ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

ದೀಪ್ತಿ

ನಮಂತಿ ಫಲಿತಾ ವೃಕ್ಷಾ ನಮಂತಿ ಚ ಬುಧಾ ಜನಾಃ|

ಶುಷ್ಕಕಾಷ್ಠಾನಿ ಮೂರ್ಖಾಶ್ಚ ಭಿದ್ಯಂತೇ ನ ನಮಂತಿ ಚ||

– ಸುಭಾಷಿತಸುಧಾನಿಧಿ

“ಕೊಂಬೆಗಳ ತುಂಬಾ ಹಣ್ಣು ಬಿಟ್ಟ ಮರಗಳು ಬಾಗುತ್ತವೆ. ಜ್ಞಾನಿಗಳಾದ ಜನರು ವಿನಯದಿಂದ ಬಾಗಿ ನಡೆಯುತ್ತಾರೆ. ಆದರೆ ಒಣಗಿದ ಮರಗಳೂ ಮೂರ್ಖರೂ ಸೆಟೆದುಕೊಂಡಿರುವ ಕಾರಣ ಬಾಗುವುದಿಲ್ಲ; ಅಂತಹವರ ಮೊಂಡುತನ ಖಂಡನೆಗೊಳಗಾಗುತ್ತದೆ.”

ನಮ್ರತೆಯಿಂದ ಬಾಗಿ ನಡೆಯುವವರು ಎಲ್ಲರ ಆದರಣೆಗೆ ಪಾತ್ರರಾಗುತ್ತಾರೆ. ದುರಹಂಕಾರದಿಂದ ಮೆರೆಯುವ ಅಭ್ಯಾಸ ಮಾಡಿಕೊಂಡವರು ಉಳಿದವರ ತಾತ್ಸಾರಕ್ಕೆ ಗುರಿಯಾಗುತ್ತಾರೆ.

ವಿನಯಪೂರ್ವಕ ವರ್ತನೆಯನ್ನೂ ಮೆದುಮಾತನ್ನೂ ಇತರರು ದೌರ್ಬಲ್ಯವೆಂದುಕೊಂಡಾರು – ಎಂಬ ಭ್ರಮೆ ಹಲವರನ್ನು ಕರ್ಕಶರಾಗಿಸಿಬಿಡುತ್ತದೆ. ವಾಸ್ತವವೆಂದರೆ ಮಾರ್ದವವು ದೌರ್ಬಲ್ಯವಲ್ಲ, ಗಡಸುತನವು ದಾಢ್ರ್ಯವೂ ಅಲ್ಲ.

ಈ ತತ್ತ್ವವನ್ನು ಪ್ರಕಾಶಪಡಿಸಲು ದಾರ್ಶನಿಕ ವಾಙ್ಮಯದಲ್ಲಿ ಒಂದು ದೃಷ್ಟಾಂತವು ಪ್ರಚಲಿತವಿದೆ. ಬಾಯಿಯಲ್ಲಿರುವ ನಾಲಗೆ ದೇಹದ ಜನನದೊಡನೆಯೇ ಬಂದದ್ದು. ಬಾಯಿಯೊಳಕ್ಕೆ ಹಲ್ಲುಗಳ ಸೇರ್ಪಡೆಯಾಗುವುದು ಎಷ್ಟೋ ಕಾಲದ ತರುವಾಯ. ಶರೀರಕ್ಕೆ ಮುಪ್ಪು ಬರುತ್ತಿದ್ದ ಹಾಗೆ ಹಲ್ಲುಗಳು ಒಂದೊಂದಾಗಿ ಉದುರುತ್ತ ಹೋಗುತ್ತವೆ. ಆದರೆ ನಾಲಗೆ ಮಾತ್ರ – ಅದು ಕಾಲಮಾನದಲ್ಲಿ ಹಿರಿಯದಾದರೂ – ದೇಹಾಂತದವರೆಗೆ ಏಕರೀತಿಯಲ್ಲಿ ಉಳಿದಿರುತ್ತದೆ. ರಚನೆಯನ್ನು ನೋಡುವುದಾದರೆ ನಾಲಗೆ ಮೃದುವಾದದ್ದು, ಹಲ್ಲುಗಳು ಕಲ್ಲಿನಂತೆ ಗಡಸಾದವು. ಆದರೆ ಗಡಸಾದ ಹಲ್ಲುಗಳದಕ್ಕಿಂತ ಮೆದುವಾದದ್ದೂ ಹಳೆಯದೂ ಆದ ನಾಲಗೆಯ ಆಯುರ್ಮಾನವೇ ಹೆಚ್ಚು!

ಬಿರುಗಾಳಿ ಬೀಸಿದಾಗ ದೈತ್ಯಗಾತ್ರದ ಮರ ಧರಾಶಾಯಿಯಾಗುತ್ತದೆ; ಆದರೆ ಲಘುಗಾತ್ರದ ನಮ್ರವಾದ ಹುಲ್ಲು ತತ್ಕಾಲಕ್ಕೆ ಗಾಳಿಗೆ ಬಾಗಿದರೂ ಅಲ್ಪಕಾಲದ ತರುವಾಯ ಮತ್ತೆ ಚಿಗುರುತ್ತದೆ. ನಮ್ರತೆಯ ಗುಣವತ್ತತೆ ಈ ಬಗೆಯದು.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ