ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

ದೀಪ್ತಿ

ಅನಿರ್ವೇದಂ ಚ ದಾಕ್ಷ್ಯಂ ಚ ಮನಸಶ್ಚಾಪರಾಜಯಂ |

ಕಾರ್ಯಸಿದ್ಧಿಕರಾಣ್ಯಾಹುಃ ತಸ್ಮಾದೇತದ್ ಬ್ರವೀಮ್ಯಹಂ ||

– ರಾಮಾಯಣ, ಕಿಷ್ಕಿಂಧಾಕಾಂಡ

ಬೇಸರಿಸದ ಉತ್ಸಾಹ, ದಕ್ಷತೆ, ಸೋಲನ್ನೊಪ್ಪದ ದಾರ್ಢ್ಯ – ಇವು ಕಾರ್ಯಸಿದ್ಧಿಗೆ ಅನಿವಾರ್ಯವೆಂದು ತಿಳಿದವರು ಹೇಳುತ್ತಾರೆ. ಅದನ್ನೇ ನಾನು ನಿಮಗೂ ಹೇಳುತ್ತಿದ್ದೇನೆ.

ಅಂಗದನು ವಾನರರಿಗೆ ಹೇಳುವ ಪ್ರೇರಕ ವಚನ ಇದು. ಯಾರಲ್ಲಿ ಇಂತಹ ಕಾರ್ಯಮಗ್ನತೆ ಇರುತ್ತದೋ ಅವರು ಸಫಲರಾಗುವುದು ನಿಶ್ಚಿತ.

ಗ್ರೀಸ್ ದೇಶದ ಥ್ರೇಸ್ ಪ್ರಾಂತದಲ್ಲಿ ಒಬ್ಬ ಬಡ ಹುಡುಗ. ಕಾಡಿನಲ್ಲಿ ಕಟ್ಟಿಗೆಗಳನ್ನಾಯ್ದು ತಂದು ಹೊರೆಗಳಾಗಿ ಕಟ್ಟಿ ಮಾರಿ ಜೀವನ ನಡೆಸುತ್ತಿದ್ದ. ಆ ಹೊರೆಗಳು ಅತ್ಯಂತ ಆಕರ್ಷಕವಾಗಿದ್ದುದನ್ನು ಸಜ್ಜನನೊಬ್ಬ ಗಮನಿಸಿ ಕೇಳಿದ – ಈ ಹೊರೆಗಳನ್ನು ನೀನೇ ಕಟ್ಟಿದೆಯಾ? ಬಾಲಕ ಹೌದು ಎಂದ. ಹಾಗಾದರೆ ಇವನ್ನು ಬಿಚ್ಚಿ ಮತ್ತೆ ಹಾಗೆಯೆ ಕಟ್ಟಬಲ್ಲೆಯಾ? ಎಂದುದಕ್ಕೆ ಬಾಲಕ ಮಾಡಬಲ್ಲೆ ಎಂದು ಮಾಡಿ ತೋರಿಸಿದ. ಅವನ ಕೌಶಲ, ಏಕಾಗ್ರತೆಯಿಂದ ಪ್ರಭಾವಿತನಾದ ಸಜ್ಜನ ನೀನು ನನ್ನೊಡನೆ ಬರುವುದಾದರೆ ನಿನ್ನ ಕಲಿಕೆಯ ವೆಚ್ಚವನ್ನೂ ವ್ಯವಸ್ಥೆಯನ್ನೂ ನಾನು ನೋಡಿಕೊಳ್ಳುತ್ತೇನೆ ಎಂದ. ಬಾಲಕ ಒಪ್ಪಿದ; ಕಲಿಯುವ ಗುಣದಿಂದಲೂ ಏಕಾಗ್ರತೆಯಿಂದಲೂ ಉತ್ಸಾಹಶೀಲತೆಯಿಂದಲೂ ಅಲ್ಪಕಾಲದಲ್ಲಿ ಆ ಸೀಮೆಯಲ್ಲಿಯೆ ಅತ್ಯಂತ ಪ್ರತಿಭಾವಂತನೆನಿಸಿದ. ಆ ಹುಡುಗನೇ ಮುಂದೆ ಪೈಥಾಗೊರಸ್ ಎಂದು ವಿಖ್ಯಾತನಾದ. ಅವನಲ್ಲಿದ್ದ ತನ್ಮಯತೆ-ನಿಶ್ಚಲತೆಗಳನ್ನು ಎಳವೆಯಲ್ಲಿಯೆ ಗುರುತಿಸಿ ಪ್ರೋತ್ಸಾಹಿಸಿದವನು ತತ್ತ್ವಜ್ಞಾನಿ ಡೆಮಾಕ್ರಿಟಸ್.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ