ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

ದೀಪ್ತಿ

ಸತ್ಯಧರ್ಮಾರ್ಯವೃತ್ತೇಷು ಶೌಚೇ ಚೈವಾರಮೇತ್ಸದಾ |

ಶಿಷ್ಯಾಂಶ್ಚ ಶಿಷ್ಯಾದ್ಧರ್ಮೇಣ ವಾಗ್ಬಾಹೂದರಸಂಯತಃ ||

                                – ಮನುಸ್ಮೃತಿ

“ಸತ್ಯಪಥದಲ್ಲಿ, ಧರ್ಮಾಚರಣೆಯಲ್ಲಿ, ಶುಚಿಯಾಗಿರುವುದರಲ್ಲಿಯೇ ಸದಾ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಅನುಚರರನ್ನೂ ಧರ್ಮಮಾರ್ಗದಲ್ಲಿಯೆ ನಡೆಯುವಂತೆ ಪ್ರೋತ್ಸಾಹಿಸಬೇಕು. ಮಾತು, ತೋಳು, ಹೊಟ್ಟೆ – ಇವನ್ನು ಹತೋಟಿಯಲ್ಲಿರಿಸಿಕೊಂಡಿರಬೇಕು.”

ಹೊರಮೈಯನ್ನು ಸಾಬೂನಿನಿಂದಲೋ ಅಂಥ ಅನ್ಯ ಪರಿಕರಗಳಿಂದಲೋ ತಿಕ್ಕಿ ಶುಚಿಗೊಳಿಸಿಕೊಳ್ಳುತ್ತೇವೆ. ಅದರಂತೆ ನಮ್ಮ ಒಳಗಿನ ಅಂಗಗಳ ಪಾರಿಶುದ್ಧ್ಯವನ್ನೂ ಕಾಪಾಡಿಕೊಳ್ಳಬೇಕಲ್ಲವೆ? ಹೊರಗಿನ ಮೈಗೆ ಕೊಳೆ-ಕಸರು ತಗಲುತ್ತಿರುವಂತೆ ಒಳಗಿನ ಅಂಗಗಳಾದ ಮನಸ್ಸು-ಬುದ್ಧಿಗಳಿಗೂ ಮಾಲಿನ್ಯ ಮೆತ್ತಿಕೊಳ್ಳುವ ಅವಕಾಶಗಳಿಗೆ ಕೊರತೆಯಿಲ್ಲ. ಇವಾದರೋ ಸೂಕ್ಷ್ಮರೂಪದವು. ಯಾರನ್ನೋ ನಿಂದನೆ ಮಾಡುವುದು, ಅಹಿತಕರವಾಗಿ ವರ್ತಿಸುವುದು, ಒರಟು ಮಾತನ್ನಾಡುವುದು – ಇಂಥ ಒಂದೊಂದು ನಡೆಯೂ ಅಂತರಂಗವನ್ನು ಮಲಿನಗೊಳಿಸುತ್ತದೆ. ಎಷ್ಟೊ ಸಂದರ್ಭಗಳಲ್ಲಿ ಇದೆಲ್ಲ ವಿಕೃತಿ ಎಂಬ ಪರಿವೆಯೇ ನಮಗಿರುವುದಿಲ್ಲ; ಹಲವೊಮ್ಮೆ ಇಂಥ ವರ್ತನೆಯ ಬಗೆಗೆ ಹೆಮ್ಮೆಪಡುವುದೂ ಉಂಟು. ಅದನ್ನು ರಾಜಸಪ್ರವೃತ್ತಿಯೆಂದಷ್ಟೆ ಕರೆಯಬಹುದೇನೊ. ಇಂಥ ನಡವಳಿಯಿಂದ ಸಾತ್ತ್ವಿಕ ಸ್ವಭಾವದವರು ದೂರವಿರುತ್ತಾರೆ.

ಒಮ್ಮೆ ಪಂಡಿತರೊಬ್ಬರು ಮದನಮೋಹನ ಮಾಳವೀಯರಲ್ಲಿಗೆ ಬಂದು ಸವಾಲೊಡ್ಡಿದರು: “ನೀವು ನನ್ನ ಸ್ತಿಮಿತತೆಯನ್ನು ಪರೀಕ್ಷೆ ಮಾಡಿರಿ. ನೀವು ನೂರು ಬೈಗುಳ ಬೈದರೂ ನಾನು ವಿಚಲಿತನಾಗುವುದಿಲ್ಲ.” ಇದಕ್ಕೆ ಮಾಳವೀಯರು ಉತ್ತರಿಸಿದರು: “ಮಹಾಶಯರೆ, ನಿಮ್ಮ ಸಹನೆಯ ಪರೀಕ್ಷೆ ಆಗುವುದಕ್ಕೆ ಮೊದಲೇ ನನ್ನ ಬಾಯಿ ಮಲಿನವಾಗಿಬಿಟ್ಟಿರುತ್ತದಲ್ಲ! ಆ ಕೆಲಸವನ್ನು ನಾನೇಕೆ ಮಾಡಲಿ?”

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ