ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

ದೀಪ್ತಿ

ಜಿತೇಂದ್ರಿಯತ್ವಂ ವಿನಯಸ್ಯ ಕಾರಣಂ ಗುಣಪ್ರಕರ್ಷೋ ವಿನಯಾದವಾಪ್ಯತೇ|
ಗುಣಾಧಿಕೇ ಪುಂಸಿ ಜನೋನುರಜ್ಯತೇ ಜನಾನುರಾಗಪ್ರಭವಾ ಹಿ ಸಂಪದಃ||
– ಭಾರವಿ : ಕಿರಾತಾರ್ಜುನೀಯ

“ಸ್ವನಿಯಂತ್ರಣವು ಅತ್ಯಾವಶ್ಯಕವೆಂಬ ಕಾರಣದಿಂದಲೇ ವಿನಯವು ಪ್ರಶಂಸೆಯನ್ನು ಪಡೆದುಕೊಂಡಿರುವುದು. ಎಲ್ಲ ಸದ್ಗುಣಗಳ ಮೂಲವು ವಿನಯಶೀಲತೆ. ಈ ಸದ್ಗುಣಗಳಿರುವ ವ್ಯಕ್ತಿಯನ್ನೇ ಇತರರು ಆದರಿಸುವುದು. ಇತರರ ಆದರಣೆಯಿಂದಲೇ ಎಲ್ಲ ಇಷ್ಟಸಿದ್ಧಿಗಳೂ ಸಾಧ್ಯವಾಗುವುದು.”

ಒಳ್ಳೆಯ ವ್ಯಕ್ತಿಗುಣಗಳಲ್ಲಿ ಎರಡು ವರ್ಗಗಳು ಇವೆ. ಒಂದು ವರ್ಗದವು ವ್ಯವಹಾರಧರ್ಮಕಾರಣದಿಂದ ಅನಿವಾರ್ಯವೂ ಅನುಲ್ಲಂಘ್ಯವೂ ಆದವು. ಇನ್ನೊಂದು ವರ್ಗದವು ಅಪೇಕ್ಷಣೀಯ ಸ್ತರದವೇ ಆದರೂ ಪರಿಣಾಮದೃಷ್ಟಿಯಿಂದ ಮಹತ್ತ್ವದವು. ವಿನಯ ಅಥವಾ ವಿನಮ್ರತೆ ಈ ಎರಡನೇ ವರ್ಗಕ್ಕೆ ಸೇರಿರುವುದೆನ್ನಬಹುದು. ಇದರಿಂದ ಆಗುವ ಉಪಕಾರವೆಂದರೆ ಪರಸ್ಪರ ವ್ಯವಹಾರಗಳನ್ನು ಸುಗಮಗೊಳಿಸುವುದು. ಅಧಿಕಾರಪ್ರಜ್ಞೆಯಿಂದ ಸೆಟೆದು ನಿಲ್ಲುವುದಕ್ಕಿಂತ ಹೊಂದಾಣಿಕೆಯ ಎಂದರೆ ನಮ್ರತೆಯ ಮಾರ್ಗವು ಹಿತಕರವೆಂಬುದು ಲೋಕಾನುಭವ.

ದಾರ್ಶನಿಕ ಸಾಹಿತ್ಯದಲ್ಲಿ ಇದಕ್ಕೆ ಒಂದು ದೃಷ್ಟಾಂತ ಲಭ್ಯವಿದೆ. ಹೂವು- ಹಣ್ಣುಗಳನ್ನು ತಳೆಯುವ ಗಿಡ-ಮರಗಳ ವೈಭವ ಆ ನಿರ್ದಿ? ಕಾಲಾವಧಿಯದು. ಆ ಅವಧಿ ಮುಗಿದ ಮೇಲೆ ಆ ಗಿಡ-ಮರಗಳು ಖಿನ್ನವಾಗುತ್ತವೆ, ಮ್ಲಾನವಾಗುತ್ತವೆ. ಇನ್ನೊಂದು ವರ್ಗದ ಮರಗಳು ಹಸಿರಿಗಾಗಿಯೆ ಬದುಕಿರುತ್ತವ?. ಇವು ಕಳೆಗುಂದುವ ಪ್ರಮೇಯವೇ ಬರುವುದಿಲ್ಲ; ಸದಾ ಆನಂದದಿಂದ ತಲೆಯೆತ್ತಿ ಮೆರೆಯುತ್ತಿರುತ್ತವೆ, ಕಾಂತಿಯಿಂದಿರುತ್ತವೆ! ಯಾರ ಮೇಲಾದರೂ ಪ್ರಭಾವ ಬೀರಬೇಕೆಂಬ ಆಕಾಂಕ್ಷೆಯೇ ಇವಕ್ಕೆ ಇರುವುದಿಲ್ಲ.

ವಿಧಿಯು ನಮಗೆ ಕಲ್ಪಿಸಿರುವ ಸನ್ನಿವೇಶವನ್ನು ನಮ್ರತೆಯಿಂದ ಸ್ವೀಕರಿಸಿ ಅದಕ್ಕೆ ಹೊಂದಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳುವುದರಲ್ಲಿ ನೆಮ್ಮದಿ ಇರುತ್ತದೆ.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ