ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಫೆಬ್ರವರಿ 2023

ಉತ್ಥಾನ ಫೆಬ್ರವರಿ 2023

ಪರಿಸರಸ್ನೇಹಿ ಜೀವನಶೈಲಿ

ಪರಿಸರಸ್ವಾಸ್ಥ್ಯ ಕುಸಿಯುತ್ತಿರುವುದರಿಂದುಂಟಾಗುತ್ತಿರುವ ಸಮಸ್ಯೆಗಳ ಅರಿವು ಈಗ ಜಗತ್ತಿಗೆಲ್ಲ ಆಗಿದೆ. ಆದರೆ ಇದುವರೆಗೆ ಬಹುಮಟ್ಟಿಗೆ ಯಾರಾರನ್ನೋ ಕಾರಣವಾಗಿಸುವುದು, ಪರಿಹಾರವನ್ನು ತಾಂತ್ರಿಕತೆಗಳಲ್ಲಿ ಅರಸುವುದು ಮೊದಲಾದವೇ ನಡೆದಿವೆ. ಈಗಲಾದರೋ ಎಲ್ಲೆಡೆ ಹವಾಮಾನವೈಪರೀತ್ಯ, ಹಿಮನದಿಗಳು ಕರಗುತ್ತಿರುವುದು, ಸಮುದ್ರಮಟ್ಟ ಏರುತ್ತಿರುವುದು, ಅಕಾಲಿಕ ಮಳೆ, ಭೂಕುಸಿತ ಮೊದಲಾದ ವಿದ್ಯಮಾನಗಳು ಹಿಂದಿಗಿಂತ ಹೆಚ್ಚು ಆತಂಕವನ್ನು ಸೃಷ್ಟಿಸುತ್ತಿವೆ. ಈ ಹಿನ್ನೆಲೆಯಲ್ಲಿ ಕಳೆದ ವಿಶ್ವ ಪರಿಸರ ದಿನ (ಜೂನ್ ೫) ಮೊದಲಾದ ಸಂದರ್ಭಗಳಲ್ಲಿ ಪ್ರಧಾನಿ ನರೇಂದ್ರಮೋದಿ ಅವರು ಪ್ರವರ್ತಿಸುತ್ತ ಬಂದಿರುವ ‘ಮಿಷನ್ ಲೈಫ್’ ಸೂತ್ರಾವಳಿ ಎಲ್ಲರ ಚಿಂತನೆಗೂ ಅನುಷ್ಠಾನಕ್ಕೂ ಅರ್ಹವಾಗಿದೆ. […]

ದೀಪ್ತಿ

ಅಯುಕ್ತಃ ಪ್ರಾಕೃತಃ ಸ್ತಬ್ಧಃ ಶಠೋ ನೈಷ್ಕೃತಿಕೋಲಸಃ | ವಿಷಾದೀ ದೀರ್ಘಸೂತ್ರೀ ಚ ಕರ್ತಾ ತಾಮಸ ಉಚ್ಯತೇ ||                          – ಭಗವದ್ಗೀತಾ, ೧೮:೨೮ “ಅಜಾಗರೂಕತೆ, ಸಂಸ್ಕಾರಹೀನತೆ, ಅವಿನಯ, ಶಠತೆ, ಕಾರ್ಯಶೀಲತೆ ಇಲ್ಲದಿರುವುದು, ಆಲಸ್ಯ, ನಿಷ್ಕಾರಣ ವಿಷಾದಪಡುವುದು, ದೀರ್ಘಸೂತ್ರತೆ – ಈ ಸ್ವಭಾವಗಳನ್ನು ಬೆಳೆಸಿಕೊಂಡವನು ‘ತಾಮಸ ಕರ್ತ’ನೆನಿಸುತ್ತಾನೆ.” ಆಗಬೇಕಾದ ಕೆಲಸಗಳಿಂದ ವಿಮುಖರಾಗುವುದು, ಕಲ್ಪಿತ ಕಾರಣಗಳನ್ನು ಮುಂದೊಡ್ಡಿ ನಿರ್ಣಯಗಳನ್ನು ಮುಂದಕ್ಕೆ ಹಾಕುವುದು, ಏನೋ ತೊಂದರೆಯಾಗುತ್ತದೆಂದು ಶಂಕೆಪಟ್ಟು ನಿಷ್ಕ್ರಿಯರಾಗಿರುವುದು – ಇಂತಹ ದೀರ್ಘಸೂತ್ರತೆಯು ವೈಯಕ್ತಿಕ ವಹಿವಾಟುಗಳಲ್ಲಿಯೂ ಸಾರ್ವಜನಿಕ ಕ್ಷೇತ್ರಗಳಲ್ಲಿಯೂ ಅದಕ್ಷತೆಯಲ್ಲಿ ಪರಿಣಮಿಸುತ್ತದೆ. […]

ರಾಜನೂ ಭಿಕ್ಷುಕನೇ!

ರಾಜನೂ ಭಿಕ್ಷುಕನೇ!

ರಾತ್ರಿಯಾವರಿಸಿತು. ಚಂದ್ರನೂ ಕಾಣುತ್ತಿರಲಿಲ್ಲ. ಮುಂದೆ ಏನೆಂಬುದು ರಾಜನಿಗೆ ಕಾಣದಷ್ಟು ಕಗ್ಗತ್ತಲು. ಕುದುರೆ ತನ್ನನ್ನು ಖಂಡಿತ ಕಾಡಿನಿಂದ ಹೊರಗೆ ಕರೆದೊಯ್ಯುತ್ತದೆ ಎಂದು ಯೋಚಿಸಿದ. ಅದು ಹಾಗೂ–ಹೀಗೂ ಕೊನೆಗೆ ಕಾಡಿನಿಂದಾಚೆ ಬಂದಿತು. ಸುತ್ತಲೂ ನೋಡಿದ. ಅಕ್ಕಪಕ್ಕ ಯಾವುದೇ ಹಳ್ಳಿಯ ಸುಳಿವಿರಲಿಲ್ಲ. ಆಕಾಶವೆಲ್ಲ ಮೋಡದಿಂದ ಮುಸುಕಿತ್ತು. ಮಳೆ ಸುರಿಯಲಾರಂಭಿಸಿತು. ಇಂದು ಅರಮನೆಗೆ ಹಿಂತಿರುಗಲಾರೆ ಎಂದು ಚಿಂತೆ ಹತ್ತಿತು. ಇಲ್ಲೇ ಯಾವುದಾದರೂ ಹಳ್ಳಿಯಲ್ಲಿ ತಂಗುವುದೆAದು ತರ‍್ಮಾನಿಸಿದ. ಆದರೆ ಹಳ್ಳಿ ಯಾವ ದಿಕ್ಕಿಗಿದೆ ಎನ್ನುವುದು ತಿಳಿಯಲಿಲ್ಲ. ಕುದುರೆ ಮುಂದೆ ಹೋಗುತ್ತಲೇ ಇತ್ತು. ಬಹಳ ವರ್ಷಗಳ […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ