ಸ್ವಾತಂತ್ರ್ಯಾನಂತರದ ಭಾರತವು ಸರ್ವಾಂಗೀಣ ಪ್ರಗತಿ ಪಥದಲ್ಲಿದ್ದು ವಿಶ್ವದ ಗಮನ ತನ್ನೆಡೆಗೆ ಸೆಳೆಯುವಷ್ಟು ಬಲಿಷ್ಠವಾಗಿ ಇಂದು ಬೆಳೆದುನಿಂತಿದೆ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಮುನ್ನಡೆ ಸಾಧಿಸಿದ್ದರೂ, ಅನೇಕ ರಂಗಗಳಲ್ಲಿ ಆಗಾಗ ಕೇಳಿಬರುವ ರಾಜಕೀಯ ಭ್ರಷ್ಟಾಚಾರಗಳು ಒಂದು ಕಪ್ಪು ಚುಕ್ಕೆಯಾಗಿದ್ದು ಪ್ರಗತಿ ದಾರಿಯ ತೊಡಕಾಗಿವೆ ಮತ್ತು ಅದರ ನಿರ್ಮೂಲನೆಯು ದೊಡ್ಡ ಸವಾಲಾಗಿ ಉಳಿದಿದೆ. ರಾಜಕೀಯ ಕ್ಷೇತ್ರದ ಭ್ರಷ್ಟಾಚಾರವು ದೀರ್ಘಕಾಲದಿಂದ ಉಳಿದುಕೊಂಡಿರುವ ಮತ್ತು ಆಳವಾಗಿ ಬೇರೂರಿರುವ ಸಮಸ್ಯೆಯಾಗಿದ್ದು, ಇದು ಪ್ರಜಾಪ್ರಭುತ್ವದ ಮೌಲ್ಯಗಳು, ಆರ್ಥಿಕ ಏಳಿಗೆ ಮತ್ತು ಸಾರ್ವಜನಿಕ ವಿಶ್ವಾಸವನ್ನು ಕುಸಿಯುವಂತೆ […]











