ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಕವನಗಳು

ಕವನಗಳು

ಕವನಗಳು

ಕವನಗಳು

ನಿಮಗೆ ನೀವೇ ರೂವಾರಿ ಗ್ರಾಮ್ಯದಾವರಣವೇ ತಳಮೂಲ ಮುಂದೆ ನೀವು ಬೆಳೆದು ಆದದ್ದು ವಿಶಾಲ ಆಲ! ನಿಮ್ಮನರಿಯಲುಂಟೇ ನನ್ನ ಅಳವು? ಮುಕ್ತ ಮನವಾಗಿ ನಿಮ್ಮಿರವು ತೆರವು ಡಿವಿಜಿ ನನಗೆ ನೀವು ಸೋಜಿಗ ಎಲ್ಲ ಅರಿತು ಅರ್ಥೈಸಿದಿರಿ ಈ ಜಗ! *** ಬೆಳಕಿನೊಡನೆ ತಳುಕು ಹಾಕಿ ಶಿಖರದತ್ತ ಹೆಜ್ಜೆ ಹಾಕಿ- ಪ್ರತಿಘಟ್ಟದಲ್ಲೂ ಅನುಭವದಟ್ಟದಲ್ಲೂ ಹತ್ತಿ ಇಳಿದು ನಿಂತು ಕುಂತು ನಡೆದು ಮಿಡಿದು ಸವಿದು ಅಳೆದು ಸುರಿದು ಬಿರಿದು ತೆರೆದು ಹರಿಸಿದಿರಿ ಒಟ್ಟಾರೆ ಜ್ಞಾನಧಾರೆ…. ಮಂಕುತಿಮ್ಮನ ಕಗ್ಗದಲಿದೆ ನಿಮ್ಮ ಚಹರೆ! *** […]

ಕವನಗಳು

ಕವನಗಳು

ಆತ್ಮ ದೂರ ದಿಗಂತದಿ ಮಿನುಗುವ ಪುಟ್ಟ ನಕ್ಷತ್ರವೊಂದು ಕಣ್ಣು ಮಿಟುಕಿಸಿ ಕೇಳುತ್ತಿತ್ತು ನಿರಂತರವಾಗಿ `ನೀ ನನ್ನ ಎತ್ತರ ಏರಬಲ್ಲೆಯಾ? ನನ್ನಂತೆಯೇ ಮಿನುಗಬಲ್ಲೆಯಾ?’ ಇರುಳ ನೀರವತೆಯಲ್ಲಿ ಆ ಮಿಣುಕಿಗೆ ಅಸಡ್ಡೆ ತೋರಿ ಮುಖ ತಿರುಗಿಸಿದ್ದೆ ಅರೇ! ಎಲ್ಲೆಲ್ಲೂ ಕಣ್ಣು ಮಿಟುಕಿಸುತ್ತ ಅಣಕಿಸುತ್ತಿರುವ ತಾರಾಪುಂಜಗಳೇ! ಅಸಹನೆಯ ತೀವ್ರತೆಯಲ್ಲಿ ಮತ್ತೆ ಆ ಮಾಯಾವಿ ತಾರೆಯೆಡೆಗೆ ನಿರುಕಿಸಲು ಕುಹಕಿಯ ಆರ್ಭಟ ಎಲ್ಲೆ ಮೀರಿತ್ತು ರೋಷಗೊಂಡಿದ್ದೆ ನಾನಾಗ ಕೊಂಕಿಗೆ ತಕ್ಕ ಉತ್ತರ ಹೇಳಬಯಸಿದ್ದೆನಾದರೂ ಕೈಲಾಗದ ಅಸಹಾಯಸ್ಥಿತಿ ಅದೊಂದು ದಿನ ಅದಾವ ಮಾಯದಲ್ಲೋ ನಕ್ಷತ್ರ ಕಣ್ಣು […]

ಕವನಗಳು

ಕವನಗಳು

ನದಿಯ ಆಲಾಪ    ೧ ಒಂದೇ ನದಿಯಲ್ಲಿ ಎಲ್ಲರೂ ಮುಳುಗಿ ಏಳುತ್ತಾರೆ, ಆ ಮೇಲೆ ಮಡಿ ಮಡಿಯೆಂದು ದೂರ ಸರಿಯುತ್ತಾರೆ!   ೨ ಬೇಸಿಗೆಯಲ್ಲಿ ಒಣಗಿ ಬೆತ್ತಲಾಯಿತು ನದಿ; ನಾನೇ ಮೊಗೆದು ಬರಿದಾಗಿಸಿದ್ದು ಎಂದು ಬೀಗಿತು ಬಲೆ!   ೩ ಸಾಗರವನ್ನು ಸೇರಬೇಕೆಂಬುದು ನದಿಯ ಕಾತುರ; ನೀರಿನಲ್ಲಿ ನಿಂತು ಪರಲೋಕಕ್ಕೆ ತರ್ಪಣ ಮುಟ್ಟಿಸಲು ಮನುಷ್ಯನ ಆತುರ!   ೪ ನದಿ ನಾಡಿನ ಪ್ರವಾದಿ, ಸಾಗರ ಅದರ ಸಮಾಧಿ! ೫ ಜೀವ ಜಲದ ನದಿಯೊಳಗೂ ಜೀವಗಳನ್ನು ಚಪ್ಪರಿಸುವ ಸುಳಿ […]

ಕವನಗಳು

ಕವನಗಳು

ನೋವು-ನಲಿವಿನ ಪುಟಗಳು ಅವಳವಳೆಂದು ನರಳುತಿರಬೇಡ ಕನಸಿಗವಳಿರೆ ಮಾತ್ರ ಭಾವ ಬಂದಿಳಿವುದೇ? ಮನಸಿನೊಳಗಿಣುಕು, ಸಪ್ತ ಲೋಕಕೂ ಮೀರಿ ಸಾಹಿತ್ಯ ಸಂಗ್ರಹವಿದೆ ಭಾವ ಖಂಡೋಲವಿದೆ ಹುಟ್ಟು-ಸಾವಿನ ನಡುವ ದಶಬಲದ ದಾಗೀನು, ಮಿಡಿವ ಹೃದಯದಲಿದೆ ಧರ್ಮ ಕರ್ಮದಲಿದೆ ನೆಲ-ಮುಗಿಲ ಆಲಯವು ಅಗಣಿತಗುಣದಂಬುಧಿಯ ಅಲವಲಿಕೆಯಂಗಳಕೆ ಸುರುವಿ ಸೆಳವಿಕ್ಕಿದೆ ರವಿಯ ರಂಗಿನ ಬಾನು ದಿನಕೆರಡು ಕ್ಷಣಮಾತ್ರ…. ಅಂಶುಧರ ಹೊಳಪಿನಲಿ, ಕಣಕಣದ ಸ್ಪಂದನವಿದೆ ಶರಧಿಯಾಳದೊಳಿಳಿದು ಆಳವರಿಯದ ಅವಕೆ, ಕೆರೆಯೊಡಲಿನಂಬಲಿಗೆ ಹಸಿವು ನೀಗುವುದೇ? ಸಂಗೀತ ಸುಧೆಯೊಳಗೆ ಒಂದೊಂದು ಸ್ವರವಿಲ್ಲ ಶ್ರುತಿ ಲಯ ಸಮರಸದ ನವರಸ ಸಾರಥ್ಯವಿದೆ ಅಕ್ಷೀಣ […]

ಕವನಗಳು

ಕವನಗಳು

ಒಂಟಿ ಮ ನಾನು ಒಬ್ಬಂಟಿ ಮರ ಒಂದಿಷ್ಟು ಪ್ರೀತಿಯನು ಹನಿಸುವವರಿಲ್ಲ ಚಿಗುರು ಚಿಮ್ಮಲಿ ಎಂದು ಹರಸುವವರಿಲ್ಲ ಅಂತರಾಳದ ನುಡಿಗೆ ಕಿವಿಗೊಡುವ ಕೆಳೆ ಇಲ್ಲ ಎಲ್ಲ ಕಾಟಾಚಾರ, ಬರಿಯ ವ್ಯವಹಾರ ತೋರುಗಾಣಿಕೆ, ನಟನೆ, ಶುದ್ಧ ವ್ಯಾಪಾರ.   ಹಿಂದೊಂದು ಕಾಲದಲಿ ಏಸೊಂದು ಸಮೃದ್ಧಿ ಕೊಂಬೆಕೊಂಬೆಗಳಲ್ಲಿ ಹಣ್ಣುಗಳು ಮಾಗಿ ಬಂದ ಅತಿಥಿಗಳೆಲ್ಲ ತಿಂದುಂಡು ತೇಗಿ ತಳ ಊರಿ ತಂತಮ್ಮ ಸಂಸಾರ ನಡೆಸಿದರು ಮೊಟ್ಟೆ ಮರಿಯಾದಾಗ ಎಷ್ಟೊಂದು ಸಂಭ್ರಮವೊ ಹೊಸ ಅಪ್ಪ, ಅಮ್ಮನಿಗೆ ಮೈಯೆಲ್ಲ ನವಿರು ನನ್ನೊಳಗು ಯಾವುದೋ ಸಾರ್ಥಕತೆ, ಬೆರಗು […]

ಕವನಗಳು

ಕವನಗಳು

ಮೂಲವ್ಯಾಧಿ `ಬಾಳು ನಶ್ವರ, ಕೀರ್ತಿ ಅಮರ…..’ ಇತ್ಯಾದಿ, ಇತ್ಯಾದಿ ನುಡಿಮುತ್ತುಗಳ ಕೇಳಿ, ಓದಿ, ಏನಾದರೂ ಸಾಧಿಸಲೇಬೇಕೆಂಬ ನಿರ್ಧಾರ ಮೂಡಿ, ಏನು ಮಾಡುವುದೆಂದು ತೋಚದೆ ಒದ್ದಾಡಿ, ಚಿಂತಿಸುತ್ತ ಕೂತ; ಏನೇನೂ ಮಾಡದೆ ಕೂತಲ್ಲೆ ಕೂತ. ಹೀಗಾಗಿ, ಈಗೀಗ ವಿಪರೀತ ತಲೆ ಸಿಡಿತ; ನರ ಬಿಗಿತ; ವಾತ, ಪಿತ್ಥ, ನಾತ. ಡಾಕ್ಟರರು ಹೇಳಿದರು- ಇದು ಮೂಲವ್ಯಾಧಿ. ಮುಂದೆ ಸಾಗಲೇ ಇಲ್ಲ ಸಾಧನೆಯ ಹಾದಿ! – ಎಚ್. ಡುಂಡಿರಾಜ್ ಲೇಖಕರು ಪ್ರಸಿದ್ಧ ಕವಿಗಳು ಹಾಗೂ ಕಾರ್ಪೊರೇಶನ್ ಬ್ಯಾಂಕಿನಲ್ಲಿ ಹಿರಿಯ ಪ್ರಬಂಧಕರು ಇಮೇಲ್: […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ