ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > 2020 > September

ನಿಂತ ಗಡಿಯಾರ (ಪೂರ್ವಾರ್ಧ)

ನಿಂತ ಗಡಿಯಾರ (ಪೂರ್ವಾರ್ಧ)

ಕರಮಚಂದನಲ್ಲಿ ನಾನು ವಕೀಲಗಿರಿ ಮಾಡಲು ಸೇರಿಕೊಂಡ ಮೊದಲ ವರ್ಷದಲ್ಲೇ ನಡೆದ ಒಂದು ಪ್ರಕರಣ ನನ್ನ ಮನದಲ್ಲಿ ಅಚ್ಚಳಿಯದೇ ಉಳಿದಿದೆ. ಅಡ್ಡಂಡ ಕರಮಚಂದನ ಪತ್ತೆದಾರಿಕೆಯ ಕೌಶಲಕ್ಕೆ ಅದೊಂದು ಅಪೂರ್ವ ಉದಾಹರಣೆ ಎಂಬುದು ನನ್ನ ಭಾವನೆ. ವಕೀಲಗಿರಿಯ ಜೊತೆಗೆ ಪತ್ತೆದಾರಿಕೆ ಕರಮಚಂದನ ಹವ್ಯಾಸ. ಅದು ಬಹುಶಃ ಮೇ ತಿಂಗಳ ಅಂತ್ಯದಲ್ಲಿ ಅಥವಾ ಜೂನ್ ತಿಂಗಳ ಆರಂಭದ ದಿನಗಳಲ್ಲಿ ನಡೆದ ಪ್ರಕರಣ. ಒಂದು ದಿನ ಸಂಜೆ ಐದರ ವೇಳೆಗೆ ಸುಮಾರು ಮೂವತ್ತರ ಹರೆಯದ ಮಹಿಳೆಯೊಬ್ಬಳು ನಮ್ಮನ್ನು ವಿಚಾರಿಸಿಕೊಂಡು ಆಗಮಿಸಿದಳು. ನಾಪೋಕ್ಲು ಸಮೀಪದ […]

ನ ದೈನ್ಯಂ, ನ ಪಲಾಯನಂ

ನ ದೈನ್ಯಂ, ನ ಪಲಾಯನಂ

ಒಂದಕ್ಕೆ ಒಂದನ್ನು ಸೇರಿಸಿದರೆ ಎರಡು ಆಗುವುದಕ್ಕೆ ಬದಲು ಹನ್ನೊಂದು ಆಗುವ ಸಂದರ್ಭಗಳು ಇರುತ್ತವೆ. ಕಳೆದ ಜುಲೈ ಮೂರರಂದು ನಸುಕಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನಿಮು ಪರ್ವತಾಗ್ರ ಪ್ರಾಂತಕ್ಕೆ ನೀಡಿದ ಭೇಟಿ ಅಂತಹ ಒಂದು ಸಂದರ್ಭ. ವಾಸ್ತವವಾಗಿ ಪೂರ್ವನಿಶ್ಚಿತ ಯೋಜನೆಯಂತೆ ರಕ್ಷಣಾ ಸಚಿವ ರಾಜನಾಥಸಿಂಗ್ ಅಲ್ಲಿಗೆ ಭೇಟಿ ನೀಡುವುದಿತ್ತು. ಆದರೆ ಕೊನೆಯ ಘಳಿಗೆಯಲ್ಲಿ ಪ್ರಧಾನಿಗಳೇ ಗಡಿಭಾಗಕ್ಕೆ ಧಾವಿಸಿದುದು ಅತ್ಯಂತ ಪ್ರೇರಣಾದಾಯಕವೆನಿಸಿತು. ಸೈನಿಕರನ್ನು ಉದ್ದೇಶಿಸಿ ಮಾತನಾಡುವಾಗ ಪ್ರಧಾನಿಗಳ ಚಹರೆಯಲ್ಲಿ ಎದ್ದುಕಾಣುತ್ತಿದ್ದ ಆತ್ಮವಿಶ್ವಾಸ ಮತ್ತು ದಾಢ್ರ್ಯವಂತೂ ಅತುಲನೀಯವಾಗಿದ್ದವು. ನಮ್ಮ ಸಮರ್ಪಿತ ಸೈನಿಕರನ್ನು […]

ದೀಪ್ತಿ

ಹೃದಯಂ ಸದಯಂ ಯಸ್ಯ ಭಾಷಿತಂ ಸತ್ಯಭೂಷಿತಮ್| ಕಾಯಃ ಪರಹಿತೋಪಾಯಃ ಕಲಿಃ ಕುರ್ವೀತ ತಸ್ಯ ಕಿಮ್|| “ಯಾರ ಹೃದಯದಲ್ಲಿ ದಯೆಯು ತುಂಬಿಕೊಂಡಿದೆಯೋ, ಯಾರ ಮಾತು ಎಂದೂ ಸತ್ಯದಿಂದ ದೂರ ಸರಿಯದೋ, ಯಾರ ಶರೀರವು ಸದಾ ಇತರರ ಹಿತಕ್ಕಾಗಿ ಮೀಸಲಿರುತ್ತದೆಯೋ, ಅಂಥವನನ್ನು ಕಲಿಪುರುಷನು ಹೇಗೆ ತಾನೆ ಬಾಧಿಸಿಯಾನು?” ಯಾರ ಅಂತರಂಗದಲ್ಲಿ ಉದಾರತೆಯೂ ಉದಾತ್ತತೆಯೂ ಪರಹಿತಕಾರಕ ಪ್ರವೃತ್ತಿಯೂ ಸಹಜವಾಗಿ ಮನೆಮಾಡಿಕೊಂಡಿರುತ್ತವೆಯೋ ಅಂಥವನು ಎಂದೂ ಪಾಪವನ್ನೆಸಗಲಾರನಾದುದರಿಂದ ಅವನನ್ನು ಬಾಧಿಸುವ ಅವಕಾಶ ಕಲಿಪುರುಷನಿಗೆ ದೊರೆಯುವುದೇ ಇಲ್ಲ. ಅಂಥವನಿಗೆ ಸದ್ಗತಿ ನಿಶ್ಚಿತ. ಒಂದು ಸತ್ಯಕಥೆ ಇದು. […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ