ಅಂತರ್ಜಲವನ್ನು ಹೀರಿ ಮಾರಾಟಮಾಡುವ ಬಾಟಲುನೀರು ಪೂರೈಕೆ ಉದ್ಯಮಗಳು ದೇಶದ ಅಂತರ್ಜಲವನ್ನು ಯಾವ ರೀತಿಯಲ್ಲಿ ಆಪೋಶಿಸುತ್ತಿವೆಯೆಂದರೆ ಅತ್ಯಂತ ತ್ವರಿತಗತಿಯಲ್ಲಿ ಅವುಗಳ ಖಜಾನೆ ತುಂಬಿ ತುಳುಕುತ್ತವೆ’
Month : June-2016 Episode : Author : ಕಾಕುಂಜೆ ಕೇಶವ ಭಟ್ಟ
Month : May-2016 Episode : Author : ಎಚ್ ಮಂಜುನಾಥ ಭಟ್
ಊಟಕ್ಕೂ ಗತಿಯಿಲ್ಲದ ತೃತೀಯ ಜಗತ್ತಿನ ಕಡುಬಡವರಾದರೂ ಸರಿ; ಔಷಧಿ ಕೊಟ್ಟು ಅವರ ರಕ್ತವನ್ನು ಹೀರಿ ನಮ್ಮ ಹಣದ ಥೈಲಿಯನ್ನು ತುಂಬಿಸಿಕೊಳ್ಳುತ್ತೇವೆ ಎನ್ನುವ ಮನೋಭಾವವನ್ನು ಬಹುರಾಷ್ಟ್ರೀಯ ಬೃಹತ್ ಔಷಧಿ ಕಂಪೆನಿಗಳಲ್ಲಿ ಕಾಣುತ್ತೇವೆ. ಅವುಗಳ ಈ ಮನೋಭಾವ ‘ಅಮಾನವೀಯತೆಯೊಂದಿಗೆ ಅಭಿವೃದ್ಧಿ’ ಎನಿಸುವಂಥದ್ದು. ‘ಮಾನವೀಯ ಮುಖದೊಂದಿಗೆ ಅಭಿವೃದಿ’ (development with human face) ಎನ್ನುವ ಒಂದು ಮಾತನ್ನು ಈಚಿನ ದಿನಗಳಲ್ಲಿ ನಾವು ಆಗಾಗ ಕೇಳುತ್ತಿರುತ್ತೇವೆ. ಈ ಮಾತಿಗೆ ವಿಶೇಷವಾದ ಒತ್ತು ಸಿಗುತ್ತಿರುವುದರಿಂದ ಮಾನವೀಯ ಮುಖವಿಲ್ಲದ ಒಂದು ಅಭಿವೃದ್ಧಿ ಇದೆ; ಮತ್ತು ಇಂದಿನ […]
Month : December-2015 Episode : Author : ಲೆ|| ಜ|| ಎಸ್.ಸಿ. ಸರದೇಶಪಾಂಡೆ
ಗತಶತಮಾನದಲ್ಲಾದ ಮಹಾಯುದ್ಧಗಳಂತೆ ಈಗಿನ ದಿನಗಳಲ್ಲಿ, ಈಗಿನ ಜಗದ್ವ್ಯಾಪಾರದಲ್ಲಿ ಆಗುವುದು ಅಸಾಧ್ಯ. ಹಾಗೇನಾದರೂ ಆಗುವುದನ್ನು ತಡೆಯಲೆಂದೇ ಆಧುನೀಕರಣಗೊಂಡ ಶಕ್ತಿಯುತ, ಸದಾ ಸನ್ನದ್ಧ, ಅಣ್ವಸ್ತ್ರಸಹಿತವಾದ ಸಶಸ್ತ್ರಬಲಗಳ ಸಂಘಟನೆ ಮತ್ತು ಅವುಗಳನ್ನು ಉಪಯೋಗಿಸುವ ಯುಕ್ತಿ, ತಂತ್ರ, ವಿಧಾನಗಳ, ಸ್ಪಷ್ಟೀಕರಣದ ಪ್ರದರ್ಶನ ಇವು ನಮ್ಮ ಎದುರಾಳಿಗಳಿಗೆ ಮತ್ತು ಜಗತ್ತಿಗೆ ಮನದಟ್ಟಾಗುವಂತಿರಬೇಕು. ಅಂತಹ ಯುದ್ಧಸನ್ನದ್ಧತೆ ನಮ್ಮಲ್ಲಿದೆಯೆ? – ಹಿರಿಯ ಲೇಖಕ, ಸೇನಾಪಡೆಯ ನಿವೃತ್ತ ಅಧಿಕಾರಿ ಲೆ|| ಜ|| ಎಸ್.ಸಿ. ಸರದೇಶಪಾಂಡೆಯವರು `ಉತ್ಥಾನ’ಕ್ಕಾಗಿ ಬರೆದ ಒಂದು ಮಾಹಿತಿಪೂರ್ಣ ವಿಶೇಷ ಲೇಖನ ಇಲ್ಲಿದೆ….
Month : September-2015 Episode : Author : ಸಂತೋಷ್ ಜಿ.ಆರ್.
“ಶ್ರೀಕೃಷ್ಣನು ರುಚಿಯಾದ ಭಕ್ಷ್ಯಭೋಜ್ಯ ತಯಾರಿಸಿ ಕಾದುಕೊಂಡಿದ್ದ ದುರ್ಯೋಧನನ ಮನೆಗೆ ಊಟಕ್ಕೆ ಹೋಗದೆ ಬಡವನಾದ ವಿದುರನ ಮನೆಗೆ ಹೋಗಿ ಕದನ್ನವನ್ನು ತಿಂದದ್ದು ಏಕೆ? ಶ್ರೀಕೃಷ್ಣನಿಗೆ ಅದೇ ಮಾನಸಿಕ ಸುಖ ನೀಡಿತು. ರಾಣಾ ಪ್ರತಾಪನಿಗೆ ದಾಸ್ಯತೆಯ ಸುಖಭೋಗಕ್ಕಿಂತ ಸ್ವಾತಂತ್ರ್ಯದ ಒಣರೊಟ್ಟಿ, ಹುಲ್ಲು ಹಾಸಿಗೆಯೇ ಸುಖ-ಸಮಾಧಾನ ನೀಡಿತು. ಧ್ಯೇಯವಾದಿಗಳಿಗೆ ಧ್ಯೇಯಪ್ರಾಪ್ತಿಯೂ, ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ವಾತಂತ್ರ್ಯದ ಸಾಧನೆಯೂ ಅಸೀಮ ಆನಂದ ನೀಡುತ್ತವೆ. ಅವರಿಗೆ ಆ ಮಾರ್ಗದಲ್ಲಿ ಸಿಗುವ ಕಷ್ಟಸಂಕಟಗಳೇ ಆನಂದ ತಂದುಕೊಡುತ್ತವೆ. ಹೀಗೆ ಪ್ರತಿಯೊಬ್ಬನ ಬದುಕಿಗೂ ಒಂದೊಂದು ಗುರಿ ಇರಬಹುದು. ಅವರೆಲ್ಲರೂ […]
Month : July-2015 Episode : Author :
ಹೊಸ ಅಣೆಕಟ್ಟುಗಳನ್ನು ಕಟ್ಟುವುದಕ್ಕೇ ಅವಕಾಶ ಇಲ್ಲವಾಗಿರುವ ಭಾರತದಲ್ಲಿ ಹಳೆಯ ನೀರಾವರಿ ವ್ಯವಸ್ಥೆಯನ್ನು ಅರಿತು ನಡೆಯುವ ಕಾಲ ಒದಗಿದೆ. ಶತಮಾನಗಳಿಂದ ಸಕ್ರಿಯವಾಗಿರುವ ಹಲವು ಅಣೆಕಟ್ಟುಗಳಿರುವ ಭಾರತದಲ್ಲಿ ಹೊಸ ಅಣೆಕಟ್ಟುಗಳು, ನೀರಾವರಿ ವ್ಯವಸ್ಥೆಗಳು ವಿಫಲವಾಗಲು ಪರಂಪರೆಯ ವಿಸ್ಮರಣೆಯೇ ಕಾರಣ. ಅದರಲ್ಲೂ ಜಲಮೂಲಗಳನ್ನು ಸಂರಕ್ಷಿಸದ ಅಪರಾಧ ನಮ್ಮದು. ದೇಶ-ವಿದೇಶದ ಸಂಶೋಧಕರೂ ಇದನ್ನೇ ಹೇಳುತ್ತಾರೆ.
Month : May-2015 Episode : Author : ಕಾಕುಂಜೆ ಕೇಶವ ಭಟ್ಟ
Month : May-2015 Episode : Author : ಕಾಕುಂಜೆ ಕೇಶವ ಭಟ್ಟ
ಜೂನ್ ೨೧ರಂದು ಪ್ರಥಮ ಅಂತಾರಾಷ್ಟ್ರೀಯ ಯೋಗ ದಿನ – ಐತಿಹಾಸಿಕ ಕ್ಷಣ ಇದೀಗ ಜೂನ್ ೨೧ನೇ ದಿನಾಂಕವನ್ನು ‘ವಿಶ್ವ ಯೋಗದಿನ’ವಾಗಿ ಆಚರಿಸುವುದಾಗಿ ವಿಶ್ವಸಂಸ್ಥೆ ಘೋಷಿಸಿದೆ. ಇದರಿಂದ ವಿಶ್ವದಾದ್ಯಂತ ಇರುವ ಯೋಗಾಭ್ಯಾಸಿಗಳಿಗೂ ಯೋಗಾಭಿಮಾನಿಗಳಿಗೂ ಸಂತಸವುಂಟಾಗಿದೆ. ಭಾರತೀಯರಿಗಂತೂ ಯೋಗವಿದ್ಯೆ ಈ ರೀತಿಯಾಗಿ ಜಗನ್ಮಾನ್ಯತೆ ಗೌರವ ಗಳಿಸುತ್ತಿರುವುದು ಅಭಿಮಾನದ ಸಂಗತಿ. ಭಾರತೀಯ ಮೂಲದ ಯೋಗವಿದ್ಯೆಯ ಮಹತ್ತ್ವವು ಜಗತ್ತಿನಾದ್ಯಂತ ಪ್ರಸಾರಗೊಳ್ಳಲು ಕಾರಣರಾದವರಲ್ಲಿ ಸ್ವಾಮಿ ವಿವೇಕಾನಂದರಾದಿಯಾಗಿ ಸ್ವಾಮಿ ಶಿವಾನಂದ, ಮಹರ್ಷಿ ಅರಬಿಂದೋ, ಸ್ವಾಮಿ ಕುವಲಯಾನಂದ, ಸ್ವಾಮಿ ಚಿನ್ಮಯಾನಂದ, ಮಹರ್ಷಿ ಮಹೇಶಯೋಗಿ, ಯೋಗಾಚಾರ್ಯ ಬಿ.ಕೆ.ಎಸ್. ಅಯ್ಯಂಗಾರ್, […]
Month : April-2015 Episode : Author : ಬೇಳೂರು ಸುದರ್ಶನ
ಕನ್ನಡನಾಡಿನ ಅನಂತನಾರಾಯಣನ್ ‘ಆಂಥೋನಿ’ಯ ಭರವಸೆಯ ಆವಿಷ್ಕಾರ ಅಲ್ಯುಮಿನಿಯಂಯುಕ್ತ ಹಗುರ, ದಕ್ಷ ಕಾರುಗಳ ಕನಸನ್ನು ಕರ್ನಾಟಕದ ವಿಜ್ಞಾನಿ ನನಸು ಮಾಡುತ್ತಿದ್ದಾರೆ ಇಂಧನ ಸುರಕ್ಷತೆಯ ಬೆಸುಗೆಯನ್ನೂ ಹಾಕಲಿದ್ದಾರೆ! ಕಾರುಗಳ ಉತ್ಪಾದನೆಯಲ್ಲಿ ವಿಶ್ವಪ್ರಸಿದ್ಧ ಸಂಸ್ಥೆಗಳಾದ ಹೊಂಡಾ, ಟೆಲ್ಸಾ, ಜನರಲ್ ಮೋಟಾರ್ಸ್ – ಎಲ್ಲವೂ ಇಂಥ ಅಲ್ಯುಮಿನಿಯಂಯುಕ್ತ ಹಗುರ ಕಾರಿನ ಸಂಶೋಧನೆಗಳಲ್ಲಿ ತೊಡಗಿವೆ. ನೀವು ಅಂತರಜಾಲದಲ್ಲಿ ಹುಡುಕಿದರೆ ಈ ಬಗ್ಗೆ ಸಾಕಷ್ಟು ಮಾಹಿತಿಗಳು ಸಿಗುತ್ತವೆ. ಹೆಚ್ಚಾಗಿ ಸಿಗದೇ ಇರೋದು ಎಂದರೆ, ಈ ದೈತ್ಯ ಸಂಸ್ಥೆಗಳ ಸಂಶೋಧನೆಗಳಿಗಿಂತಲೂ ಹೆಚ್ಚು ದಕ್ಷವಾದ, ಬಾಳಿಕೆ ಬರುವ ವಿಧಾನವನ್ನು ರೂಪಿಸಿದ ಆಂಥೋನಿ […]
Month : April-2015 Episode : Author : ಡಾ. ಸಿ.ಆರ್. ಸತ್ಯ
Month : March-2015 Episode : Author : ಕಾಕುಂಜೆ ಕೇಶವ ಭಟ್ಟ