ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಆಗಸ್ಟ್ 2021 > ಕರ್ನಾಟಕ ವೀರರೇಳಿ

ಕರ್ನಾಟಕ ವೀರರೇಳಿ

ಕರ್ನಾಟಕ ವೀರರೇಳಿ | ರಣಭೇರಿ ಕೊಂಬ ಕೇಳಿ |

ಸ್ವಾತಂತ್ರ್ಯ ಮಂತ್ರವನು ಹೇಳಿ | ಪರದಾಸ್ಯ ದೇಹ ಸೀಳಿ         ||ಪಲ್ಲವಿ||

ಪರತಂತ್ರ ಕತ್ತಲೆಯು ಹಾರಿ | ಸ್ವಾತಂತ್ರ್ಯ ಸೂರ್ಯ ತೋರಿ ||

ಭಾರತೀಯ ಜೀವ ಕಳೆಯೇರಿ | ಪರವೈರಿಗಾಯ್ತು ಮಹಾಮಾರಿ  ||೧||

ಧುರಧೀರ ಬುಕ್ಕ ಮಾಧವರು | ಪುಲಕೇಶಿ ವೀರ ವಿಕ್ರಮರು ||

ಸ್ವಾತಂತ್ರ್ಯ ಮಂತ್ರ ಸಾರಿದರು | ಪರರಾಜರನ್ನು ಮೆಟ್ಟಿದರು||೨||

ಲಾಲಾಜಿ ಲಾಠಿ ಹೊಡೆತದಲ್ಲಿ | ಕಲಿ ಜತಿನದಾಸ ಬಹುಬಳಲಿ ||

ನಿಮಗಾಗಿ ಕೊಟ್ಟಿರಾತ್ಮಬಲಿ | ಕುಳಿತಿಹರು ನಗುತ ಸ್ವರ್ಗದಲಿ   ||೩||

ಭಾರತದ ರಕ್ತವನು ಹೀರಿ | ವೀರತೆಯ ಕುಕ್ಕಿ ನೆಲಕೂರಿ |

ಭಾರತೀಯ ಮಾನವನು ಮಾರಿ | ಮಾಡಿದರು ನಾಡ ಸೆರೆ ಸೂರಿ       ||೪||

ಸ್ವಾತಂತ್ರ್ಯ ಸ್ವಾಭಿಮಾನ | ಹೊಮ್ಮಿಕ್ಕಿ ಕಾದಿರಣ್ಣ ||

ಧುಮ್ಮಕ್ಕಿರಣದೊಳಿನ್ನಾ | ಹಗೆಯನ್ನು ಮೆಟ್ಟಿರಣ್ಣಾ ||೫||

ಕರ್ನಾಟಕ ವೀರರೇಳಿ | ರಣಭೇರಿ ಕೊಂಬ ಕೇಳಿ |

ಸ್ವಾತಂತ್ರ್ಯ ಮಂತ್ರವನು ಹೇಳಿ | ಪರದಾಸ್ಯ ದೇಹ ಸೀಳಿ ||ಪಲ್ಲವಿ||

ಜಿ. ರಾಮರಾವ ಹೇಜೀಬ

(‘ಬೆಳಗಾವಿ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಸಮರ’ ಸಂಗ್ರಹದಿಂದ)

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ