ಕೆಲವರು ಭೂಮಿಗೆ ಭಾರವಾಗಿ ಬದುಕಿ, ಅವನು ಸತ್ತರೆ ಸಾಕಪ್ಪಾ ಎಂದು ಛೀಮಾರಿ ಹಾಕಿಸಿಕೊಂಡು ಸಾಯುತ್ತಾರೆ. ಕೆಲವರು ತಮ್ಮ ಬದುಕನ್ನು ಲೋಕಹಿತಕ್ಕಾಗಿ ಸವೆಸಿ ಅಮರರಾಗುತ್ತಾರೆ. ದುಷ್ಟರು ಬದುಕಿದ್ದಾಗಲೂ ನೆಮ್ಮದಿಯಿಂದ ತಾವೂ ಬದುಕುವುದಿಲ್ಲ, ಇತರರನ್ನೂ ಸುಖವಾಗಿ ಬಾಳಲು ಬಿಡುವುದಿಲ್ಲ. ಚಿನ್ನದಂತಹ ಲಂಕೆಯ ಅಧಿಪತಿ ರಾವಣ, ತಾನೂ ಅತೃಪ್ತನಾಗಿ ಬಾಳಿದ. ಆದರೆ ದೈವರಹಸ್ಯ ಶಕ್ತಿಯ ಮುಂದೆ ಎಲ್ಲರೂ ತಲೆಬಾಗಲೇಬೇಕು. ದುಷ್ಟ ಶಕ್ತಿಯ ನಾಶಕ್ಕಾಗಿ, ಶಿಷ್ಟಜನರುದ್ಧಾರಕ್ಕಾಗಿ ಭಗವಂತ ತಾನೇ ಅವತರಿಸಿ ಬರಬೇಕಾಯಿತು. ರಾವಣಸಂಹಾರಕ್ಕಾಗಿ ರಾಮನ ಅವತಾರವಾಯಿತು. ಕೈಕೇಯಿ: ಕೇಕಯ ರಾಜನ ಮಗಳು. ರೂಪವತಿ, […]











