ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > 2021 > December

ಬೌದ್ಧಿಕ ದಾಸ್ಯ ನೀಗುವುದೆಂದಿಗೆ?

ದೇಶದ ಸ್ವಾತಂತ್ರ್ಯಪ್ರಾಪ್ತಿಯ ಎಪ್ಪತ್ತೈದನೇ ವರ್ಷಾಚರಣೆ ಸಮೀಪಿಸುತ್ತಿರುವ ಸಂಭ್ರಮ ಒಂದೆಡೆಯಾದರೆ ಆತ್ಮಾವಲೋಕನವನ್ನು ಅವಶ್ಯವಾಗಿಸುವ ಹಲವು ಅಂಶಗಳೂ ಇಲ್ಲದಿಲ್ಲ. ರಾಜಕೀಯ ದಾಸ್ಯದಿಂದ ಮುಕ್ತರಾಗುವ ಪ್ರಕ್ರಿಯೆಯಷ್ಟೇ ಮಾನಸಿಕ-ಬೌದ್ಧಿಕ ದಾಸ್ಯವನ್ನು ಕೊಡವಿಕೊಳ್ಳುವುದೂ ಮುಖ್ಯವಷ್ಟೆ? ಹಲವು ಸಮಾಜೋನ್ನತ – ಎಲೀಟ್ ವರ್ಗಗಳು ಈಗಲೂ ಗುಲಾಮೀ ಮಾನಸಿಕತೆಗೇ ಅಂಟಿಕೊಂಡಿರುವುದಕ್ಕೆ ಪುರಾವೆಗಳು ಆಗಿಂದಾಗ ಎದ್ದುಕಾಣುತ್ತಿರುವುದು ವಿಷಾದಕರ. ಇತ್ತೀಚಿನ ನಿದರ್ಶನವೊಂದು ಗಮನಸೆಳೆಯುತ್ತದೆ. ವಿದೇಶೀ ಆಳ್ವಿಕೆಯ ಪರಿಣಾಮ ಎಷ್ಟು ದಟ್ಟವಾದುದೆಂಬುದನ್ನೂ ಇದು ತೋರಿಸುತ್ತದೆ. ಜಲಿಯನ್‌ವಾಲಾಬಾಗ್ ಹತ್ಯಾಕಾಂಡಕ್ಕೆ ಸೇಡು ತೀರಿಸಿಕೊಳ್ಳಲು ಸಂಕಲ್ಪಿಸಿ ವರ್ಷಗಳುದ್ದಕ್ಕೂ ಆ ನಿರ್ಧಾರವನ್ನು ಜೀವಂತವಾಗುಳಿಸಿಕೊಂಡು ಅಂತಿಮವಾಗಿ ಲಂಡನ್ನಿನಲ್ಲಿ ಜನರು […]

ದೀಪ್ತಿ

ದೀಪ್ತಿ

ತತ್ತ್ವಮಾತ್ಮಸ್ಥಮಜ್ಞಾತ್ವಾ ಮೂಢಃ ಶಾಸ್ತ್ರೇಷು ಮುಹ್ಯತಿ | ಗೋಪಃ ಕಕ್ಷಗತೇ ಛಾಗೇ ಕೂಪೇ ಪಶ್ಯತಿ ದುರ್ಮತಿಃ ||     – ಗರುಡಪುರಾಣ ತನ್ನೊಳಗೇ ಇರುವ ತತ್ತ್ವವನ್ನು ಅರಿತುಕೊಳ್ಳದೆ ಮೂಢನು ತತ್ತ್ವವನ್ನು ಕಾಣಲು ಗ್ರಂಥಗಳಲ್ಲೆಲ್ಲ ಹುಡುಕಾಡುತ್ತಾನೆ. ಕುರಿ ಕಾಯುವವನು ತನ್ನ ಬಗಲಲ್ಲಿಯೆ ಮೇಕೆಯನ್ನು ಇಟ್ಟುಕೊಂಡಿರುವುದನ್ನು ಮರೆತು ಅದೇನಾದರೂ ಬಾವಿಯಲ್ಲಿ ಬಿದ್ದಿರಬಹುದೇನೊ ಎಂದು ಬಗ್ಗಿ ನೋಡುತ್ತಾನೆ. ತನಗೆ ಅದು ಬೇಕು ಇದು ಬೇಕು ಎಂದು ಸದಾ ಹಪಹಪಿಸುವುದನ್ನು ಅಭ್ಯಾಸ ಮಾಡಿಕೊಂಡವನಿಗೆ ತನ್ನಲ್ಲಿ ಈಗಾಗಲೇ ಇರುವ ಭಾಗ್ಯದ ಕಡೆಗೆ ಲಕ್ಷ್ಯವೇ ಇರುವುದಿಲ್ಲ. ಸಂತೃಪ್ತಿಯ […]

ಉತ್ಥಾನ ವಾರ್ಷಿಕ ಕಥಾಸ್ಪರ್ಧೆ 2021ರ ಫಲಿತಾಂಶ

ಉತ್ಥಾನ ವಾರ್ಷಿಕ ಕಥಾಸ್ಪರ್ಧೆ 2021ರ ಫಲಿತಾಂಶ

ಉತ್ಥಾನ ಮಾಸಪತ್ರಿಕೆ ಆಯೋಜಿಸಿದ ವಾರ್ಷಿಕ ಕಥಾಸ್ಪರ್ಧೆ ೨೦೨೧ರ ಫಲಿತಾಂಶ ಪ್ರಕಟಗೊಂ ಬಳ್ಳಾರಿಯ ವೀರೇಂದ್ರ ರಾಬಿಹಾಳ್ ಅವರು ಪ್ರಥಮ ಬಹುಮಾನ ಪಡೆದಿದ್ದಾರೆ. ಉತ್ಥಾನ ವಾರ್ಷಿಕ ಕಥಾಸ್ಪರ್ಧೆ ೨೦೨೧ರ ಮೊದಲನೆ, ಎರಡನೆಯ, ಮೂರನೆಯ ಬಹುಮಾನ ಪಡೆದ ಕಥೆ ಮತ್ತು ಐದು ಮೆಚ್ಚುಗೆಯ ಕಥೆಗಳನ್ನು ಆಯ್ಕೆ ಮಾಡಲಾಗಿದೆ. ಪ್ರಥಮ ಬಹುಮಾನವನ್ನು (ರೂ. ೧೫,೦೦೦) ಬಳ್ಳಾರಿಯ ವೀರೇಂದ್ರ ರಾಬಿಹಾಳ್, ಎರಡನೇ ಬಹುಮಾನವನ್ನು (ರೂ. ೧೨,೦೦೦) ಉಡುಪಿಯ ಸುಧಾ ಹೆಗಡೆ ಮತ್ತು ಮೂರನೇ ಬಹುಮಾನವನ್ನು (ರೂ. ೧೦,೦೦೦) ತೀರ್ಥಹಳ್ಳಿಯ ಸವಿರಾಜ್ ಆನಂದೂರು ಅವರು ಪಡೆದಿದ್ದಾರೆ. […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ