ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

ದೀಪ್ತಿ

ಅತಸ್ಕರಗ್ರಾಹ್ಯಮರಾಜಕವಶಂವದಂ |

ಅದಾಯಾದವಿಭಾಗಾರ್ಹಂ ಧನಮಾರ್ಜಯ ಸುಸ್ಥಿರಮ್ ||

“ಕಳ್ಳರು ಕದ್ದುಕೊಂಡುಹೋಗಲಾಗದ, ರಾಜಭಟರು ವಶಪಡಿಸಿಕೊಳ್ಳಲಾಗದ, ದಾಯಾದಿಗಳು ಪಾಲು ಕೇಳಲಾಗದ ಸುಸ್ಥಿರವಾದ ಶ್ರೇಷ್ಠ ಧನವನ್ನು ಸಂಪಾದಿಸು.”

ವ್ಯಾವಹಾರಿಕ ಜಗತ್ತಿನಲ್ಲಿ ವ್ಯಕ್ತಿಯು ಗಳಿಸಬಹುದಾದ ಧನವೆಲ್ಲ ವ್ಯಯವಾಗುತ್ತದೆ ಇಲ್ಲವೆ ಬೇರೆಯವರ ಕೈ ಸೇರುತ್ತದೆ. ಆದರೆ ಪಾರಮಾರ್ಥಿಕ ಸಾಧನೆಯ ಮೂಲಕ ಸಂಪಾದಿಸಿಕೊಂಡ ನೆಮ್ಮದಿ, ಪ್ರಶಾಂತಿ, ಭಗವದನುಗ್ರಹ – ಇವನ್ನು ಯಾರೂ ನಮ್ಮಿಂದ ಕಸಿದುಕೊಳ್ಳಲಾರರು. ಆದ್ದರಿಂದ ವಿವೇಕಿಯ ಲಕ್ಷ್ಯವು ಅಂತಹ ಸ್ಥಿರವಾದ ಐಶ್ವರ್ಯದ ಗಳಿಕೆಯ ಕಡೆಗೆ ಇರಬೇಕು.

ಅನುಪಮ ಭಗವದ್ಭಕ್ತರಾದ ಸಂತ ತುಕಾರಾಮರ ಬಾಹ್ಯ ಬದುಕು ತೀರಾ ಬಡತನದ್ದಿತ್ತು. ಆದರೆ ಸದಾ ದೈವಸಾನ್ನಿಧ್ಯದಲ್ಲಿದ್ದ ಅವರು ಲೌಕಿಕ ಬಡತನದಿಂದ ಎಂದೂ ವಿಚಲಿತರಾದವರಲ್ಲ. ಒಮ್ಮೆ ಅವರ ಸ್ಥಿತಿಯ ಬಗೆಗೆ ಕೇಳಿ ಮನನೊಂದ ಆ ಊರಿನ ರಾಜನು ಅವರ ಬದುಕಿಗೆ ನೆರವಾಗಲೆಂದು ಧನಕನಕರಾಶಿಯನ್ನು ಭಟರ ಮೂಲಕ ಸಂತರಿಗೆ ಕಳಿಸಿದ. ಸಂತರು “ಇವನ್ನೆಲ್ಲ ಕೂಡಲೆ ದಯವಿಟ್ಟು ಹಿಂದಕ್ಕೆ ತೆಗೆದುಕೊಂಡು ಹೋಗಿ ಬಡವರಿಗೆ ವಿತರಣೆ ಮಾಡಿರಿ” ಎಂದರು. ರಾಜಭಟರು “ಆದರೆ ತಾವು ತೀರಾ ಬಡತನದಲ್ಲಿದ್ದು ಬವಣೆ ಪಡುತ್ತಿದ್ದೀರಲ್ಲ? ಪ್ರಭುಗಳು ಅವರಾಗಿ ಕಳುಹಿಸಿರುವುದನ್ನು ತಾವು ಸ್ವೀಕರಿಸಬಹುದಲ್ಲ?” ಎಂದರು. ಅದಕ್ಕೆ ಸಂತರು ಉತ್ತರಿಸಿದರು: “ನಾವು ಬಡವರೆಂದು ನೀವೇಕೆ ಭಾವಿಸುತ್ತಿದ್ದೀರಿ? ನಿಮ್ಮ ಪ್ರಭುಗಳಿಗೂ ಯಾರ ಕೃಪೆಯಿಂದ ಸಂಪತ್ತು ದೊರೆಯುತ್ತದೆಯೋ ಆ ಮಹಾಮಹಿಮನು ನಮ್ಮ ಯೋಗಕ್ಷೇಮವನ್ನು ವಹಿಸಿಕೊಂಡು ನಮ್ಮನ್ನು ಪಾಲಿಸುತ್ತಿದ್ದಾನೆ. ಹೀಗಿರುವಾಗ ನಾವು ಬಡವರು ಹೇಗಾದೇವು? ನೀವು ತಂದಿರುವ ಸಂಪತ್ತನ್ನು ನಾವೇಕೆ ಸ್ವೀಕರಿಸಬೇಕು? ಭಗವಂತನ ಆಸರೆಗಿಂತ ದೊಡ್ಡ ಐಶ್ವರ್ಯ ಯಾವುದಿದೆ? ಆದ್ದರಿಂದ ನಮಗೆ ಹೋಲಿಸಬಹುದಾದ ಶ್ರೀಮಂತರು ಅನ್ಯರಿಲ್ಲ.”

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ