ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > 2017 > December

ನಾಮವು ಸತ್ ಸ್ವರೂಪವಾಗಿರುತ್ತದೆ

ಸಮರ್ಥ ಸದ್ಗುರು ಶ್ರೀ ಬ್ರಹ್ಮಚೈತನ್ಯ ಗೋಂದಾವಲೇಕರ ಮಹಾರಾಜರು ನಾಮವು ರೂಪಕ್ಕಿಂತ ನಿಶ್ಚಿತವಾಗಿಯೂ ಶ್ರೇಷ್ಠವಾಗಿರುತ್ತದೆ. ಆದ್ದರಿಂದ ರೂಪದ ಧ್ಯಾನವು ಮನಸ್ಸಿನಲ್ಲಿ ಬರದೇ ಇದ್ದರೂ ನಾಮವನ್ನು ಬಿಡಬಾರದು. ಮುಂದೆ ರೂಪವು ತಾನಾಗಿಯೇ ಬರತೊಡಗುತ್ತದೆ. ರೂಪವು ಜಡ ಹಾಗೂ ದೃಶ್ಯವಾಗಿರುವುದರಿಂದ ಅದಕ್ಕೆ ಉತ್ಪತ್ತಿ, ಸ್ಥಿತಿ, ವಿನಾಶ, ಬೆಳೆಯುವುದು, ಕ್ಷೀಣವಾಗುವುದು, ವ್ಯಾಪಿಸುವುದು, ತನ್ನ ಸ್ಥಾನ ಬದಲಾಯಿಸುವುದು ಹಾಗೂ ಕಾಲಮಾನಕ್ಕನುಸಾರವಾಗಿ ಬದಲಾಗುವುದು ಮುಂತಾದ ಬಂಧನಗಳು ಬರುತ್ತವೆ. ಆದರೆ ನಾಮವು ದೃಶ್ಯದ ಆಚೆಗೆ ಹಾಗೂ ಸೂಕ್ಷ್ಮವಾಗಿರುವುದರಿಂದ ಅದಕ್ಕೆ ಉತ್ಪತ್ತಿ, ಸ್ಥಿತಿ, ವಿನಾಶ, ವೃದ್ಧಿ, ಕ್ಷಯ, ದೇಶಕಾಲ […]

ಆರೋಗ್ಯಕರ ಪರಂಪರೆಗಳು ಬೆಳೆಯಲಿ

ಹಲವಾರು ವೈಚಿತ್ರ್ಯಗಳ ನಡುವೆ ಭಾರತದ ರಾಷ್ಟ್ರಜೀವನ ಮುಂದುವರಿದಿದೆ. ಎಲ್ಲಕ್ಕಿಂತ ದೊಡ್ಡ ವಿಪರ್ಯಾಸವೆಂದರೆ ಅತ್ಯಂತ ಉದಾರ ಪರಂಪರೆಯ ವಾರಸಿಕೆ ತನ್ನದೆಂದು ಯಥಾರ್ಥವಾಗಿಯೇ ಹೇಳಿಕೊಳ್ಳುವ ಈ ದೇಶದಲ್ಲಿ ಎಲ್ಲವನ್ನೂ ವಿವಾದವಸ್ತುವಾಗಿಸುವ ನೈಷೇಧಿಕ ಪ್ರವೃತ್ತಿ ಬೆಳೆದಿರುವುದು. ಅಧಿಕ ಜನವರ್ಗ ಯಾವುದೋ ತಥ್ಯಗಳನ್ನು ಸಹಜವಾಗಿ ಸ್ವೀಕರಿಸಿದ್ದರೂ ಎಲ್ಲದರ ಬಗೆಗೂ ತಗಾದೆಯನ್ನೆಬ್ಬಿಸದಿದ್ದರೆ ಒಂದು ವರ್ಗಕ್ಕೆ ಸಮಾಧಾನವಿಲ್ಲ. ಈ ಪ್ರವೃತ್ತಿಗೆ ಧಾರಾಳವಾಗಿ ನೀರು-ಗೊಬ್ಬರಗಳನ್ನೆರೆಯುತ್ತಿರುವವು ಮಾಧ್ಯಮಗಳು; ಏಕೆಂದರೆ ಅವುಗಳ ಪಾಲಿಗೆ ’ಕಲಹವೇ ಕಲ್ಯಾಣ’. ಇದರಿಂದಾಗಿ ಒಂದುಕಡೆ ಅಪಾರ ಶಕ್ತಿಹ್ರಾಸವಾಗುತ್ತಿದ್ದರೆ ಇನ್ನೊಂದುಕಡೆ ನಿಜವಾಗಿ ಅವಧಾನವನ್ನು ಬೇಡುವ ಮುಖ್ಯಸಂಗತಿಗಳೆಲ್ಲ ಹಿನ್ನೆಲೆಗೆ […]

ದೀಪ್ತಿ

ಲೋಭೇನ ಬುದ್ಧಿಶ್ಚಲತಿ ಲೋಭೋ ಜನಯತೇ ತೃಷಾಮ್| ತೃಷಾರ್ತೋ ದುಃಖಮಾಪ್ನೋತಿ ಪರತ್ರೇಹ ಚ ಮಾನವಃ|| – ಹಿತೋಪದೇಶ, ಮಿತ್ರಲಾಭ “ಲೋಭಕ್ಕೆ ಒಳಗಾಗುವುದರಿಂದ ಬುದ್ಧಿಯು ವಿಕಲಗೊಳ್ಳುತ್ತದೆ. ಲೋಭವು ಅತ್ಯಾಶೆಯನ್ನು ಉಂಟುಮಾಡುತ್ತದೆ. ಹೀಗೆ ತೃಷೆಯಿಂದ ಗ್ರಸ್ತನಾದವನು ಈ ಲೋಕದಲ್ಲಿಯೂ ಲೋಕಾಂತರದಲ್ಲಿಯೂ ದುಃಖವನ್ನನುಭವಿಸುತ್ತಾನೆ.” ತನ್ನ ಅರ್ಹತೆಯೇನು, ಮಿತಿಯೇನು ಎಂಬ ಪರಿವೆಯಿಲ್ಲದೆ ಅಹಂಕಾರದಿಂದ ಚೋದಿತರಾದವರು ತಮಗೆಟಕದವುಗಳಿಗಾಗಿ ಹಾತೊರೆಯುತ್ತಾರೆ. ಹಾಗೆ ಜನಿಸುವ ಅತ್ಯಾಶೆಗೆ ಮಿತಿಯೇ ಇರದು. ಈ ಜಾಡಿಗೆ ಬಿದ್ದವರು ಇಹದಲ್ಲಿ, ಪರದಲ್ಲಿ – ಎರಡೆಡೆಯೂ ದುಃಖಕ್ಕೊಳಗಾಗುತ್ತಾರೆ. ಅಹಂತಾಜನಿತ ಲೋಭ-ಮೋಹಗಳಿಂದ ಯಾರು ಆಕೃಷ್ಟರಾಗುವುದಿಲ್ಲವೋ ಅವರು ವಿವೇಕಿಗಳೆನಿಸುತ್ತಾರೆ. […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ