ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

ಕವನಗಳು

ರೈತನ ಹಾಡು-ಪಾಡು11391484_1600375826884422_678491953593105267_n

ಭೂಮಿತಾಯಿಯ ಬೆವರು

ಅಂತರ್ಜಲವಾಗಿ ಜಿನುಗಿ

ಜುಳುಜುಳು ನಾದವಾಗಿ

ಬಂತೈ ಗಂಗೆಯ ತೇರು!

ಝರಿ, ಹಳ್ಳ, ತೊರೆಯಾಗುತ್ತ

ತೊರೆ ತುಂಬಿ ಹೊಳೆಯಾಗಿ

ಕಾಡುಮೇಡಲೆಯುತ್ತ ಸಾಗಿ

ಬೆಟ್ಟ ಹತ್ತಿ ಕಣಿವೆಗೆ ಧುಮುಕುತ್ತ

ನಿರಂತರ ಓಟವೇ ಆತ್ಮಬಲ!

ದಣಿದಷ್ಟು ಚಿಮ್ಮೋ ಹುಮ್ಮಸ್ಸು

ಹರಿವ ಹುಳಿಕಿಯೇ ಯಶಸ್ಸು

ಜಗವೇ ಬೆವರ ಮಾಯಾಜಾಲ

ಮಳೆ ಹೊಳೆ ಬೆವರ ರೂಪಾಂತರ;

ಜಂಗಮವೆಲ್ಲ ಸಂಗಮಿಸೆ ಮಹಾಸಾಗರ!

ಕಿಸಾನ್ ಚಾನೆಲ್ಲಿಗೆ

ರಾಯಭಾರಿಯಾದರೆ

ಅಮಿತಾಭ ಬಚ್ಚನ್‌ಗೆ

ರೂಪಾಯಿ

ಆರು ಕೋಟಿ!

ಖರೆ ಖರೆ…..

ಉತ್ತಿ ಬಿತ್ತಿ ಬೆಳೆದ

ಅಪ್ರತಿಮ ಕಿಸಾನ್‌ಗೆ

ಉಳಿದದ್ದು ಬರೆ

ಹರಕು ಲಂಗೋಟಿ!

ಅವನದು

ಎಂದಿಗೂ

ಮುಗಿಯದ

ಜೀತ;

ಏಕೆಂದರೆ,

ದೇಶಕ್ಕೆ

ಅವನೇ

ಅನ್ನದಾತ!

ಎಮ್ಮೆನ್ಸಿ ಕಂಪನಿಗಳ ಬೀಜ ಗೊಬ್ಬರಕ್ಕೆ

ಸಹಾಯಧನ! ರೆಕ್ಕೆ ಉಂಟು ಪುಕ್ಕ ಉಂಟು

ಸಾಲ ಬೇಕೆ ಸಾಲ ದವಸಧಾನ್ಯ ಬೆಳೆಯಲಿಕ್ಕೆ?

ಸಾಲಕೂ ಬೇಸಾಯಕೂ ಸಾವಿರದ ನಂಟು!

ಕೇಳಿ ಕಂಗೆಟ್ಟವರುಂಟೇ ಈ ನಿಲ್ಲದ ಗೋಳ?

ಒಂದು ಕಣ್ಣಿಗೆ ಸುಣ್ಣ, ಮತ್ತೊಂದಕೆ ಬೆಣ್ಣೆ!

ಅದನೆ ಮೂಗಿಗೂ ಒರೆಸಿದಂತೆ ಪರಿಮಳ!

ಮೋಸಕ್ಕೀಡೆ? ಕುರುಡಾಯ್ತು ಸಾಕ್ಷಾತ್ ಕಣ್ಣೆ!

ಆಹಾ! ಏನು ಸ್ವಾದಿಷ್ಟ! ಕೊಟ್ಟಿದ್ದನ್ನೇ ನೆಕ್ಕಿ ನೆಕ್ಕಿ

ಹೈಬ್ರೀಡು ಕಾಲಕ್ಕೆ ಸುಣ್ಣಬಣ್ಣ ನೆಕ್ಕುವುದೇ ಊಟ!

ರಾಗಿಮುದ್ದೆ, ಜೋಳದರೊಟ್ಟಿ ತಿನ್ನೋದ್ಬಿಟ್ಟ ಹಕ್ಕಿ

ಹಾರೋದ..ಹಾಡೋದ ಮರೆತೇ ಬಿಟ್ಟಿದೆ ಅಪ್ಪಟ!

ರೆಕ್ಕೆಪುಕ್ಕ ಒತ್ತೆಯಿಟ್ಟ ಹಕ್ಕಿಗೆ ಈಗ ಜೀವವೇ ಭಾರ!

ರಸ್ತೆಗೆ ಬಿದ್ದ ಗೂಡಿನ ಆಕ್ರಂದನವ ತುಸು ಕೇಳುವಿರ?

——   ಚಂಸು ಪಾಟೀಲ

ಲೇಖಕರು ಪ್ರಗತಿಪರ ಕೃಷಿಕರು

www.facebook.com/chamsupatil

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ