ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಆಗಸ್ಟ್ 2015 > ಮೋಹಪಾಶದಿಂದ ಮುಕ್ತಿ ಹೇಗೆ?

3 Responses to “ಮೋಹಪಾಶದಿಂದ ಮುಕ್ತಿ ಹೇಗೆ?”

  1. rathnamsjcc

    ನಾವು ನಮ್ಮನ್ನು ಕುರಿತು ವಿಚಾರ ಮಾಡುವುದಿಲ್ಲ. ನಿಜವಾಗಿ ಅನಾದಿಯಾದ ಅಜ್ಞಾನವು ನಮ್ಮನ್ನು ದುಃಖೀಗಳನ್ನಾಗಿ ಮಾಡಿದೆ. ನಾನು ಎಂದರೆ ಆತ್ಮ. ನನಗಿಂತ ಬೇರೆಯಾದುದು ಅನಾತ್ಮ. ಆತ್ಮನಲ್ಲಿ ಆರೋಪಿತವಾದ ಅನಾತ್ಮ ವಿಷಯಗಳನ್ನು ತೆಗೆದು ಹಾಕಿದರೆ ಆಗ ಪರಿಶುದ್ಧವಾದ ಕೇವಲ ಆತ್ಮತತ್ವವು ಗೋಚರವಾಗುತ್ತದೆ. ಈ ಪರಿಶುದ್ಧವಾದ ಆತ್ಮವು ಎಲ್ಲಾ ಶರೀರಗಳಲ್ಲಿಯೂ ಒಂದೇ ಆಗಿದೆ. ಇದೇ ಬ್ರಹ್ಮ. ಇದು ಸರ್ವಜ್ಞ, ಸರ್ವಶಕ್ತ, ಇದಕ್ಕೆ ದೇಶ ಕಾಲಗಳ ಪರಿಧಿಯಿಲ್ಲ. ಇದು ಅನಂತ. ಮಾಯೆಯೆಂಬ ಆವರಣದಿಂದಾಗಿ ಈ ವಾಸ್ತವವನ್ನು ನಾವು ತಿಳಿದಿಲ್ಲ. ಮಾಯೆಯ ನಿಃಶೇಷವಾಗಿ ನಾಶವಾದಾಗ ಜೀವಿಗೆ ಯಾವ ಪ್ರಾಪಂಚಿಕ ದುಃಖಗಳೂ ಇರುವುದಿಲ್ಲ. ನಿದ್ದೆಯಿಂದ ಎಚ್ಚೆತ್ತವನಿಗೆ ಸ್ವಪ್ನಕಾಲವೆಲ್ಲಿ? ಅದು ಕೇವಲ ತನ್ನ ಸಚ್ಚಿದಾನಂದ ಸ್ವರೂಪದಲ್ಲಿರುವ ಪರಮೋಚ್ಚ ಸ್ಥಿತಿ! ಇಂಥಹ ಬ್ರಾಹ್ಮಿà ಸ್ಥಿತಿಯು ನಮ್ಮ ಜೀವನದ ಲಕ್ಷ್ಯವಾಗಬೇಕು. ನಮ್ಮ ಎಲ್ಲ ಕರ್ಮಾಚರಣೆಗಳು ಆಗ ಸಾರ್ಥಕ. ಇದು ಶಂಕರರ ಉಪದೇಶದ ಸಾರ.

    ಆತ್ಮತತ್ವವು ಅಣುವಿಗಿಂತ ಅಣುವಾಗಿಯೂ ,ಮಹತ್ತಿಗಿಂತ ಮಹತ್ತಾಗಿಯೂ ,ಪ್ರತಿ ಜೀವಿಯ ಕುರಹದಲ್ಲಿಯೂ ವಾಸಿಸುತ್ತಿದೆ .ಮನೋಬುದ್ಧೀಂದ್ರಿಯಗಳ ಕರುಣೆಯಿಂದ ಯಾರು ಸಂಕಲ್ಪ ವಿಕಲ್ಪಗಳಿಂದ ವಿಮುಕ್ತನಾಗುತ್ತಿದ್ದಾನೋ ಸ್ವರೂಪವನ್ನು ಸಾಕ್ಷಾತ್ಕರಿಸಿಕೊಂಡು ಜ್ಞಾನಿಯು ತನ್ನಲ್ಲಿ ತಾನು ಸ್ಥಿರನಾಗಿ ನಿಲುವುದೇ ಸಚ್ಚಿದಾನಂದ ಸ್ವರೂಪನಾದ
    ನಾನು ಯಾರು ಜಾಗದಲ್ಲಿಯೇ ಆತ್ಮ ವಿಚಾರವನ್ನು, ಶುದ್ಧ ಅರಿವೇ ನಾನು. ಈ ಅರಿವಿನ ಸ್ವರೂಪವೇ ಸಚ್ಚಿದಾನಂದ (ಸತ್, ಚಿತ್, ಆನಂದ). ನಾನು ನನ್ನನ್ನು ಅರಿತುಕೊಂಡಾಗ ನಾನು (ಪರಬ್ರಹ್ಮ) ನನ್ನೊಳಗಿತ್ತು.” ನಾನು ಯಾರು- ನಾನು ಯಾವ ಕಾರಣಕ್ಕಾಗಿ ಹುಟ್ಟಿದ್ದೇನೆ ಎಂಬುದು ಕೆಲವರಿಗೆ ಅರಿವಾಗುವುದರಲ್ಲಿ ಜೀವನವೇ ಮುಗಿದಿರುತ್ತದೆ. ಆದರೆ ನಾವು ಬದುಕಿರುವಾಗ ನಡೆಯುವ ಎಲ್ಲ ಘಟನೆಗಳು “ನಾನು’ವಿನಿಂದಲೇ ಪ್ರಾರಂಭವಾಗಿ “ನಾನು’ ವಿನಿಂದಲೇ ಮುಗಿಯುತ್ತವೆ. ಅಧ್ಯಾತ್ಮದಲ್ಲಿ “ನಾನು’ ಅಂದರೆ ಆತ್ಮ. ಆತ್ಮ ಅಂದರೆ ಬ್ರಹ್ಮ. “ನಾನು’ ಅಂದರೆ ಬ್ರಹ್ಮ. ಪರಮಾತ್ಮನನ್ನು ಅರಿತುಕೊಳ್ಳಬೇಕೆಂಬುದರ ಆಶಯ “ನನ್ನನ್ನು’ ಅರಿತುಕೊಳ್ಳುವುದೇ. ಮೋಕ್ಷ ಅಂದರೂ ಇದೇ. ಇದನ್ನೇ ಬ್ರಹ್ಮಜ್ಞಾನ ಎನ್ನುತ್ತಾರೆ. ವೇದಗಳು, ಉಪನಿಷತ್ತುಗಳು, ಮಹಾಕಾವ್ಯಗಳು, ವಿಜ್ಞಾನ, ಸಮಾಜಶಾಸ್ತ್ರ ಇತ್ಯಾದಿ ಪ್ರತಿಪಾದಿಸುವುದೂ ಇದನ್ನೇ.

    Reply
  2. rathnamsjcc

    ಮನುಷ್ಯನಲ್ಲಿ ನಾನು ಬ್ರಹ್ಮವಾಗಿದ್ದೇನೆ ” ” ನಿತ್ಯ ಶುದ್ಧನಾಗಿದ್ದೇನೆ” ಎನ್ನುವುದು, ಮಾತಿನಿಂದ ಹೇಳಿವುದು, ಮನಸ್ಸಿನಿಂದ ಧ್ಯಾನಿಸುವುದು ಯಾವುದೂ ಇಲ್ಲ. ಈ.ಜಗತ್ತೆಲ್ಲವೂ ಸಚ್ಚಿದಾನಂದ ಸ್ವರೂಪವಾದ ಬ್ರಹ್ಮದಿಂದ ವ್ಯಾಪ್ತವಾಗಿದೆ.ನಾನು, ನನಗಿಂತ ಬೇರೆಯಾದದ್ದು, ಆಕಾಶ, ಎಲ್ಲವೂ ಸಚ್ಚಿದಾನಂದವಾಗಿದೆ. ನೀನು ” ಎನ್ನುವುದು ಇರುವಾಗ ” ನಾನು ” ಎನ್ನುವುದು ಇರುತ್ತದೆ. ನೀನು ಎನ್ನುವುದು ಇಲ್ಲವಾದರೆ, ನಾನು ಎನ್ನುವುದೂ ಇಲ್ಲ. ” ಇದು ” ಎನ್ನುವುದು ” ಅದೇ ” (ಬ್ರಹ್ಮವೇ)ಆಗಿರುವಾಗ ” ಅದು ” ಎನ್ನುವುದು “ಇದೇ ” ಆಗಿರುತ್ತದೆ.
    ಆತ್ಮ ಸೂಕ್ಷ್ಮಾತಿ ಸೂಕ್ಷ್ಮ ಪ್ರಕಾಶ ಸ್ವರೂಪವೂ ಆದ ಆತ್ಮಚೈತನ್ಯಶಕ್ತಿ ಗುರು, ಸಾಕ್ಷಾತ್ ಪರಬ್ರಹ್ಮನೇ ನಿನ್ನ ಗುರು ಹೇದು ತಿಳುದು ಮುಕ್ತನಾಗು. ವಿಷಯ ವಾಸನೆಗಳಲ್ಲಿ ಸಂಬಂಧ ಇಲ್ಲದ್ದ ಗುರು ಸಿಕ್ಕುವದು ಸುಲಭ ಅಲ್ಲದ್ದರಿಂದ

    ಅಧ್ಯಾತ್ಮ’ ಎಂದರೆ ಆತ್ಮವನ್ನು ಕುರಿತಾದುದು. ಆತ್ಮ ಎಂದರೆ ಮೂಲಚೈತನ್ಯ. ಸೃಷ್ಟಿಯ ಎಲ್ಲ ವಿವರಗಳ ಹಿಂದಿರುವ ಕಾರಣಶಕ್ತಿಯೇ ಅದು. ಅದರ ಹುಡುಕಾಟವನ್ನು ಮಾಡುವ ಎಲ್ಲ ಪ್ರಕ್ರಿಯೆಗಳೂ ಆಧ್ಯಾತ್ಮಿಕತೆ ಎನಿಸಿಕೊಳ್ಳುತ್ತವೆ.

    Reply
  3. ನಿರ್ಗುಣ ನಿರಾಕಾರ ಪರಮಾತ್ಮನನ್ನು ಅರಿಯುವ ಪ್ರಯತ್ನ ಮಾಡಿದೆವು. ಈ ಪರಮಾತ್ಮ ನಮ್ಮ ಬ್ರಹ್ಮಾಂಡದ ಮೂಲ ಆತ್ಮ, ಚೈತನ್ಯ. ಈ ಆತ್ಮ, ಈ ಚೈತನ್ಯ, ಬದಲಾಗುವುದಿಲ್ಲ, ನಾಶವಾಗುವುದಿಲ್ಲಜಾಗ್ರತ್ , ಸ್ವಪ್ನ , ಸುಷುಪ್ತಿ ಗಳೆಂಬ ಮೂರು ಅವಸ್ಥೆಗೂ ಇರುವುದು. ಈ ಅವಸ್ಥೆಗಳನ್ನು ಪರಿಶೀಲಿಸಿದರೆ .. ಆತ್ಮ ಸೂಕ್ಷ್ಮಾತಿ ಸೂಕ್ಷ್ಮ ಪ್ರಕಾಶ ಸ್ವರೂಪವೂ ಆದ ಆತ್ಮಚೈತನ್ಯ ಶಕ್ತಿ

    Reply

Leave a Reply to rathnamsjcc

Click here to cancel reply.

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ