ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

ದೀಪ್ತಿ

ನಮೋಸ್ತು ಕೋಪದೇವಾಯ ಸ್ವಾಶ್ರಯಜ್ವಾಲಿನೇ ಭೃಶಮ್ |

ಕೋಪ್ಯಸ್ತು ಮಮ ವೈರಾಗ್ಯದಾಯಿನೇ ಲೋಕಬೋಧಿನೇ ||

“ತನಗೆ ಆಶ್ರಯ ನೀಡಿದವನನ್ನೇ ಸುಟ್ಟುಹಾಕುವ ಕೋಪವೆಂಬ ದೇವತೆಗೆ ನಮಸ್ಕಾರ. ಏಕೆಂದರೆ ಕೋಪವು ನನಗೆ ವೈರಾಗ್ಯವನ್ನೂ ವಿವೇಕವನ್ನೂ ಕಲಿಸುತ್ತದೆ.”

ಕೇಡು ಮಾಡಿದವರಿಗೆ ಪ್ರತೀಕಾರ ಮಾಡಬೇಕೆನಿಸುವುದು ಪ್ರಕೃತಿಸಹಜ. ಆದರೆ ಇಂತಹ ದ್ವೇಷ-ಸೇಡುಗಳ ಮನೋವೃತ್ತಿಯನ್ನು ಮೀರುವುದು ಆತ್ಮಸಂಸ್ಕಾರಕಾರಿ.

ಪ್ರಸಿದ್ಧ ಕ್ರಾಂತಿಕಾರಿ ರಾಮಪ್ರಸಾದ್ ಬಿಸ್ಮಿಲ್‌ನನ್ನು ಕೆಲವು ದುಷ್ಟರು ಕೊಲ್ಲಲು ಯತ್ನಿಸಿದರು. ಅದೃಷ್ಟವಶಾತ್ ಅದು ಫಲಿಸಲಿಲ್ಲ. ಆದರೆ ಅದನ್ನು ರಾಮಪ್ರಸಾದ್ ಮರೆಯಲಿಲ್ಲ; ಹೇಗಾದರೂ ಅದಕ್ಕೆ ಸೇಡನ್ನು ತೀರಿಸಬೇಕೆಂದು ದೃಢಚಿತ್ತನಾದ, ಅದನ್ನು ಕುರಿತೇ ಚಿಂತಿಸತೊಡಗಿದ. ಇದರಿಂದ ಅವನು ಸ್ವಾಸ್ಥ್ಯ ಕೆಟ್ಟು ಜ್ವರಗ್ರಸ್ತನಾದ. ಚಿಕಿತ್ಸೆಗಳಾವುವೂ ಫಲಕಾರಿಯಾಗಲಿಲ್ಲ. ಕೆಲ ದಿನ ಗಮನಿಸಿದ ಮೇಲೆ ಅವನ ತಾಯಿಗೆ ಮಗನ ಅಸ್ವಸ್ಥತೆಯ ಮೂಲ ಅರಿವಿಗೆ ಬಂದಿತು. ಆಕೆ ಮಗನಿಗೆ ಹೇಳಿದಳು: “ಮನಸ್ಸಿನಲ್ಲಿ ಸದಾ ದ್ವೇಷದ ಭಾವನೆಯನ್ನು ತುಂಬಿಕೊಂಡಿರುವುದು ಒಳ್ಳೆಯದಲ್ಲ. ಅದನ್ನು ಬಿಟ್ಟುಬಿಡು. ಹಾಗೆಂದು ನನಗೆ ಮಾತು ಕೊಡು. ಇದನ್ನು ನಿನ್ನ ಮಾತೃಋಣದ ಸಲ್ಲಿಕೆಯೆಂದು ಭಾವಿಸಿಕೋ.” ತಾಯಿಯ ಮಾತೆಂದರೆ ಅದನ್ನು ಮೀರಲಾದೀತೆ? ರಾಮಪ್ರಸಾದ್ ತಾಯಿಯ ಅನುಜ್ಞೆಯನ್ನು ಪಾಲಿಸಿದ – ಮೊದಮೊದಲು ಕಷ್ಟವೆನಿಸಿದರೂ. ಪವಾಡವೆಂಬAತೆ ಅಲ್ಪಕಾಲದಲ್ಲಿ ಅವನ ಕಾಯಿಲೆ ಮರೆಯಾಗಿ ಅವನು ಗುಣಮುಖನಾದ!

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ