
೧. ಬಂಗಾಳದಲ್ಲಿ ೧೭-೧೮ನೇ ಶತಮಾನಗಳಲ್ಲಿ ಮಲ್ಲ ರಾಜವಂಶಿಕರು ನಿರ್ಮಿಸಿದ ಗಡಸು ಜೇಡಿಮಣ್ಣಿನ ಪ್ರಸಿದ್ಧ ದೇವಾಲಯಗಳು ಎಲ್ಲಿವೆ?
೨. ‘ನೀರ್ಗಲ್ಲು’ ಎಂದರೆ ಏನು?
೩. ಭೂಸೇನೆ, ವಾಯುಸೇನೆ, ನೌಕಾಸೇನೆ – ಈ ಮೂರೂ ವಿಭಾಗ ಸಿಬ್ಬಂದಿಗಳ ಈಗಿನ ಅಧಿಪ್ರಮುಖರು ಯಾರು?
೪. ರಾಣಿ ಚೆನ್ನಮ್ಮ ಯಾರ ಪತ್ನಿ?
೫. ಕರ್ನಾಟಕದ ಪ್ರಸಿದ್ಧ ಕೀರ್ತಿನಾರಾಯಣ ದೇವಾಲಯ ಎಲ್ಲಿದೆ?
೬. ‘ತರಕಾರಿಗಳ ರಾಜ’ ಎಂದು ಯಾವುದನ್ನು ಕರೆಯುತ್ತಾರೆ?
೭. ಭಾರತದಲ್ಲಿ ಅತಿ ಹೆಚ್ಚು ಚಹಾ ಬೆಳೆಯುವುದು ಯಾವ ರಾಜ್ಯದಲ್ಲಿ?
೮. ‘ಆಗಾಖಾನ್ ಕಪ್’ ಪ್ರಶಸ್ತಿ ಯಾವ ಕ್ರೀಡೆಗೆ ಸಂಬಂಧಿಸಿದ್ದು?
೯. ಅತ್ಯಂತ ಕಡಮೆ ಖಾರವಿರುವ ಮೆಣಸಿನಕಾಯಿ ಜಾತಿ ಯಾವುದು?
೧೦. ಯಾವ ಬಗೆಯ ಆಹಾರದ ಸೇವನೆಯಿಂದ ರಕ್ತದಲ್ಲಿನ ಕೊಲೆಸ್ಟೆರಾಲ್ ಕಡಮೆಯಾಗುತ್ತದೆ?
ಉತ್ತರಗಳು
೧. ಬಿಷ್ಣೂಪುರ್.
೨. ನಿಧಾನವಾಗಿ ಚಲಿಸುವ ಮಂಜಿನ ರಾಶಿ.
೩. ಜನರಲ್ ಬಿಕ್ರಮ್ ಸಿಂಗ್.
೪. ಕಿತ್ತೂರಿನ ಮಲ್ಲಸರ್ಜ ದೇಸಾಯಿ.
೫. ತಲಕಾಡು.
೬. ಆಲೂಗೆಡ್ಡೆ.
೭. ಅಸ್ಸಾಮ್.
೮. ಹಾಕಿ.
೯. ದಪ್ಪ ಮೆಣಸಿನಕಾಯಿ (ಕ್ಯಾಪ್ಸಿಕಮ್).
೧೦. ಕಡಮೆ ಕೊಬ್ಬಿನ ಪದಾರ್ಥಗಳು.