
ಸುಪ್ರಸಿದ್ಧ ಜೈನ ತೀರ್ಥಕ್ಷೇತ್ರ ಶ್ರವಣಬೆಳಗೊಳವು ಒಂದು ಐತಿಹಾಸಿಕ ಕ್ಷೇತ್ರವಾಗಿಯೂ ಪ್ರಸಿದ್ಧಿಯನ್ನು ಹೊಂದಿದೆ. ಪ್ರಸ್ತುತ ಶ್ರೀಕ್ಷೇತ್ರ ಶ್ರವಣಬೆಳಗೊಳದ ಜೈನಮಠದ ಮಠಾಧ್ಯಕ್ಷರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಜೀ. ಜೈನಧರ್ಮದ ಸಾಂಸ್ಕೃತಿಕ ಮಹೋತ್ಸವ ಭಗವಾನ್ ಬಾಹುಬಲಿಯ ಮಹಾಮಸ್ತಕಾಭಿಷೇಕವನ್ನು ಹನ್ನೆರಡು ವರ್ಷಗಳಿಗೆ ಒಮ್ಮೆ ನಡೆಸುವುದು ಸಂಪ್ರದಾಯ. ೨೦೧೮ರ ಫೆಬ್ರುವರಿ ೧೭ರಿಂದ ೨೫ರವರೆಗೆ ನಡೆಯಲಿರುವ ಮಹಾಮಸ್ತಕಾಭಿಷೇಕವು ಸ್ವಾಮಿಜೀಯವರ ಅವಧಿಯಲ್ಲಿ ನಡೆಯಲಿರುವ ನಾಲ್ಕನೆಯ ಮಹಾಮಸ್ತಕಾಭಿಷೇಕವಾಗಿದೆ. ಈ ಸಂದರ್ಭದಲ್ಲಿ ಶ್ರವಣಬೆಳಗೊಳದ ಬಗೆಗೆ , ಜೈನಧರ್ಮದ ತತ್ತ್ವಗಳ ಬಗೆಗೆ, ಬಾಹುಬಲಿಯ ಮಹಿಮೆಯ ಕುರಿತಾಗಿ ಸ್ವಾಮಿಜೀ ಅವರು ’ಉತ್ಥಾನ’ […]