ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಡಿಸೆಂಬರ್ 2015 > ಕಣ್ಣೀರೇಕೆ, ಬಿಸಿಯುಸಿರೇಕೆ?

ಕಣ್ಣೀರೇಕೆ, ಬಿಸಿಯುಸಿರೇಕೆ?

ಹಿಂದೆ ಔರಂಗಜೇಬನ ಹೆಸರನ್ನಿರಿಸಿದ್ದ ರಸ್ತೆಗೆ ದೆಹಲಿಯ ನಗರಸಭೆ ಈಗ ಡಾ|| ಎ.ಪಿ.ಜೆ. ಅಬ್ದುಲ್ ಕಲಾಮ್ ರಸ್ತೆ ಎಂದು ಪುನರ್ನಾಮಕರಣ ಮಾಡಿದುದಕ್ಕೆ ಆಕ್ಷೇಪಿಸಿ ಹುಯಿಲೆಬ್ಬಿಸಿರುವ ಪಡೆಯವರು ಎಂದೂ ಯಾವುದೇ ಸಂದರ್ಭದಲ್ಲಿಯೂ ಮುಸ್ಲಿಮರ ಭಾವನೆಗಳಿಗೆ ಕೂದಲಷ್ಟೂ ಧಕ್ಕೆಯಾಗಬಾರದೆಂಬ ಧೋರಣೆಗೆ ಬದ್ಧರಾದವರಾದುದರಿಂದ ಅವರ ಅಭಿಪ್ರಾಯಗಳು ಎಂದೋ ಕಿಮ್ಮತ್ತನ್ನು ಕಳೆದುಕೊಂಡಿವೆ; ಅವನ್ನು ಈಗ ಯಾರೂ ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ರಸ್ತೆಗಳ ಹೆಸರುಗಳು ವ್ಯವಹಾರಸೌಕರ್ಯಸಾಧನಗಳೇ ವಿನಾ ಅವು ಯಾರನ್ನೂ ಅಮರರನ್ನಾಗಿಸಲಾರವು ಮತ್ತು ಪ್ರಭುತ್ವ ನೀಡುವ ಹೆಸರುಗಳನ್ನೇ ಸಾಮಾನ್ಯ ಜನತೆ ಬಳಸುತ್ತಾರೆಂಬ ಖಾತರಿಯೂ ಇಲ್ಲ. ಹೇಗೂ ಹೆಸರನ್ನು ಬದಲಾಯಿಸುವ ದೀರ್ಘಕಾಲದ ರೂಢಿಯೇ ಇದ್ದು ಅದು ಮಾಮೂಲೆನಿಸುವಷ್ಟು ಯಾಂತ್ರಿಕವೆನಿಸಿಬಿಟ್ಟಿದೆಯೆಂಬ ವಾಸ್ತವ ಹಾಗಿರಲಿ. ಹೆಸರನ್ನು ಬದಲಾಯಿಸುವುದು ಚರಿತ್ರೆಗೆ ದ್ರೋಹ ಬಗೆದಂತೆ ಎಂದು ಸೆಕ್ಯುಲರ್ ಪ್ರಭೃತಿಗಳು ವಾದಿಸಿರುವುದೂ ಇದಕ್ಕೆ ಪೂರಕವಾಗಿ ಔರಂಗಜೇಬನ ಗುಣಗಾನ ಮಾಡುತ್ತಿರುವುದೂ ಹಾಸ್ಯಾಸ್ಪದವಾಗಿದೆ. ಇನ್ನೂ ಹತ್ತು ರಸ್ತೆಗಳಿಗೆ ಔರಂಗಜೇಬನ ಹೆಸರನ್ನಿರಿಸಿದರೂ ಅವನ ಜನವಿರೋಧಿ ದಮನಾಚರಣಸರಣಿಯ ಕರಾಳ ಇತಿಹಾಸವನ್ನು ಅಳಿಸಲಾಗಲಿ ತಿರುಚಲಾಗಲಿ ಸಾಧ್ಯವಿಲ್ಲ; ಹಾಗೆ ಮಾಡುವುದರ ಆವಶ್ಯಕತೆಯೂ ಇಲ್ಲ. ರಾಮ-ಸೀತೆಯರ ಉದಾತ್ತತೆ, ರಾವಣನ ನೈಚ್ಯ, ಪಾಂಡವರ ಧರ್ಮಭೀರುತೆ, ಕೌರವರ ನ್ಯಾಯೋಲ್ಲಂಘನೆ – ಎಲ್ಲವನ್ನೂ ಇದ್ದುದು ಇದ್ದಂತೆ ಈಗಲೂ ಮಕ್ಕಳಿಗೆ ತಿಳಿಸಿಕೊಡುವುದಾಗುತ್ತದೆಯೇ ಹೊರತು ಅದನ್ನೆಲ್ಲ ಏನೇ ಟೀಕೆ ಬಂದರೂ ತಿರುಚಲು ಹೋಗುವುದಿಲ್ಲ. ಹೀಗಿರುವುದರಿಂದ ಈ ಸೆಕ್ಯುಲರಿಸ್ಟ್ ಬಣದ ಕಾತಳ   ಏಕೆಂದೇ ಅರ್ಥವಾಗುವುದಿಲ್ಲ. ಮತ್ತು ಈಗಲೂ ೧೭೭ ಹಳ್ಳಿಗಳು ಊರುಗಳು ಮೊದಲಾದವುಗಳೊಡನೆ ಔರಂಗಜೇಬನ ಹೆಸರು ವಿರಾಜಮಾನವಾಗಿ ಉಳಿದಿದೆಯಲ್ಲ!

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ