![ಕವನಗಳು](https://utthana.in/wp-content/uploads/2016/10/u3-150x150.jpg)
ಕವನಗಳು
Month : July-2016 Episode : Author :
Month : May-2016 Episode : Author : ರೇಶ್ಮಾ ಭಟ್
ಏಪ್ರಿಲ್ ಮೇಗಳ ಕಾವಿನಲಿ ಕಳೆದು ಹೋಗಿದೆ ಚೈತ್ರ ಹೊಸತು ಉಲ್ಲಾಸಗಳಿಗಿಲ್ಲಿ ಬೇರೆಯಾಗಿದೆ ಅರ್ಥ. ಮಾಮರ ಕೋಗಿಲೆಗಳು ಕಂಪ್ಯೂ ಪರದೆಯಲಿ ಮೂಡಿ ಹ್ಯಾಪಿ ನ್ಯೂ ಇಯರ್ಗಳು ಈವ್ನಿಂದಲೆ ಹರಿದಾಡಿ ಯುಗದಾದಿಯವರೆಗೂ ಕಾಯುವವರಾರಿಲ್ಲಿ ? ಜೀನ್ಸಿನ ಲಲನೆಯರಲ್ಲಿ ದೀಪ ಹಚ್ಚುವವರಾರು ? ಪಬ್ಬು ಕ್ಲಬ್ಲುಗಳ ಪಾನಗೋಷ್ಠಿಗಳಲಿ ವಸಂತರಸವನು ತುಂಬುವವರಾರು? ಧೂಳಿನಲಿ ಮಿಂದ ಮರಗಳಲಿ ಕೆಂಜಿಗುರುಗಳ ಮೂಡಿಸುವವರಾರು? ಸಂವತ್ಸರದುದ್ದಕೂ ಮಾರುಕಟ್ಟೆಯಲಿ ಸೊನೆ ಮಾವಿನ ಗಂಧ ಮಾನಿನಿಯರ ಮುಡಿಯಲ್ಲಿ ನಿತ್ಯ ಜಾಸ್ಮೀನ್ ಕಂಪು ಮಾರನ ಬಿಲ್ಲಿನಂತೆ ಕಳೆಯೇರಿಸುವ ವಿದ್ಯುತ್ತಿನ ಬಣ್ಣಗಳಲಿ ಸದಾ ಸುಗ್ಗಿಯ […]
Month : March-2016 Episode : Author :
ನಾಲ್ಕು ಕವನಗಳು ೧. ಮತ್ತೆ ಮತ್ತೆ ಮತ್ತೆ ಮತ್ತೆ ಸೋತು ಹರಳುಗಟ್ಟಿದ ಸುಣ್ಣ ನಾನು; ಸುಟ್ಟು ಬಿಡಿ ನನ್ನ ನಿಮ್ಮ ಗೋಡೆಗಳ ಬೆಳಗುತ್ತೇನೆ! ಮತ್ತೆ ಮತ್ತೆ ಎಲೆಗಳುದುರಿ ಬೋಳಾದ ಮರ ನಾನು; ಕಡಿದು ಬಿಡಿ ನನ್ನ ನಿಮ್ಮ ಒಲೆಗೆ ಉರುವಲಾಗುತ್ತೇನೆ! ಮತ್ತೆ ಮತ್ತೆ ಕರಗಿ ಮಂಕಾದ ಬಿದಿಗೆ ಚಂದ್ರ ನಾನು; ನೋಡಿ, ನಕ್ಕುಬಿಡಿ ನನ್ನ ನಿಮ್ಮ ಮನವ ಹುಣ್ಣಿಮೆಯಾಗಿಸುತ್ತೇನೆ! ೨. ಪಾಡು ಕೊರಿಯಾದಲ್ಲಿ ಅಣ್ವಸ್ತ್ರದ ಪರೀಕ್ಷೆ! ಸಿರಿಯಾದಲ್ಲಿ ಅನ್ನ ವಸ್ತ್ರದ ಪ್ರತೀಕ್ಷೆ! ಅವರಿಗೆ ಬೇಕಂತೆ ರಕ್ಷೆ! ಇವರಿಗಿಲ್ಲ […]
Month : February-2016 Episode : Author :
ರೈತನ ಹಾಡು-ಪಾಡು ೧ ಭೂಮಿತಾಯಿಯ ಬೆವರು ಅಂತರ್ಜಲವಾಗಿ ಜಿನುಗಿ ಜುಳುಜುಳು ನಾದವಾಗಿ ಬಂತೈ ಗಂಗೆಯ ತೇರು! ಝರಿ, ಹಳ್ಳ, ತೊರೆಯಾಗುತ್ತ ತೊರೆ ತುಂಬಿ ಹೊಳೆಯಾಗಿ ಕಾಡುಮೇಡಲೆಯುತ್ತ ಸಾಗಿ ಬೆಟ್ಟ ಹತ್ತಿ ಕಣಿವೆಗೆ ಧುಮುಕುತ್ತ ನಿರಂತರ ಓಟವೇ ಆತ್ಮಬಲ! ದಣಿದಷ್ಟು ಚಿಮ್ಮೋ ಹುಮ್ಮಸ್ಸು ಹರಿವ ಹುಳಿಕಿಯೇ ಯಶಸ್ಸು ಜಗವೇ ಬೆವರ ಮಾಯಾಜಾಲ ಮಳೆ ಹೊಳೆ ಬೆವರ ರೂಪಾಂತರ; ಜಂಗಮವೆಲ್ಲ ಸಂಗಮಿಸೆ ಮಹಾಸಾಗರ! ೨ ಕಿಸಾನ್ ಚಾನೆಲ್ಲಿಗೆ ರಾಯಭಾರಿಯಾದರೆ ಅಮಿತಾಭ ಬಚ್ಚನ್ಗೆ ರೂಪಾಯಿ ಆರು ಕೋಟಿ! ಖರೆ ಖರೆ….. ಉತ್ತಿ […]
Month : January-2016 Episode : Author :
ನಿಮಗೆ ನೀವೇ ರೂವಾರಿ ಗ್ರಾಮ್ಯದಾವರಣವೇ ತಳಮೂಲ ಮುಂದೆ ನೀವು ಬೆಳೆದು ಆದದ್ದು ವಿಶಾಲ ಆಲ! ನಿಮ್ಮನರಿಯಲುಂಟೇ ನನ್ನ ಅಳವು? ಮುಕ್ತ ಮನವಾಗಿ ನಿಮ್ಮಿರವು ತೆರವು ಡಿವಿಜಿ ನನಗೆ ನೀವು ಸೋಜಿಗ ಎಲ್ಲ ಅರಿತು ಅರ್ಥೈಸಿದಿರಿ ಈ ಜಗ! *** ಬೆಳಕಿನೊಡನೆ ತಳುಕು ಹಾಕಿ ಶಿಖರದತ್ತ ಹೆಜ್ಜೆ ಹಾಕಿ- ಪ್ರತಿಘಟ್ಟದಲ್ಲೂ ಅನುಭವದಟ್ಟದಲ್ಲೂ ಹತ್ತಿ ಇಳಿದು ನಿಂತು ಕುಂತು ನಡೆದು ಮಿಡಿದು ಸವಿದು ಅಳೆದು ಸುರಿದು ಬಿರಿದು ತೆರೆದು ಹರಿಸಿದಿರಿ ಒಟ್ಟಾರೆ ಜ್ಞಾನಧಾರೆ…. ಮಂಕುತಿಮ್ಮನ ಕಗ್ಗದಲಿದೆ ನಿಮ್ಮ ಚಹರೆ! *** […]
Month : December-2015 Episode : Author :
ಆತ್ಮ ದೂರ ದಿಗಂತದಿ ಮಿನುಗುವ ಪುಟ್ಟ ನಕ್ಷತ್ರವೊಂದು ಕಣ್ಣು ಮಿಟುಕಿಸಿ ಕೇಳುತ್ತಿತ್ತು ನಿರಂತರವಾಗಿ `ನೀ ನನ್ನ ಎತ್ತರ ಏರಬಲ್ಲೆಯಾ? ನನ್ನಂತೆಯೇ ಮಿನುಗಬಲ್ಲೆಯಾ?’ ಇರುಳ ನೀರವತೆಯಲ್ಲಿ ಆ ಮಿಣುಕಿಗೆ ಅಸಡ್ಡೆ ತೋರಿ ಮುಖ ತಿರುಗಿಸಿದ್ದೆ ಅರೇ! ಎಲ್ಲೆಲ್ಲೂ ಕಣ್ಣು ಮಿಟುಕಿಸುತ್ತ ಅಣಕಿಸುತ್ತಿರುವ ತಾರಾಪುಂಜಗಳೇ! ಅಸಹನೆಯ ತೀವ್ರತೆಯಲ್ಲಿ ಮತ್ತೆ ಆ ಮಾಯಾವಿ ತಾರೆಯೆಡೆಗೆ ನಿರುಕಿಸಲು ಕುಹಕಿಯ ಆರ್ಭಟ ಎಲ್ಲೆ ಮೀರಿತ್ತು ರೋಷಗೊಂಡಿದ್ದೆ ನಾನಾಗ ಕೊಂಕಿಗೆ ತಕ್ಕ ಉತ್ತರ ಹೇಳಬಯಸಿದ್ದೆನಾದರೂ ಕೈಲಾಗದ ಅಸಹಾಯಸ್ಥಿತಿ ಅದೊಂದು ದಿನ ಅದಾವ ಮಾಯದಲ್ಲೋ ನಕ್ಷತ್ರ ಕಣ್ಣು […]
Month : November-2015 Episode : Author :
ನದಿಯ ಆಲಾಪ ೧ ಒಂದೇ ನದಿಯಲ್ಲಿ ಎಲ್ಲರೂ ಮುಳುಗಿ ಏಳುತ್ತಾರೆ, ಆ ಮೇಲೆ ಮಡಿ ಮಡಿಯೆಂದು ದೂರ ಸರಿಯುತ್ತಾರೆ! ೨ ಬೇಸಿಗೆಯಲ್ಲಿ ಒಣಗಿ ಬೆತ್ತಲಾಯಿತು ನದಿ; ನಾನೇ ಮೊಗೆದು ಬರಿದಾಗಿಸಿದ್ದು ಎಂದು ಬೀಗಿತು ಬಲೆ! ೩ ಸಾಗರವನ್ನು ಸೇರಬೇಕೆಂಬುದು ನದಿಯ ಕಾತುರ; ನೀರಿನಲ್ಲಿ ನಿಂತು ಪರಲೋಕಕ್ಕೆ ತರ್ಪಣ ಮುಟ್ಟಿಸಲು ಮನುಷ್ಯನ ಆತುರ! ೪ ನದಿ ನಾಡಿನ ಪ್ರವಾದಿ, ಸಾಗರ ಅದರ ಸಮಾಧಿ! ೫ ಜೀವ ಜಲದ ನದಿಯೊಳಗೂ ಜೀವಗಳನ್ನು ಚಪ್ಪರಿಸುವ ಸುಳಿ […]
Month : October-2015 Episode : Author :
ನೋವು-ನಲಿವಿನ ಪುಟಗಳು ಅವಳವಳೆಂದು ನರಳುತಿರಬೇಡ ಕನಸಿಗವಳಿರೆ ಮಾತ್ರ ಭಾವ ಬಂದಿಳಿವುದೇ? ಮನಸಿನೊಳಗಿಣುಕು, ಸಪ್ತ ಲೋಕಕೂ ಮೀರಿ ಸಾಹಿತ್ಯ ಸಂಗ್ರಹವಿದೆ ಭಾವ ಖಂಡೋಲವಿದೆ ಹುಟ್ಟು-ಸಾವಿನ ನಡುವ ದಶಬಲದ ದಾಗೀನು, ಮಿಡಿವ ಹೃದಯದಲಿದೆ ಧರ್ಮ ಕರ್ಮದಲಿದೆ ನೆಲ-ಮುಗಿಲ ಆಲಯವು ಅಗಣಿತಗುಣದಂಬುಧಿಯ ಅಲವಲಿಕೆಯಂಗಳಕೆ ಸುರುವಿ ಸೆಳವಿಕ್ಕಿದೆ ರವಿಯ ರಂಗಿನ ಬಾನು ದಿನಕೆರಡು ಕ್ಷಣಮಾತ್ರ…. ಅಂಶುಧರ ಹೊಳಪಿನಲಿ, ಕಣಕಣದ ಸ್ಪಂದನವಿದೆ ಶರಧಿಯಾಳದೊಳಿಳಿದು ಆಳವರಿಯದ ಅವಕೆ, ಕೆರೆಯೊಡಲಿನಂಬಲಿಗೆ ಹಸಿವು ನೀಗುವುದೇ? ಸಂಗೀತ ಸುಧೆಯೊಳಗೆ ಒಂದೊಂದು ಸ್ವರವಿಲ್ಲ ಶ್ರುತಿ ಲಯ ಸಮರಸದ ನವರಸ ಸಾರಥ್ಯವಿದೆ ಅಕ್ಷೀಣ […]
Month : September-2015 Episode : Author : ಜಯರಾಮ ರೈ ಕುಂಜಾಡಿ
ಮರವೊಂದರಲಿ ಕುಳಿತ| ಎರಡು ಹಕ್ಕಿಗಳಿಹವು ಗುಣ ಭಾವ ಬಣ್ಣದಲಿ| ಸಲೆ ಹೋಲುತಿಹವು ||೧|| ಫಲವೊಂದ ತಿನ್ನುತಿದೆ| ಮೊದಲನೆಯ ಹಕ್ಕಿ ಕುಳಿತು ನೋಡುತಲಿಹುದು| ಎರಡನೆಯ ಹಕ್ಕಿ ||೨|| `ತಿನುವ ಬಾ’ ಎನ್ನುತಿದೆ| ಮೊದಲನೆಯ ಹಕ್ಕಿ| `ನಿನಗಿರಲಿ, ನಾನೊಲ್ಲೆ’| ಎನಲು ಜೊತೆವಕ್ಕಿ ||೩|| ತಿನುವಾಸೆ ಬಿಡದಿಹುದು| ಮೊದಲನೆಯ ಹಕ್ಕಿ| ತಿನಲಾರೆನೆನ್ನುತಿದೆ| ಎರಡನೆಯ ಹಕ್ಕಿ ||೪|| ಸಾಕೆನದೆ ತಿನ್ನುತಿದೆ| ಮೊದಲನೆಯ ಹಕ್ಕಿ ಸಾಕ್ಷಿ ತಾನಾಗಿಹುದು| ಎರಡನೆಯ ಹಕ್ಕಿ ||೫|| ಸುಖದುಃಖ ಸಂಗಾತಿ| ಮೊದಲನೆಯ ಹಕ್ಕಿ| ಅಕಳಂಕ ಸಂನ್ಯಾಸಿ| ಎರಡನೆಯ ಹಕ್ಕಿ ||೬|| […]
Month : September-2015 Episode : Author : ಟಿ.ಎಂ. ರಮೇಶ
ಕಣ್ಣು ಹುಡುಗಿ, ಹಗೂರ ಹೆಜ್ಜೆಯಿಡು ನೆಲಕ್ಕಿದೆ ಕಣ್ಣು. ಕೆಳನೋಡುವ ಸವುಡಿಲ್ಲದಿದ್ದರು ಒಂದರೆಕ್ಷಣ ಪಂಚ ಪ್ರಾಣಗಳ ಮಿಡುಕಾಟ ಕಾಣು. ಅಸಹ್ಯವಾದರು ಹೊಕ್ಕುಳಬಳ್ಳಿ ಜೀವದ್ರವ ರಸ್ತೆಯಂಚಿಗೆ ಬಿದ್ದ ಕರವಸ್ತ್ರ ಹೊಸದಾದರು ಅಸ್ಪೃಶ್ಯ. ಅಮ್ಮನ ಮೊಲೆಯಲ್ಲು ಕಣ್ಣಿತ್ತು ಪ್ರೀತಿ ನೇಯ್ಗೆಯ ಹದವಿತ್ತು ಕರುಳ ಪರಿಮಳವಿತ್ತು. ಕೊಳಲ ಆರು ಕಣ್ಣುಗಳಲಿ ಮಿಡುಕು ಕೊರಳೊಂದ ಕಣ್ಣಲಾದರು ಬೇಡವೆ ಬದುಕು? ಕಂಬನಿಗಾದರು ಬೇಕೊಂದು ಕಣ್ಣು ಸಹನೆ ಹನಿಯುತ್ತ ಬದುಕಿನುದ್ದ ನೆನಪು ಖಜಾನೆ. —- ಟಿ.ಎಂ. ರಮೇಶ