ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಮೇ2023 > ದೀಪ್ತಿ

ದೀಪ್ತಿ

ತೃಣಾನಿ ನೋನ್ಮೂಲಯತಿ ಪ್ರಭಂಜನೋ
ಮೃದೂನಿ ನೀಚೈಃ ಪ್ರಣತಾನಿ ಸರ್ವಶಃ |
ಸಮಚ್ಛ್ರಿತಾನೇನ ತನೂನ್ ಪ್ರಬಾಧತೇ
ಮಹಾನ್ ಮಹತ್ಯೇವ ಕರೋತಿ ವಿಕ್ರಮಮ್ ||

– ಹಿತೋಪದೇಶ


“ಕೆಳಕ್ಕೆ ಬಗ್ಗಿ ತಗ್ಗಿರುವ ಹುಲ್ಲನ್ನು ಬಿರುಗಾಳಿ ಉತ್ಪಾಟನ ಮಾಡುವುದಿಲ್ಲ. ಬಿರುಗಾಳಿಯು ನಾಶಪಡಿಸಲೆಳಸುವುದು ಎತ್ತರದ ಮರಗಳನ್ನೇ. ಪ್ರಬಲರು ಪರಾಕ್ರಮ ಮೆರೆಯುವುದು ಪ್ರಬಲರಿಗೆದುರಾಗಿಯೇ.”
ಬೇರೆಯವರ ಗಮನಸೆಳೆಯದೆ ಸೌಮ್ಯವಾಗಿರುವುದರಲ್ಲಿ ಗುಣವಿದೆಯೆಂದು ಮೇಲಣ ಪದ್ಯದಲ್ಲಿ ಧ್ವನಿಸಲಾಗಿದೆ. ಗಾತ್ರ ಅಥವಾ ಬೃಹತ್ತ್ವದಿಂದ ಎಲ್ಲ ಸಂದರ್ಭಗಳಲ್ಲಿಯೂ ಅನುಕೂಲವಾಗಲಾರದು.
ಚೀಣೀ ತಾತ್ತ್ವಿಕ ಕನ್‍ಫ್ಯೂಶಿಯಸ್ ಉತ್ಕ್ರಮಣಾವಸ್ಥೆಯಲ್ಲಿದ್ದಾಗ ಅವನ ಅನುಯಾಯಿಗಳು ಆ ಮಹನೀಯನ ಅಂತಿಮ ಸಂದೇಶ ಬೇಕೆಂದು ಆಗ್ರಹಿಸಿದರು. ಕನ್‍ಫ್ಯೂಶಿಯಸ್ ತನ್ನ ಬಾಯನ್ನು ಅಗಲವಾಗಿ ತೆರೆದು ಅದನ್ನು ಗಮನವಿರಿಸಿ ನೋಡಲು ಸೂಚಿಸಿದ.
“ನನ್ನ ಬಾಯಲ್ಲಿ ನಿಮಗೆ ಏನು ಕಾಣುತ್ತಿದೆ?”
“ತಮ್ಮ ನಾಲಗೆ ಮಾತ್ರ ಕಾಣುತ್ತಿದೆ, ಹಲ್ಲುಗಳಿಲ್ಲ.”
“ದೇಹದಲ್ಲಿ ಮೊದಲು ಹುಟ್ಟಿಕೊಂಡಿದ್ದುದು ಯಾವುದು?”
“ನಾಲಗೆ ತಾನೆ! ಹಲ್ಲು ಆಮೇಲೆ ಬಂದದ್ದು.”
“ನಾಲಗೆ ಹಲ್ಲಿಗಿಂತ ಹೆಚ್ಚು ಕಾಲ ಬಾಳುವುದು ಏಕೆಂದು ಯೋಚಿಸಿರುವಿರಾ?”
ಶಿಷ್ಯರಿಗೆ ಉತ್ತರಿಸಲಾಗಲಿಲ್ಲ.
ಕನ್‍ಫ್ಯೂಶಿಯಸ್ ಮುಂದುವರಿಸಿದ:
“ನಾಲಗೆಯು ಸೌಮ್ಯವಾಗಿಯೂ ಮೃದುವಾಗಿಯೂ ಇರುವುದರಿಂದ ಬಹುಕಾಲ ಉಳಿದಿದೆ. ಹಲ್ಲುಗಳು ಗಡಸಾಗಿ ಕರ್ಕಶವಾಗಿರುವುದರಿಂದ ಬೇಗ ನಶಿಸಿವೆ. ಇದೇ ನನ್ನ ಅಂತಿಮ ಸಂದೇಶವೆಂದು ತಿಳಿಯಿರಿ!”

“ನಾಲಗೆ ಹಲ್ಲಿಗಿಂತ ಹೆಚ್ಚು ಕಾಲ ಬಾಳುವುದು ಏಕೆಂದು ಯೋಚಿಸಿರುವಿರಾ?”

ಶಿಷ್ಯರಿಗೆ ಉತ್ತರಿಸಲಾಗಲಿಲ್ಲ.

ಕನ್‍ಫ್ಯೂಶಿಯಸ್ ಮುಂದುವರಿಸಿದ:

“ನಾಲಗೆಯು ಸೌಮ್ಯವಾಗಿಯೂ ಮೃದುವಾಗಿಯೂ ಇರುವುದರಿಂದ ಬಹುಕಾಲ ಉಳಿದಿದೆ. ಹಲ್ಲುಗಳು ಗಡಸಾಗಿ ಕರ್ಕಶವಾಗಿರುವುದರಿಂದ ಬೇಗ ನಶಿಸಿವೆ. ಇದೇ ನನ್ನ ಅಂತಿಮ ಸಂದೇಶವೆಂದು ತಿಳಿಯಿರಿ!”

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ