ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಮಾರ್ಚ್ 2016 > ರಸಪ್ರಶ್ನೆ

ರಸಪ್ರಶ್ನೆ

onion

೧.           ಭಾರತದಲ್ಲಿರುವ ಅತಿ ದೊಡ್ಡ ದೇವಾಲಯ ಸಂಕೀರ್ಣ ಯಾವುದು?

೨.           ಸಮುದ್ರತಳದಲ್ಲಿರುವ ಅತಿ ದೊಡ್ಡ ಪರ್ವತಶ್ರೇಣಿ ಯಾವುದು?

೩.           ಭಾರತದ ರಾಷ್ಟ್ರಾಧ್ಯಕ್ಷರನ್ನು ಯಾರಾರು ಚುನಾಯಿಸುತ್ತಾರೆ?

೪.           ‘ಚೌಸಾ’ ಯುದ್ಧ ಯಾರಾರ ನಡುವೆ ನಡೆಯಿತು?

೫.           ಸ್ವತಂತ್ರಭಾರತದ ಮೊತ್ತಮೊದಲ ಕಾನೂನುಮಂತ್ರಿ ಯಾರು?

೬.           ಭಾರತದಲ್ಲಿ ಪ್ರತಿ ವ್ಯಕ್ತಿಯ ಸರಾಸರಿ ವರಮಾನವನ್ನು ಮೊತ್ತಮೊದಲು ಅಂದಾಜು ಮಾಡಿದ ಅರ್ಥಶಾಸ್ತ್ರಜ್ಞ ಯಾರು?

೭.           ‘ಆಗಾಖಾನ್ ಟ್ರೋಫಿ’ ಯಾವ ಕ್ರೀಡೆಗೆ ಸಂಬಂಧಿಸಿದ್ದು?

೮.           ದೇಶದಲ್ಲಿ ಎಲ್ಲೆಡೆ ಜನಪ್ರಿಯವಾಗಿರುವ ‘ಹಂಸ-ದಮಯಂತಿ’ ಚಿತ್ರ ಯಾರು ರಚಿಸಿದ್ದು?

೯.           ಕೋಲಾರದ ಚಿನ್ನದ ಗಣಿ ಯಾವ ದಿವಾನರ ಕಾಲದಲ್ಲಿ ಸ್ಥಾಪಿಸಲ್ಪಟ್ಟಿತು?

೧೦.        ‘ಆಲಿಯಂ ಸೆಪಾ’ – ಇದು ಯಾವ ದಿನಬಳಕೆವಸ್ತುವಿನ ವೈಜ್ಞಾನಿಕ ಹೆಸರು?

 

 

 

ಉತ್ತರಗಳು

೧.           ದೆಹಲಿಯಲ್ಲಿರುವ ‘ಅಕ್ಷರಧಾಮ’

೨.           ದಕ್ಷಿಣ ಅಮೆರಿಕಕ್ಕೂ ಆಫ್ರಿಕಕ್ಕೂ ನಡುವೆ ಅಟ್ಲಾಂಟಿಕ್ ಸಾಗರದ ತಳದಲ್ಲಿರುವ ಪರ್ವತಶ್ರೇಣಿ

೩.           ಲೋಕಸಭೆ, ರಾಜ್ಯಸಭೆ ಮತ್ತು ರಾಜ್ಯ ವಿಧಾನಸಭೆಗಳ ಸದಸ್ಯರು

೪.           ಹುಮಾಯೂನ್ ಮತ್ತು ಶೇರ್‌ಖಾನ್

೫.           ಡಾ|| ಬಿ.ಆರ್. ಅಂಬೇಡ್ಕರ್

೬.           ದಾದಾಭಾಯಿ ನವರೋಜಿ

೭.           ಹಾಕಿ

೮.           ರಾಜಾ ರವಿವರ್ಮ

೯.           ಕೆ. ಶೇಷಾದ್ರಿ ಅಯ್ಯರ್

೧೦.        ಈರುಳ್ಳಿ

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ