ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಜುಲೈ 2023 > ಆತ್ಮನಿರ್ಭರತೆ

ಆತ್ಮನಿರ್ಭರತೆ

ಈಗ್ಗೆ ಮೂರು ವರ್ಷ ಹಿಂದೆ (ಮೇ ೨೦೨೦) ಮೋದಿ ಸರ್ಕಾರ ‘ಆತ್ಮನಿರ್ಭರ ಭಾರತ’ ಗುರಿಯನ್ನು ಘೋಷಿಸಿದಾಗ – ಅದೂ ಕೋವಿಡ್ ೧೯ ಸಾಂಕ್ರಾಮಿಕದ ವಿಘಾತದ ಹಿಂದುಗೂಡಿ – ಶಾಶ್ವತ ಸಿನಿಕತನಕ್ಕೆ ಹೆಸರಾದ ‘ವಿರೋಧಕ್ಕಾಗಿ ವಿರೋಧ’ವನ್ನು ಸ್ವಾಭಾವಿಕವಾಗಿಸಿಕೊಂಡ ಪಡೆಗಳಂತೂ ಎಂದಿನಂತೆ ಅದನ್ನು ಘೋಷಣೆ ಮಾತ್ರವೆಂದು ತಳ್ಳಿಹಾಕಿದುದು ಅವುಗಳ ಜಾಯಮಾನಕ್ಕೆ ಅನುಗುಣವಾಗಿತ್ತು. ಅನ್ಯ ವಲಯಗಳಲ್ಲಿಯೂ ಆ ಲಕ್ಷö್ಯದ ಬಗೆಗೆ ಅತ್ಯುತ್ಸಾಹವೇನೂ ತೋರಿರಲಿಲ್ಲ. ಅಲ್ಲಿಂದೀಚೆಗೂ ಪ್ರಮುಖ ವಿರೋಧಪಕ್ಷವು ಆರೂಢ ಸರ್ಕಾರದ ಪ್ರತಿಯೊಂದು ಉಪಕ್ರಮವನ್ನೂ ಟೀಕಿಸುತ್ತ ಬಂದಿರುವ ರೀತಿಯನ್ನು ನೋಡಿದರೆ ಅದರ ದೃಷ್ಟಿಯಲ್ಲಿ ಭಾರತ ಒಂದು ‘ಬನಾನಾ ರಿಪಬ್ಲಿಕ್’ ಎನ್ನಬೇಕಾದೀತು. ಆದರೆ ‘ವಾಸ್ತವ’ಗಳೆದುರಿಗೆ ‘ವಾದ’ಗಳು ಮುಗ್ಗರಿಸಲೇಬೇಕಾಗುತ್ತದಷ್ಟೆ. ಒಂದೆರಡು ಸಾಧನೆಗಳನ್ನೇ ಗಮನಿಸುವುದಾದಲ್ಲಿ: ಭಾರತದ ರಫ್ತು ೭೫೦ ಶತಕೋಟಿ ಡಾಲರ್ ತಲಪಿ ದಾಖಲೆ ನಿರ್ಮಿಸಿದೆ. ರಕ್ಷಣಾ ಸಾಧನಗಳ ರಫ್ತಿನ ಪ್ರಮಾಣ ರೂ. ೧೫,೯೨೦ ಕೋಟಿಯಷ್ಟಾಗಿರುವುದು ಇನ್ನೊಂದು ದಾಖಲೆಯಾಗಿದೆ. ಉಕ್ಕು ಉದ್ಯಮದಲ್ಲಿ ಭಾರತ ವಿಶ್ವದಲ್ಲಿಯೆ ಎರಡನೇ ಸ್ಥಾನಕ್ಕೆ ಏರಿದೆ. ಪಟ್ಟಿಯನ್ನು ಎಷ್ಟು ಬೇಕಾದರೂ ಬೆಳೆಸಲು ಅವಕಾಶವಿದೆ; ಅದರ ಆವಶ್ಯಕತೆ ಇಲ್ಲ. ರಸ್ತೆ ಸಂಪರ್ಕ, ರೈಲು ಸಂಪರ್ಕ, ಕೃಷಿಗೆ ಪೋಷಕವಾದ ಧೋರಣೆಗಳು, ಗ್ರಾಮಗಳಿಗೆ ನೀರಿನ ಹಾಗೂ ವಿದ್ಯುತ್ತಿನ ಒದಗಣೆ ಮೊದಲಾದ ನಿತ್ಯಜೀವನ ಸೌಕರ್ಯಗಳ ಉನ್ನತೀಕರಣ _ ಎಲ್ಲವೂ ಎದ್ದುಕಾಣುವಂತಿವೆ. ಆತ್ಮನಿರ್ಭರತೆಯೆಂದರೆ ಮತ್ತಿನ್ನೇನು? ಸಮಸ್ಯೆಗಳೇ ಇಲ್ಲವೆಂದಲ್ಲ. ಆದರೆ ಸಾಧನೆಯನ್ನು ಅಲಕ್ಷಿಸದಿರೋಣ.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ