ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

ದೀಪ್ತಿ

ಪ್ರಣವೋ ಧನುಃ ಶರೋ ಹ್ಯಾತ್ಮಾ ಬ್ರಹ್ಮ ತಲ್ಲಕ್ಷ್ಯಮುಚ್ಯತೇ |

ಅಪ್ರಮತ್ತೇನ ವೇದ್ಧವ್ಯಂ ಶರವತ್ತನ್ಮಯೋ ಭವೇತ್ ||

ಮುಂಡಕೋಪನಿಷತ್

“ಓಂಕಾರವೇ ಧನುಸ್ಸು. ಆತ್ಮನೇ ಬಾಣ. ಬ್ರಹ್ಮವೇ ಅದರ ಗುರಿ – ಎಂದು ಹೇಳಲ್ಪಟ್ಪಿದೆ. ಪ್ರಮತ್ತನಾಗದೆ (ಏಕಾಗ್ರತೆಯಿಂದ) ಗುರಿಯೆಡೆಗೆ ಹೊಡೆಯಬೇಕು. ಬಿಲ್ಲುಗಾರನು ಬಾಣದಂತೆ ತನ್ಮಯನಾಗಬೇಕು.”

ಇಲ್ಲಿ ಜೀವಾತ್ಮನೇ ಬಾಣ; ದೃಶ್ಯಪ್ರಪಂಚದೊಡನೆ ಮೈಮರೆಯದೆ ಅಂತರ್ಮುಖನಾಗಿ ಲಕ್ಷ್ಯವಾದ ಬ್ರಹ್ಮದ ಕಡೆಗೆ ಗಮನವನ್ನು ಕೇಂದ್ರೀಕರಿಸಬೇಕು – ಎಂಬುದು ಸಂಕ್ಷೇಪದಲ್ಲಿ ಮೇಲಣ ವಾಕ್ಯದ ಸೂಚನೆ.

ದುಗ್ರ್ರಾಹ್ಯ ತತ್ತ್ವಗಳನ್ನು ಸುಬೋಧಗೊಳಿಸುವುದಕ್ಕಾಗಿ ಉಪನಿಷತ್ತುಗಳಲ್ಲಿ ಆಖ್ಯಾನಗಳ ಮತ್ತು ಉಪಮೆಗಳ ಬಳಕೆಯಾಗಿದೆ. ಮನನ ಮಾಡಿದಷ್ಟೂ ಹೆಚ್ಚುಹೆಚ್ಚು ಅರ್ಥಗಳನ್ನು ಈ ಉಪಮೆಗಳು ಹೊಮ್ಮಿಸುತ್ತವೆ.

ಬಿಲ್ಲು ಎಂಬುದು ಜೀವಚೈತನ್ಯ. ಅದು ಎಲ್ಲ ಶಕ್ತಿಯ ಉಗಮಸ್ಥಾನ. ಬಾಣವು ಒಮ್ಮೆ ಬಿಲ್ಲಿನಿಂದ ಹೊರಹೋದಾಗಲೂ ಜೀವವು ಬಿಲ್ಲಿನೊಡನೆಯೇ ಇರುತ್ತದೆ. ಬಾಣವು ತನ್ನ ಕೆಲಸ ಮಾಡಬೇಕಾದರೆ ನಡುನಡುವೆ ವಿರಮಿಸಲೂಬೇಕಾಗುತ್ತದೆ; ಸದಾ ಬಿಗಿತದ ಸ್ಥಿತಿಯಲ್ಲಿ ಇರಲಾಗದು. ಹ್ರಾಸಗೊಂಡ ಶಕ್ತಿಯು ಮತ್ತೆ ಪೂರೈಕೆಯಾಗುತ್ತಿರಬೇಕು. ಅನಂತರ ಬಾಣವನ್ನೆಸೆದಾಗ ಅದರಲ್ಲಿ ಪೂರ್ಣಶಕ್ತಿ ಅನುಗೂಡಿರುತ್ತದೆ. ಇನ್ನು ಬಿಲ್ಲು ಕೂಡಾ ಸ್ವತಂತ್ರವಲ್ಲ; ಅದು ವ್ಯಕ್ತಿಯ ಕೈಯ (ಎಂದರೆ ಇಚ್ಛೆಯ) ವಿಸ್ತರಣೆಯಷ್ಟೆ. ಹೀಗೆ ವ್ಯಕ್ತಿಯ ಇಚ್ಛೆ-ಧ್ಯಾನಗಳೇ ನಿರ್ಣಾಯಕವಾದವು.

ಬಿಲ್ಲಿನಲ್ಲಿ ಒಂದಷ್ಟು ನಮ್ಯತೆ (ಬಾಗಿಸಬಲ್ಲ ಸೌಲಭ್ಯ) ಇದ್ದರೂ ಅದಕ್ಕೆ ನಿಖರ ಪರಿಮಿತಿಗಳೂ ಇರುತ್ತವೆ. ಅದರಂತೆ ಶರೀರದಿಂದ ಅದು ನಿಮಗೆ ಎಷ್ಟನ್ನು ಕೊಡಬಲ್ಲದೋ ಅದಕ್ಕಿಂತ ಹೆಚ್ಚಿನದನ್ನು ಅಪೇಕ್ಷಿಸಬಾರದು. ಬಿಲ್ಲನ್ನು ಅನಾವಶ್ಯಕವಾಗಿ ಆಯಾಸಗೊಳಿಸದಿದ್ದಲ್ಲಿ ಹೆಚ್ಚಿನ ಬಾಣಗಳನ್ನು ಗುರಿಗಳತ್ತ ಎಸೆಯಲು ಸಾಧ್ಯವಾಗುತ್ತದೆ.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ