ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

ರಸಪ್ರಶ್ನೆ

೧.           ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮಾಡಿದ ದಾಖಲೆ ಏನು?rasa

೨.           ಬೆಣಚುಕಲ್ಲು ಗುಂಡಗೆ ನುಣಪಾಗಿ ಇರುವುದು ಏಕೆ?

೩.           ಶರೀರ ಸವೆಯುವುದಕ್ಕೆ ಆರಂಭವಾಗುವುದು ಯಾವಾಗ?

೪.           ಸಿಡಿಮದ್ದಿನಲ್ಲಿ ಬಳಕೆಯಾಗುವ ರಾಸಾಯನಿಕ ಯಾವುದು?

೫.           ಇಂಗ್ಲೆಂಡನ್ನು ‘ಸೂರ್ಯ ಮುಳುಗದ ನಾಡು’ ಎನ್ನುತ್ತಾರೆ, ಹಾಗೆ ‘ಸೂರ್ಯೋದಯದ ನಾಡು’ ಎನಿಸಿರುವ ದೇಶ ಯಾವುದು?

೬.           ‘ಕೈಪಿಲ್ಲಿ ಶಂಕರ ಭಟ್ಟಾದ್ರಿಪಾದ’ – ಇದು ಯಾರ ಹುಟ್ಟುಹೆಸರು?

೭.           ‘ಮಾರಿ ಕುಣಿತ’ ಹೆಚ್ಚಾಗಿ ಯಾವ ಜಿಲ್ಲೆಗಳಲ್ಲಿ ಪ್ರಚಲಿತವಾಗಿದೆ?

೮.           ಕೇಂದ್ರಸರ್ಕಾರದ ಮೊತ್ತಮೊದಲ ಮಹಿಳಾಸಚಿವೆ ಯಾರು?

೯.           ‘ಭುವನ ವಿಜಯ’ – ಇದು ಯಾವುದರ ಹೆಸರು?

೧೦.        ಬೆಂಗಳೂರಿನಿಂದ ೫೮ ಕಿ.ಮೀ. ದೂರದಲ್ಲಿರುವ ಸಾವನದುರ್ಗ ಯಾರ ಅಡಗುದಾಣವಾಗಿತ್ತು?

ಉತ್ತರಗಳು

೧.           ಅವಿಚ್ಛಿನ್ನವಾಗಿ ೧೯೫ ದಿನಗಳ ಕಾಲ ಬಾಹ್ಯಾಕಾಶದಲ್ಲಿ ಇದ್ದ ಮಹಿಳೆ.

೨.           ಸತತವಾಗಿ ನೀರು ಅಪ್ಪಳಿಸುತ್ತಿರುವುದರಿಂದ.

೩.           ಹುಟ್ಟಿದ ಕ್ಷಣದಿಂದಲೇ!

೪.           ಪೊಟ್ಯಾಸಿಯಂ ನೈಟ್ರೇಟ್.

೫.           ಜಪಾನ್.

೬.           ಆದಿಶಂಕರಾಚಾರ್ಯ.

೭.           ಮಂಡ್ಯ, ಮೈಸೂರು.

೮.           ವಿಜಯಲಕ್ಷ್ಮಿ ಪಂಡಿತ್.

೯.           ಕೃಷ್ಣದೇವರಾಯನ ಆಸ್ಥಾನ.

೧೦.        ಕೆಂಪೇಗೌಡ.

Comments are closed.

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ