ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಡಿಸೆಂಬರ್ 2015 > ಕರ್ನಾಟಕ ಇತಿಹಾಸದ `ಜಂಗಮ ವಿಶ್ವಕೋಶ’ ಡಾ| ಯು. ಸೂರ್ಯನಾಥ ಕಾಮತ್

ಕರ್ನಾಟಕ ಇತಿಹಾಸದ `ಜಂಗಮ ವಿಶ್ವಕೋಶ’ ಡಾ| ಯು. ಸೂರ್ಯನಾಥ ಕಾಮತ್

ಈಚೆಗೆ, ೨೧.೧೦.೨೦೧೫ರಂದು, ನಮ್ಮನ್ನು ಅಗಲಿದ ಸಂಶೋಧಕ, ಇತಿಹಾಸಕಾರ ಡಾ| ಯು. ಸೂರ್ಯನಾಥ ಕಾಮತ್ (ಜನನ: ೨೬.೪.೧೯೩೭) `ಉತ್ಥಾನ’ದ ಪ್ರಥಮ ಸಂಪಾದಕರು. `ಉತ್ಥಾನ’ ಪತ್ರಿಕೆಯ ಪ್ರಕಟಣೆ ಆರಂಭವಾದದ್ದು ಅಕ್ಟೋಬರ್ ೧೯೬೫ರಲ್ಲಿ. ಮಾರ್ಚ್ ೧೯೬೬ರವರೆಗೆ ಸಂಪಾದಕತ್ವವನ್ನು ಡಾ| ಸೂರ್ಯನಾಥ ಕಾಮತ್ ನಿರ್ವಹಿಸಿದರು.

5317ಕರ್ನಾಟಕದ ಇತಿಹಾಸವನ್ನು ಅಂಗೈನೆಲ್ಲಿಯಷ್ಟು ಕರಾರುವಾಕ್ಕಾಗಿ ಬಲ್ಲ, ರಚಿಸಿ ಪ್ರಚುರಪಡಿಸಿದ ಬೆರಳೆಣಿಕೆಯ ಜನರಲ್ಲಿ ಡಾ| ಕಾಮತ್ ಒಬ್ಬರು. ಇತಿಹಾಸಕ್ಕೆ ತಮ್ಮನ್ನು ಪೂರ್ಣವಾಗಿ ಅರ್ಪಿಸಿಕೊಂಡ ಅವರನ್ನು ಕರ್ನಾಟಕ ಇತಿಹಾಸದ `ಜಂಗಮ ವಿಶ್ವಕೋಶ’ (moving encyclopaedia) ಎಂದು ಅನೇಕರು ಗುರುತಿಸಿದ್ದಾರೆ. ಪ್ರಖರ ಚಿಂತನೆ, ಸ್ಪಷ್ಟ ಮಾತುಗಳಿಗೆ ಹೆಸರಾಗಿದ್ದ ಡಾ| ಕಾಮತ್ ಹಿಡಿದ ಕೆಲಸವನ್ನು ಪಟ್ಟುಹಿಡಿದು ಸಾಧಿಸುತ್ತಿದ್ದರು. ವ್ಯರ್ಥಮಾತುಗಳಲ್ಲಿ ಕಾಲಕಳೆಯುವ ಆರಾಮಕುರ್ಚಿ ವಿದ್ವಾಂಸರು ಅವರಲ್ಲ. ಡಾ| ಕಾಮತ್ ಧ್ವನಿವರ್ಧಕದ ಮುಂದೆ ಬಂದರೆಂದರೆ ವಿಚಾರದ ಜ್ಯೋತಿ ಹೊತ್ತಿಕೊಳ್ಳುತ್ತಿತ್ತು; ಕೇಳುಗರ ಕಿವಿ ಅರಳುತ್ತಿದ್ದವು.

ಕರ್ನಾಟಕ ಸರ್ಕಾರದ ಗೆಜೆಟಿಯರ್ ನಿರ್ದೇಶಕರಾಗಿ (೧೯೮೧-೧೯೯೫) ರಾಜ್ಯದ ಗೆಜೆಟಿಯರ್ ಮುಖ್ಯ ಸಂಪುಟಗಳನ್ನು ಹೊರತಂದದ್ದು ಸೂರ್ಯನಾಥ ಕಾಮತರ ದೊಡ್ಡ ಸಾಧನೆ. `ಕರ್ನಾಟಕದ ಸಂಕ್ಷಿಪ್ತ ಇತಿಹಾಸ’, `ಕರ್ನಾಟಕದ ಕೈಪಿಡಿ’ ಮುಂತಾದ ಹಲವು ಆಕರಗ್ರಂಥಗಳನ್ನೂ ಅವರು ನಾಡಿಗೆ ನೀಡಿದ್ದಾರೆ. `ಕರ್ನಾಟಕ ಇತಿಹಾಸ ಅಕಾಡೆಮಿ’ ಸಂಸ್ಥೆಯನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಡಾ| ಕಾಮತ್ ಅದರ ಮೂಲಕ ಇತಿಹಾಸಕಾರರನ್ನು ನಿರ್ಮಿಸಿದರು, ಸಂಘಟಿಸಿದರು. ಅಕಾಡೆಮಿಯ ನೇತೃತ್ವದಲ್ಲಿ ಸಮ್ಮೇಳನಗಳನ್ನು ನಡೆಸಿ ಇತಿಹಾಸದ ಅಧ್ಯಯನ, ಸಂಶೋಧನೆಗಳ ಉನ್ನತಿಗೆ ಶ್ರಮಿಸಿದರು.

ಅಗಲಿದ ತನ್ನ ಆದ್ಯ ಸಂಪಾದಕರಿಗೆ `ಉತ್ಥಾನ’ ಗೌರವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತದೆ.

– ಸಂಪಾದಕ

Comments are closed.

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ