು ರಚಿಸಿದ ಗ್ರಂಥ – ‘ನೀವು ಅತ್ಯುತ್ತಮ ಸಂದರ್ಶಕ ಆಗಬಯಸುವಿರಾ?’ ಲೇಖಕ ಅರುಣಕುಮಾರ ಹಬ್ಬು ಪತ್ರಿಕೋದ್ಯಮದಲ್ಲಿ ತಾವು ಗಳಿಸಿದ ೩೩ ವರ್ಷಗಳ ಅನುಭವ ಹಾಗೂ ನಡೆಸಿದ ಸಂದರ್ಶನಗಳನ್ನು ಆಧಾರವಾಗಿಟ್ಟುಕೊಂಡು ಈ ಗ್ರಂಥವನ್ನು ರಚಿಸಿದ್ದಾರೆ. ಇದು ಉದಯೋನ್ಮುಖ ಪತ್ರಕರ್ತರಿಗೆ ಒಂದು ಮಾರ್ಗದರ್ಶಿಯಾದರೆ, ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪಠ್ಯವಾಗಿ ಅಥವಾ ಆಕರಗ್ರಂಥವಾಗಿ ಪ್ರಯೋಜನವಾಗಬಹುದು ಎಂಬುದು ಲೇಖಕರ ಅಭಿಮತ.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ