ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

ದೀಪ್ತಿ

ಶಾಂತಿಖಡ್ಗಃ ಕರೇ ಯಸ್ಯ ದುರ್ಜನಃ ಕಿಂ ಕರಿಷ್ಯತಿ |

ಅತೃಣೇ ಪತಿತೋ ವಹ್ನಿಃ ಸ್ವಯಮೇವೋಪಶಾಮ್ಯತಿ ||

– ಮಹಾಭಾರತ, ಉದ್ಯೋಗಪರ್ವ

“ಶಾಂತಿ ಎಂಬ ಖಡ್ಗಾಯುಧ ಯಾರ ಕೈಯಲ್ಲಿ ಇದೆಯೋ ಅಂತಹವನಿಗೆ ದುಷ್ಟನೂ ಕ್ರೂರಿಯೂ ಏನು ಹಾನಿ ಮಾಡಿಯಾನು? ಹುಲ್ಲಿನ ಮೇಲೆ ಬೀಳದಿರುವ ಬೆಂಕಿ ತಾನಾಗಿ ಶಾಂತವಾಗಿಬಿಡುತ್ತದೆ.”

ಹುಲ್ಲು ಗ್ರಾಸವಾಗಿ ದೊರೆತರೆ ಮಾತ್ರ ಬೆಂಕಿಯ ಪ್ರತಾಪಕ್ಕೆ ಅವಕಾಶವಾಗುತ್ತದೆ.

ರವೀಂದ್ರನಾಥ ಠಾಕೂರರು ಯಾವುದೊ ಗಂಭೀರ ಬರಹದಲ್ಲಿ ತಲ್ಲೀನರಾಗಿದ್ದರು. ಸಮಯ ನಡುರಾತ್ರಿ ದಾಟಿತ್ತು. ಏನನ್ನಾದರೂ ದೋಚಿಕೊಂಡು ಹೋಗಲು ಕಳ್ಳನೊಬ್ಬ ಕತ್ತಿ ಝಳಪಿಸುತ್ತ ಒಳಹೊಕ್ಕು ಅಬ್ಬರಿಸಿದ. ಠಾಕೂರರು ವಿಚಲಿತರಾಗದೆ ಹೇಳಿದರು: “ಮಹಾನುಭಾವ! ನಾನೀಗ ಮುಖ್ಯವಾದ ಬರವಣಿಗೆಯಲ್ಲಿ ತೊಡಗಿದ್ದೇನೆ. ಇದಕ್ಕೆ ಇನ್ನೊಂದು ಗಂಟೆಯಷ್ಟು ಕಾಲ ಹಿಡಿಯಬಹುದು. ಆಗ ನೀನು ಬಂದಲ್ಲಿ ನನ್ನನ್ನು ಕೊಲ್ಲಲು ಅಭ್ಯಂತರವಿರದು.” ಕಳ್ಳನಿಗೆ ಏನೆನ್ನಿಸಿತೊ – ಆಚೆ ಹೋಗಿ ಠಳಾಯಿಸುತ್ತಿದ್ದ. ಬರಹದಲ್ಲಿ ಠಾಕೂರರ ಮಗ್ನತೆ ಕಂಡು ಅದೇಕೋ ಮನಸ್ಸು ಬದಲಾಯಿಸಿ ಹೊರಟುಹೋದ. ನಾಲ್ಕೈದು ದಿವಸವಾದ ಮೇಲೆ ಠಾಕೂರರು ವಾಯುಸಂಚಾರಕ್ಕೆ ಹೋದಾಗ ಅದೇ ವ್ಯಕ್ತಿ ಎದುರಾದ. ಠಾಕೂರರು ಹೇಳಿದರು: “ಆ ದಿನ ನನ್ನ ಕೆಲಸ ಮುಗಿದೊಡನೆ ನಿನಗಾಗಿ ಹುಡುಕಿದೆ. ನೀನು ಕಾಣಲಿಲ್ಲ. ನನ್ನ ವಚನಭಂಗವಾದುದಕ್ಕೆ ನನಗೆ ಬೇಸರವಾಯಿತು.” ಅವರ ಶಾಂತಚಿತ್ತ ನೋಡಿ ಕಳ್ಳ ಕೇಳಿದ: “ಆ ದಿನ ನಾನು ಕತ್ತಿ ಹಿಡಿದು ಬಂದಾಗ ನಿಮಗೆ ಭಯವಾಗಲಿಲ್ಲವೆ?” ಠಾಕೂರರು ಮುಗುಳ್ನಕ್ಕು “ಬದುಕಿಗೂ ಸಾವಿಗೂ ಒಂದು ಗೆರೆಯಷ್ಟು ವ್ಯತ್ಯಾಸ, ಅಷ್ಟೇ ಅಲ್ಲವೆ? ಇದರಲ್ಲಿ ಹೆದರಬೇಕಾದ ವಿಷಯ ಏನಿದೆ? ಬದುಕಿರುವವರೆಗೆ ಒಂದೊಂದು ಕ್ಷಣವನ್ನೂ ಸಾರ್ಥಕವಾಗಿ ಕಳೆಯಬೇಕೆಂದು ನಾನು ನಿಶ್ಚಯಿಸಿಕೊಂಡಿರುವುದರಿಂದ ನಿಶ್ಚಿಂತನಾಗಿದ್ದೇನೆ.” ಈ ಮಾತನ್ನು ಕೇಳಿ ಕಳ್ಳನು ಪಶ್ಚಾತ್ತಾಪಪಟ್ಟು “ನಾನು ಇನ್ನು ಮೇಲೆ ಕೆಟ್ಟ ಕೆಲಸ ಮಾಡುವುದಿಲ್ಲ” ಎಂದು ಹೇಳಿ ಠಾಕೂರರ ಕಾಲಿಗೆರಗಿ ಹೊರಟುಹೋದ.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ