ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > 2018 > April

ಗೋಪಾಲಕೃಷ್ಣ ಅಡಿಗರ ಜನ್ಮಶತಾಬ್ದ ಸ್ಮರಣೆ

2018, ಕವಿ ಎಂ. ಗೋಪಾಲಕೃಷ್ಣ ಅಡಿಗರ ಜನ್ಮಶತಾಬ್ದ ವರ್ಷ (ಜನನ: ೧೮.೨.೧೯೧೮ರಂದು ಕುಂದಾಪುರದ ಮೊಗೇರಿಯಲ್ಲಿ). ಅವರು ಕನ್ನಡ ಸಾಹಿತ್ಯಕ್ಕೆ ಹೊಸತೊಂದು ದಾರಿಯನ್ನು ನೀಡಿದ ನೇತಾರ; ಕನ್ನಡ ಭಾಷೆ, ಸೂಕ್ಷ್ಮತೆಗೆ, ಸಾಹಿತ್ಯ ವಿಮರ್ಶೆಗೆ ಹೊಸ ದೃಷ್ಟಿಯನ್ನೂ, ಪ್ರಬುದ್ಧತೆಯನ್ನೂ ನೀಡಿದವರು. ’ನವ್ಯಕಾವ್ಯ’ ಎನ್ನುವ ಹೊಸದಿಶೆಗೆ ಚಾಲನೆ ನೀಡಿದ ಅಡಿಗರು, ಕನ್ನಡ ಕಾವ್ಯಲೋಕದಲ್ಲಿ ಒಂದು ಬಗೆಯ ಕ್ರಾಂತಿಗೆ ಮುನ್ನುಡಿ ಬರೆದವರೂ ಹೌದು. ಅರ್ಥಪೂರ್ಣ ನವ್ಯಕಾವ್ಯಗಳನ್ನು ನೀಡಿದ ಮಹಾನ್ ಮಾನವತಾವಾದಿ ಅಡಿಗರನ್ನು ಕುರಿತು ಹತ್ತಿರದ ಬಂಧುವಾಗಿ ಅವರೊಡನೆ ಒಡನಾಟ ಹೊಂದಿದ್ದ ಎಚ್. ಡುಂಡಿರಾಜ್,  […]

ಅಡಿಗರು ಒಬ್ಬ ‘ಕವಿಗಳ ಕವಿ’ – ಡಾ. ಕೆ.ವಿ. ತಿರುಮಲೇಶ್

ಅಡಿಗರು ಒಬ್ಬ 'ಕವಿಗಳ ಕವಿ’  - ಡಾ. ಕೆ.ವಿ. ತಿರುಮಲೇಶ್

ವೃತ್ತಿಜೀವನವನ್ನು ದೂರದ ಹೈದರಾಬಾದ್‌ನಲ್ಲಿ ಕಳೆದವರು ಮತ್ತು ಆನಂತರ ಅಲ್ಲೇ ನೆಲೆಸಿದವರಾಗಿದ್ದರೂ ಕನ್ನಡ ಭಾಷೆ ಮತ್ತು ಸಾಹಿತ್ಯಗಳ ಬಗೆಗೆ ನಿರಂತರ ಸ್ಪಂದಿಸುತ್ತಿರುವವರು ಕವಿ-ಸಾಹಿತಿ ಮತ್ತು ಭಾಷಾಶಾಸ್ತ್ರಜ್ಞ ಡಾ| ಕೆ.ವಿ. ತಿರುಮಲೇಶ್. ಅವರು ಕವಿ ಗೋಪಾಲಕೃಷ್ಣ ಅಡಿಗರಿಂದ ಆರಂಭಗೊಂಡ ನವ್ಯಸಾಹಿತ್ಯ ಚಳವಳಿಯಿಂದ ಪ್ರಭಾವಿತರಾಗಿ ಬರೆಯಲು ಆರಂಭಿಸಿ ಮುಂದೆ ಬಹುಎತ್ತರಕ್ಕೆ ಬೆಳೆದವರು. ಇಂಗ್ಲಿಷ್ ಸೇರಿದಂತೆ ಪಾಶ್ಚಾತ್ಯ ಸಾಹಿತ್ಯ ಮತ್ತು ಚಿಂತನಪ್ರಣಾಳಿಗಳನ್ನು ವಿಪುಲವಾಗಿ ಓದಿಕೊಂಡಿರುವ ತಿರುಮಲೇಶ್ ಪತ್ರಿಕಾ ಅಂಕಣ ಸೇರಿದಂತೆ ವಿವಿಧ ಕಡೆ ಆ ಕುರಿತು ಅಪಾರವಾಗಿ ಬರೆದಿದ್ದಾರೆ. ಕನ್ನಡ ಕಾವ್ಯ, ಸಾಹಿತ್ಯಗಳಲ್ಲಿ […]

ದೀಪ್ತಿ

ದರಿದ್ರಾನ್ ಭರ ಕೌನ್ತೇಯ ನ ಸಮೃದ್ಧಾನ್ ಕದಾಚನ | ವ್ಯಾಧಿತಸ್ಯೌಷಧಂ ಪಥ್ಯಂ ನೀರೋಗಸ್ಯ ಕಿಮೌಷಧೈಃ || – ಮಹಾಭಾರತ “ಮಹಾರಾಜ! ಪ್ರಜಾರಕ್ಷಕರ ಗಮನ ಕೇಂದ್ರೀಕೃತವಾಗಿರಬೇಕಾದದ್ದು ಆರ್ತ-ದೀನರ ಮೇಲೆಯೇ ಹೊರತು ಸಂಪನ್ನರ ಮೇಲಲ್ಲ. ಔ?ಧ-ಪಥ್ಯಾದಿಗಳಿಂದ ಪ್ರಯೋಜನವಾಗುವುದು ಕಾಯಿಲೆಯಲ್ಲಿರುವವರಿಗೇ ಹೊರತು ಆರೋಗ್ಯವಂತರಿಗಲ್ಲ.” ಎಷ್ಟು ನಾಗರಿಕ ವ್ಯವಸ್ಥೆಗಳು ಬೆಳೆದರೂ ಜೀವನಾನುಕೂಲವಂಚಿತರ ದೊಡ್ಡ ವರ್ಗ ಇದ್ದೇ ಇರುತ್ತದೆ. ಬಹುಶಃ ಇದು ಪ್ರಕೃತಿನಿಯಮ. ಅಂತಹ ಆರ್ತರನ್ನು ಗುರುತಿಸುವುದು ಕಷ್ಟವಲ್ಲ. ಹೆಚ್ಚುಮಂದಿ ಉದಾಸೀನರಾಗಿರುತ್ತಾರ?. ಸಂವೇದನಶೀಲರಾದವರು ಕಷ್ಟದಲ್ಲಿರುವವರನ್ನು ಕಂಡೊಡನೆ ದ್ರವಿಸಿಬಿಡುತ್ತಾರೆ, ಅವರ ನೆರವಿಗೆ ಧಾವಿಸುತ್ತಾರೆ, ತಮ್ಮಿಂದಾದ ಸೇವೆ […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ